ಬಸ್‌ನಲ್ಲೇ ಪ್ರೇಮಪಾಠ ಮಾಡಿದ ಬಿಎಂಟಿಸಿ ಕಂಡಕ್ಟರ್, ಯುವತಿ ಹೊಟ್ಟೆಯೊಳಗೆ ಪ್ರೀತಿಯ ಕಾಣಿಕೆ ಬಿಟ್ಟು ಪರಾರಿ!

ಬಸ್‌ನಲ್ಲೇ ಪ್ರೇಮಪಾಠ ಮಾಡಿದ ಬಿಎಂಟಿಸಿ ಕಂಡಕ್ಟರ್, ಯುವತಿ ಹೊಟ್ಟೆಯೊಳಗೆ ಪ್ರೀತಿಯ ಕಾಣಿಕೆ ಬಿಟ್ಟು ಪರಾರಿ!

Published : Jan 16, 2025, 09:00 PM IST

ಪ್ರತಿದಿನ ಬಸ್ಸಿನಲ್ಲಿ ಓಡಾಡುತ್ತಿದ್ದ ಮಹಿಳೆಯೊಬ್ಬರು ಬಿಎಂಟಿಸಿ ಕಂಡಕ್ಟರ್‌ನಿಂದ ಮೋಸ ಹೋಗಿದ್ದಾರೆ. ಕಂಡಕ್ಟರ್ ಆಕೆಯನ್ನು ಬಳಸಿಕೊಂಡು ಗರ್ಭಿಣಿಯನ್ನಾಗಿಸಿ ಪರಾರಿಯಾಗಿದ್ದಾನೆ. ಮಹಿಳೆ ಪೊಲೀಸ್ ಠಾಣೆಯಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.

ಅವಳು ಒಂಟಿ ಜೀವನ ನಡೆಸುತ್ತಿದ್ದ ದಿಟ್ಟ ಮಹಿಳೆ. ಕಳೆದ 5 ವರ್ಷದ ಹಿಂದೆ ತನಗಿಂತ ವಯಸ್ಸಿನಲ್ಲಿ 15 ವರ್ಷ ಹಿರಿಯನಾದ ವ್ಯಕ್ತಿಯನ್ನು ಕುಟುಂಬದವರ ಬಲವಂತಕ್ಕೆ ಮಣಿದು ಮದುವೆಯಾಗಿದ್ದಳು. ಆದರೆ ಹೊಂದಾಣಿಕೆ ಕೊರತೆಯಿಂದ ಕಳೆದ 3 ವರ್ಷದ ಹಿಂದೆ ಡಿವೋರ್ಸ್​ ತೆಗೆದುಕೊಂಡಿದ್ದಳು. ಇದೀಗ ಇದೇ ಮಹಿಳೆ ನನಗೆ ಮೋಸವಾಗಿದೆ, ನನ್ನ ಹೊಟ್ಟೆಯಲ್ಲಿ ನನ್ನ ಮಗು ಇದೆ. ನನ್ನನ್ನ ನಂಬಿಸಿ ಮೋಸ ಮಾಡಲಾಗಿದೆ ಅಂತ ಬಂದು ಪೊಲೀಸ್​ ಠಾಣೆ ಎದುರು ಕಾಣ್ಣೀರು ಹಾಕುತ್ತಾ ನಿಂತಿದ್ದಾಳೆ. ಅಷ್ಟಕ್ಕೂ ಮೊದಲ ಮದುವೆ ಮುರಿದ  ಮೇಲೆ ಈಕೆ ಲೈಫ್‌ಗೆ ಎಂಟ್ರಿ ಕೊಟ್ಟವನು ಬಿಎಂಟಿಸಿ ಬಸ್ ಕಂಡಕ್ಟರ್. ಆಕೆ ಅವನಿಂದ ಮೋಸ ಹೋಗಿದ್ದು ಹೇಗೆ.? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ..

ಬಿಎಂಟಿಸಿ ಬಸ್‌ನಲ್ಲಿ ಪ್ರತಿನಿತ್ಯ ಲಕ್ಷಾಂತರ ಬಾಲಕಿಯರು, ಯುವತಿಯರು, ಮಹಿಳೆಯರು ಸಂಚಾರ ಮಾಡುತ್ತಾರೆ. ಆದರೆ, ಬಸ್​​ ಹತ್ತೋ ಹೆಣ್ಣುಮಕ್ಕಳ ವೀಕ್‌ನೆಸ್​ ಅನ್ನೇ ಬಳಸಿಕೊಳ್ಳುವ ಚಾಲಿ ಹೊಂದಿದ್ದ ಕಂಡಕ್ಟರ್ ಇಲ್ಲಿ ಗಂಡನಿಂದ ಡಿವೋರ್ಸ್ ಪಡೆದು ಒಬ್ಬಂಟಿಯಾಗಿದ್ದ ಮಹಿಳೆಯ ಬಾಳಿಗೆ ಬೆಳಕಾಗುವ ಭರವಸೆ ನೀಡಿದ್ದಾನೆ. ನಂತರ, ಈಕೆಯನ್ನು ಕರೆದುಕೊಂಡು ಎಲ್ಲೆಡೆ ಸುತ್ತಾಡಿದ್ದಾನೆ. ಮಾತಿನಲ್ಲಿಯೇ ಮನೆ ಕಟ್ಟಿ, ಆಕಾಶ ಗೋಪುರವನ್ನು ಹತ್ತಿಸಿ ಚಂದಮಾಮನನ್ನು ತೋರಿಸಿದ್ದಾನೆ.

ನಂತರ, ಬಣ್ಣದ ಮಾತನಾಡಿ ದೈಹಿಕವಾಗಿಯೂ ಆಕೆಯನ್ನು ಬಳಸಿಕೊಂಡಿದ್ದಾನೆ. ಇನ್ನೇನು ಮಹಿಳೆ ಗರ್ಭಿಣಿ ಆಗುತ್ತಿದ್ದಂತೆ ಆಕೆಗೆ ಕೈಕೊಟ್ಟು ಪರಾರರಿ ಆಗಿದ್ದಾನೆ. ಆತನ ಪೂರ್ವಾಪರ ವಿಚಾರಣೆ ಮಾಡಿದರೆ, ಆತನಿಗೆ ಈಗಾಗಲೇ ಮದುವೆಯೂ ಆಗಿದ್ದು, ಇಲ್ಲಿ ಬೆಂಗಳೂರಿನ ಯುವತಿಗೆ ಮೋಸ ಮಾಡಿ, ಆಕೆಯ ಮಡಿಲಿಗೆ ಮಗುವನ್ನು ಕರುಣಿಸಿ ಓಡಿ ಹೋಗಿದ್ದಾನೆ. ಮಹಿಳೆಯರ ವೀಕ್ನೆಸ್ ತಿಳಿದು ಮೋಸ ಮಾಡುವ ಮಂಜುನಾಥ ನಂತಹ ಕಂಡಕ್ಟರ್‌ಗಳು ತುಂಬಾ ಮಂದಿ ಇದ್ದಾರೆ. ಇಂಥವರಿಗೆ ತಕ್ಕ ಪಾಠವಾಗಬೇಕಾದರೆ ಈ ಮಂಜುನಾಥನಿಗೆ ಶಿಕ್ಷೆಯಾಗಬೇಕು. ಆದರೆ ಮಹಿಳೆ ತನಗೆ ಮಂಜುನಾಥ ಬೇಕು ಆಗ್ರಹಿಸಿದ್ದಾಳೆ.

01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
07:24ಪತ್ನಿಯ ಶೀಲ ಶಂಕಿಸಿ ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಭೀಕರ ಹತ್ಯೆ; 'ಹಾರ್ಟ್ ಅಟ್ಯಾಕ್' ಎಂದಿದ್ದ ಪತಿಯ ಬಣ್ಣ ಬಯಲು!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
Read more