ಬಸ್‌ನಲ್ಲೇ ಪ್ರೇಮಪಾಠ ಮಾಡಿದ ಬಿಎಂಟಿಸಿ ಕಂಡಕ್ಟರ್, ಯುವತಿ ಹೊಟ್ಟೆಯೊಳಗೆ ಪ್ರೀತಿಯ ಕಾಣಿಕೆ ಬಿಟ್ಟು ಪರಾರಿ!

ಬಸ್‌ನಲ್ಲೇ ಪ್ರೇಮಪಾಠ ಮಾಡಿದ ಬಿಎಂಟಿಸಿ ಕಂಡಕ್ಟರ್, ಯುವತಿ ಹೊಟ್ಟೆಯೊಳಗೆ ಪ್ರೀತಿಯ ಕಾಣಿಕೆ ಬಿಟ್ಟು ಪರಾರಿ!

Published : Jan 16, 2025, 09:00 PM IST

ಪ್ರತಿದಿನ ಬಸ್ಸಿನಲ್ಲಿ ಓಡಾಡುತ್ತಿದ್ದ ಮಹಿಳೆಯೊಬ್ಬರು ಬಿಎಂಟಿಸಿ ಕಂಡಕ್ಟರ್‌ನಿಂದ ಮೋಸ ಹೋಗಿದ್ದಾರೆ. ಕಂಡಕ್ಟರ್ ಆಕೆಯನ್ನು ಬಳಸಿಕೊಂಡು ಗರ್ಭಿಣಿಯನ್ನಾಗಿಸಿ ಪರಾರಿಯಾಗಿದ್ದಾನೆ. ಮಹಿಳೆ ಪೊಲೀಸ್ ಠಾಣೆಯಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.

ಅವಳು ಒಂಟಿ ಜೀವನ ನಡೆಸುತ್ತಿದ್ದ ದಿಟ್ಟ ಮಹಿಳೆ. ಕಳೆದ 5 ವರ್ಷದ ಹಿಂದೆ ತನಗಿಂತ ವಯಸ್ಸಿನಲ್ಲಿ 15 ವರ್ಷ ಹಿರಿಯನಾದ ವ್ಯಕ್ತಿಯನ್ನು ಕುಟುಂಬದವರ ಬಲವಂತಕ್ಕೆ ಮಣಿದು ಮದುವೆಯಾಗಿದ್ದಳು. ಆದರೆ ಹೊಂದಾಣಿಕೆ ಕೊರತೆಯಿಂದ ಕಳೆದ 3 ವರ್ಷದ ಹಿಂದೆ ಡಿವೋರ್ಸ್​ ತೆಗೆದುಕೊಂಡಿದ್ದಳು. ಇದೀಗ ಇದೇ ಮಹಿಳೆ ನನಗೆ ಮೋಸವಾಗಿದೆ, ನನ್ನ ಹೊಟ್ಟೆಯಲ್ಲಿ ನನ್ನ ಮಗು ಇದೆ. ನನ್ನನ್ನ ನಂಬಿಸಿ ಮೋಸ ಮಾಡಲಾಗಿದೆ ಅಂತ ಬಂದು ಪೊಲೀಸ್​ ಠಾಣೆ ಎದುರು ಕಾಣ್ಣೀರು ಹಾಕುತ್ತಾ ನಿಂತಿದ್ದಾಳೆ. ಅಷ್ಟಕ್ಕೂ ಮೊದಲ ಮದುವೆ ಮುರಿದ  ಮೇಲೆ ಈಕೆ ಲೈಫ್‌ಗೆ ಎಂಟ್ರಿ ಕೊಟ್ಟವನು ಬಿಎಂಟಿಸಿ ಬಸ್ ಕಂಡಕ್ಟರ್. ಆಕೆ ಅವನಿಂದ ಮೋಸ ಹೋಗಿದ್ದು ಹೇಗೆ.? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ..

ಬಿಎಂಟಿಸಿ ಬಸ್‌ನಲ್ಲಿ ಪ್ರತಿನಿತ್ಯ ಲಕ್ಷಾಂತರ ಬಾಲಕಿಯರು, ಯುವತಿಯರು, ಮಹಿಳೆಯರು ಸಂಚಾರ ಮಾಡುತ್ತಾರೆ. ಆದರೆ, ಬಸ್​​ ಹತ್ತೋ ಹೆಣ್ಣುಮಕ್ಕಳ ವೀಕ್‌ನೆಸ್​ ಅನ್ನೇ ಬಳಸಿಕೊಳ್ಳುವ ಚಾಲಿ ಹೊಂದಿದ್ದ ಕಂಡಕ್ಟರ್ ಇಲ್ಲಿ ಗಂಡನಿಂದ ಡಿವೋರ್ಸ್ ಪಡೆದು ಒಬ್ಬಂಟಿಯಾಗಿದ್ದ ಮಹಿಳೆಯ ಬಾಳಿಗೆ ಬೆಳಕಾಗುವ ಭರವಸೆ ನೀಡಿದ್ದಾನೆ. ನಂತರ, ಈಕೆಯನ್ನು ಕರೆದುಕೊಂಡು ಎಲ್ಲೆಡೆ ಸುತ್ತಾಡಿದ್ದಾನೆ. ಮಾತಿನಲ್ಲಿಯೇ ಮನೆ ಕಟ್ಟಿ, ಆಕಾಶ ಗೋಪುರವನ್ನು ಹತ್ತಿಸಿ ಚಂದಮಾಮನನ್ನು ತೋರಿಸಿದ್ದಾನೆ.

ನಂತರ, ಬಣ್ಣದ ಮಾತನಾಡಿ ದೈಹಿಕವಾಗಿಯೂ ಆಕೆಯನ್ನು ಬಳಸಿಕೊಂಡಿದ್ದಾನೆ. ಇನ್ನೇನು ಮಹಿಳೆ ಗರ್ಭಿಣಿ ಆಗುತ್ತಿದ್ದಂತೆ ಆಕೆಗೆ ಕೈಕೊಟ್ಟು ಪರಾರರಿ ಆಗಿದ್ದಾನೆ. ಆತನ ಪೂರ್ವಾಪರ ವಿಚಾರಣೆ ಮಾಡಿದರೆ, ಆತನಿಗೆ ಈಗಾಗಲೇ ಮದುವೆಯೂ ಆಗಿದ್ದು, ಇಲ್ಲಿ ಬೆಂಗಳೂರಿನ ಯುವತಿಗೆ ಮೋಸ ಮಾಡಿ, ಆಕೆಯ ಮಡಿಲಿಗೆ ಮಗುವನ್ನು ಕರುಣಿಸಿ ಓಡಿ ಹೋಗಿದ್ದಾನೆ. ಮಹಿಳೆಯರ ವೀಕ್ನೆಸ್ ತಿಳಿದು ಮೋಸ ಮಾಡುವ ಮಂಜುನಾಥ ನಂತಹ ಕಂಡಕ್ಟರ್‌ಗಳು ತುಂಬಾ ಮಂದಿ ಇದ್ದಾರೆ. ಇಂಥವರಿಗೆ ತಕ್ಕ ಪಾಠವಾಗಬೇಕಾದರೆ ಈ ಮಂಜುನಾಥನಿಗೆ ಶಿಕ್ಷೆಯಾಗಬೇಕು. ಆದರೆ ಮಹಿಳೆ ತನಗೆ ಮಂಜುನಾಥ ಬೇಕು ಆಗ್ರಹಿಸಿದ್ದಾಳೆ.

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more