ಬಸ್‌ನಲ್ಲೇ ಪ್ರೇಮಪಾಠ ಮಾಡಿದ ಬಿಎಂಟಿಸಿ ಕಂಡಕ್ಟರ್, ಯುವತಿ ಹೊಟ್ಟೆಯೊಳಗೆ ಪ್ರೀತಿಯ ಕಾಣಿಕೆ ಬಿಟ್ಟು ಪರಾರಿ!

ಬಸ್‌ನಲ್ಲೇ ಪ್ರೇಮಪಾಠ ಮಾಡಿದ ಬಿಎಂಟಿಸಿ ಕಂಡಕ್ಟರ್, ಯುವತಿ ಹೊಟ್ಟೆಯೊಳಗೆ ಪ್ರೀತಿಯ ಕಾಣಿಕೆ ಬಿಟ್ಟು ಪರಾರಿ!

Published : Jan 16, 2025, 09:00 PM IST

ಪ್ರತಿದಿನ ಬಸ್ಸಿನಲ್ಲಿ ಓಡಾಡುತ್ತಿದ್ದ ಮಹಿಳೆಯೊಬ್ಬರು ಬಿಎಂಟಿಸಿ ಕಂಡಕ್ಟರ್‌ನಿಂದ ಮೋಸ ಹೋಗಿದ್ದಾರೆ. ಕಂಡಕ್ಟರ್ ಆಕೆಯನ್ನು ಬಳಸಿಕೊಂಡು ಗರ್ಭಿಣಿಯನ್ನಾಗಿಸಿ ಪರಾರಿಯಾಗಿದ್ದಾನೆ. ಮಹಿಳೆ ಪೊಲೀಸ್ ಠಾಣೆಯಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.

ಅವಳು ಒಂಟಿ ಜೀವನ ನಡೆಸುತ್ತಿದ್ದ ದಿಟ್ಟ ಮಹಿಳೆ. ಕಳೆದ 5 ವರ್ಷದ ಹಿಂದೆ ತನಗಿಂತ ವಯಸ್ಸಿನಲ್ಲಿ 15 ವರ್ಷ ಹಿರಿಯನಾದ ವ್ಯಕ್ತಿಯನ್ನು ಕುಟುಂಬದವರ ಬಲವಂತಕ್ಕೆ ಮಣಿದು ಮದುವೆಯಾಗಿದ್ದಳು. ಆದರೆ ಹೊಂದಾಣಿಕೆ ಕೊರತೆಯಿಂದ ಕಳೆದ 3 ವರ್ಷದ ಹಿಂದೆ ಡಿವೋರ್ಸ್​ ತೆಗೆದುಕೊಂಡಿದ್ದಳು. ಇದೀಗ ಇದೇ ಮಹಿಳೆ ನನಗೆ ಮೋಸವಾಗಿದೆ, ನನ್ನ ಹೊಟ್ಟೆಯಲ್ಲಿ ನನ್ನ ಮಗು ಇದೆ. ನನ್ನನ್ನ ನಂಬಿಸಿ ಮೋಸ ಮಾಡಲಾಗಿದೆ ಅಂತ ಬಂದು ಪೊಲೀಸ್​ ಠಾಣೆ ಎದುರು ಕಾಣ್ಣೀರು ಹಾಕುತ್ತಾ ನಿಂತಿದ್ದಾಳೆ. ಅಷ್ಟಕ್ಕೂ ಮೊದಲ ಮದುವೆ ಮುರಿದ  ಮೇಲೆ ಈಕೆ ಲೈಫ್‌ಗೆ ಎಂಟ್ರಿ ಕೊಟ್ಟವನು ಬಿಎಂಟಿಸಿ ಬಸ್ ಕಂಡಕ್ಟರ್. ಆಕೆ ಅವನಿಂದ ಮೋಸ ಹೋಗಿದ್ದು ಹೇಗೆ.? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ..

ಬಿಎಂಟಿಸಿ ಬಸ್‌ನಲ್ಲಿ ಪ್ರತಿನಿತ್ಯ ಲಕ್ಷಾಂತರ ಬಾಲಕಿಯರು, ಯುವತಿಯರು, ಮಹಿಳೆಯರು ಸಂಚಾರ ಮಾಡುತ್ತಾರೆ. ಆದರೆ, ಬಸ್​​ ಹತ್ತೋ ಹೆಣ್ಣುಮಕ್ಕಳ ವೀಕ್‌ನೆಸ್​ ಅನ್ನೇ ಬಳಸಿಕೊಳ್ಳುವ ಚಾಲಿ ಹೊಂದಿದ್ದ ಕಂಡಕ್ಟರ್ ಇಲ್ಲಿ ಗಂಡನಿಂದ ಡಿವೋರ್ಸ್ ಪಡೆದು ಒಬ್ಬಂಟಿಯಾಗಿದ್ದ ಮಹಿಳೆಯ ಬಾಳಿಗೆ ಬೆಳಕಾಗುವ ಭರವಸೆ ನೀಡಿದ್ದಾನೆ. ನಂತರ, ಈಕೆಯನ್ನು ಕರೆದುಕೊಂಡು ಎಲ್ಲೆಡೆ ಸುತ್ತಾಡಿದ್ದಾನೆ. ಮಾತಿನಲ್ಲಿಯೇ ಮನೆ ಕಟ್ಟಿ, ಆಕಾಶ ಗೋಪುರವನ್ನು ಹತ್ತಿಸಿ ಚಂದಮಾಮನನ್ನು ತೋರಿಸಿದ್ದಾನೆ.

ನಂತರ, ಬಣ್ಣದ ಮಾತನಾಡಿ ದೈಹಿಕವಾಗಿಯೂ ಆಕೆಯನ್ನು ಬಳಸಿಕೊಂಡಿದ್ದಾನೆ. ಇನ್ನೇನು ಮಹಿಳೆ ಗರ್ಭಿಣಿ ಆಗುತ್ತಿದ್ದಂತೆ ಆಕೆಗೆ ಕೈಕೊಟ್ಟು ಪರಾರರಿ ಆಗಿದ್ದಾನೆ. ಆತನ ಪೂರ್ವಾಪರ ವಿಚಾರಣೆ ಮಾಡಿದರೆ, ಆತನಿಗೆ ಈಗಾಗಲೇ ಮದುವೆಯೂ ಆಗಿದ್ದು, ಇಲ್ಲಿ ಬೆಂಗಳೂರಿನ ಯುವತಿಗೆ ಮೋಸ ಮಾಡಿ, ಆಕೆಯ ಮಡಿಲಿಗೆ ಮಗುವನ್ನು ಕರುಣಿಸಿ ಓಡಿ ಹೋಗಿದ್ದಾನೆ. ಮಹಿಳೆಯರ ವೀಕ್ನೆಸ್ ತಿಳಿದು ಮೋಸ ಮಾಡುವ ಮಂಜುನಾಥ ನಂತಹ ಕಂಡಕ್ಟರ್‌ಗಳು ತುಂಬಾ ಮಂದಿ ಇದ್ದಾರೆ. ಇಂಥವರಿಗೆ ತಕ್ಕ ಪಾಠವಾಗಬೇಕಾದರೆ ಈ ಮಂಜುನಾಥನಿಗೆ ಶಿಕ್ಷೆಯಾಗಬೇಕು. ಆದರೆ ಮಹಿಳೆ ತನಗೆ ಮಂಜುನಾಥ ಬೇಕು ಆಗ್ರಹಿಸಿದ್ದಾಳೆ.

27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
Read more