ಬಸ್‌ನಲ್ಲೇ ಪ್ರೇಮಪಾಠ ಮಾಡಿದ ಬಿಎಂಟಿಸಿ ಕಂಡಕ್ಟರ್, ಯುವತಿ ಹೊಟ್ಟೆಯೊಳಗೆ ಪ್ರೀತಿಯ ಕಾಣಿಕೆ ಬಿಟ್ಟು ಪರಾರಿ!

ಬಸ್‌ನಲ್ಲೇ ಪ್ರೇಮಪಾಠ ಮಾಡಿದ ಬಿಎಂಟಿಸಿ ಕಂಡಕ್ಟರ್, ಯುವತಿ ಹೊಟ್ಟೆಯೊಳಗೆ ಪ್ರೀತಿಯ ಕಾಣಿಕೆ ಬಿಟ್ಟು ಪರಾರಿ!

Published : Jan 16, 2025, 09:00 PM IST

ಪ್ರತಿದಿನ ಬಸ್ಸಿನಲ್ಲಿ ಓಡಾಡುತ್ತಿದ್ದ ಮಹಿಳೆಯೊಬ್ಬರು ಬಿಎಂಟಿಸಿ ಕಂಡಕ್ಟರ್‌ನಿಂದ ಮೋಸ ಹೋಗಿದ್ದಾರೆ. ಕಂಡಕ್ಟರ್ ಆಕೆಯನ್ನು ಬಳಸಿಕೊಂಡು ಗರ್ಭಿಣಿಯನ್ನಾಗಿಸಿ ಪರಾರಿಯಾಗಿದ್ದಾನೆ. ಮಹಿಳೆ ಪೊಲೀಸ್ ಠಾಣೆಯಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.

ಅವಳು ಒಂಟಿ ಜೀವನ ನಡೆಸುತ್ತಿದ್ದ ದಿಟ್ಟ ಮಹಿಳೆ. ಕಳೆದ 5 ವರ್ಷದ ಹಿಂದೆ ತನಗಿಂತ ವಯಸ್ಸಿನಲ್ಲಿ 15 ವರ್ಷ ಹಿರಿಯನಾದ ವ್ಯಕ್ತಿಯನ್ನು ಕುಟುಂಬದವರ ಬಲವಂತಕ್ಕೆ ಮಣಿದು ಮದುವೆಯಾಗಿದ್ದಳು. ಆದರೆ ಹೊಂದಾಣಿಕೆ ಕೊರತೆಯಿಂದ ಕಳೆದ 3 ವರ್ಷದ ಹಿಂದೆ ಡಿವೋರ್ಸ್​ ತೆಗೆದುಕೊಂಡಿದ್ದಳು. ಇದೀಗ ಇದೇ ಮಹಿಳೆ ನನಗೆ ಮೋಸವಾಗಿದೆ, ನನ್ನ ಹೊಟ್ಟೆಯಲ್ಲಿ ನನ್ನ ಮಗು ಇದೆ. ನನ್ನನ್ನ ನಂಬಿಸಿ ಮೋಸ ಮಾಡಲಾಗಿದೆ ಅಂತ ಬಂದು ಪೊಲೀಸ್​ ಠಾಣೆ ಎದುರು ಕಾಣ್ಣೀರು ಹಾಕುತ್ತಾ ನಿಂತಿದ್ದಾಳೆ. ಅಷ್ಟಕ್ಕೂ ಮೊದಲ ಮದುವೆ ಮುರಿದ  ಮೇಲೆ ಈಕೆ ಲೈಫ್‌ಗೆ ಎಂಟ್ರಿ ಕೊಟ್ಟವನು ಬಿಎಂಟಿಸಿ ಬಸ್ ಕಂಡಕ್ಟರ್. ಆಕೆ ಅವನಿಂದ ಮೋಸ ಹೋಗಿದ್ದು ಹೇಗೆ.? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ..

ಬಿಎಂಟಿಸಿ ಬಸ್‌ನಲ್ಲಿ ಪ್ರತಿನಿತ್ಯ ಲಕ್ಷಾಂತರ ಬಾಲಕಿಯರು, ಯುವತಿಯರು, ಮಹಿಳೆಯರು ಸಂಚಾರ ಮಾಡುತ್ತಾರೆ. ಆದರೆ, ಬಸ್​​ ಹತ್ತೋ ಹೆಣ್ಣುಮಕ್ಕಳ ವೀಕ್‌ನೆಸ್​ ಅನ್ನೇ ಬಳಸಿಕೊಳ್ಳುವ ಚಾಲಿ ಹೊಂದಿದ್ದ ಕಂಡಕ್ಟರ್ ಇಲ್ಲಿ ಗಂಡನಿಂದ ಡಿವೋರ್ಸ್ ಪಡೆದು ಒಬ್ಬಂಟಿಯಾಗಿದ್ದ ಮಹಿಳೆಯ ಬಾಳಿಗೆ ಬೆಳಕಾಗುವ ಭರವಸೆ ನೀಡಿದ್ದಾನೆ. ನಂತರ, ಈಕೆಯನ್ನು ಕರೆದುಕೊಂಡು ಎಲ್ಲೆಡೆ ಸುತ್ತಾಡಿದ್ದಾನೆ. ಮಾತಿನಲ್ಲಿಯೇ ಮನೆ ಕಟ್ಟಿ, ಆಕಾಶ ಗೋಪುರವನ್ನು ಹತ್ತಿಸಿ ಚಂದಮಾಮನನ್ನು ತೋರಿಸಿದ್ದಾನೆ.

ನಂತರ, ಬಣ್ಣದ ಮಾತನಾಡಿ ದೈಹಿಕವಾಗಿಯೂ ಆಕೆಯನ್ನು ಬಳಸಿಕೊಂಡಿದ್ದಾನೆ. ಇನ್ನೇನು ಮಹಿಳೆ ಗರ್ಭಿಣಿ ಆಗುತ್ತಿದ್ದಂತೆ ಆಕೆಗೆ ಕೈಕೊಟ್ಟು ಪರಾರರಿ ಆಗಿದ್ದಾನೆ. ಆತನ ಪೂರ್ವಾಪರ ವಿಚಾರಣೆ ಮಾಡಿದರೆ, ಆತನಿಗೆ ಈಗಾಗಲೇ ಮದುವೆಯೂ ಆಗಿದ್ದು, ಇಲ್ಲಿ ಬೆಂಗಳೂರಿನ ಯುವತಿಗೆ ಮೋಸ ಮಾಡಿ, ಆಕೆಯ ಮಡಿಲಿಗೆ ಮಗುವನ್ನು ಕರುಣಿಸಿ ಓಡಿ ಹೋಗಿದ್ದಾನೆ. ಮಹಿಳೆಯರ ವೀಕ್ನೆಸ್ ತಿಳಿದು ಮೋಸ ಮಾಡುವ ಮಂಜುನಾಥ ನಂತಹ ಕಂಡಕ್ಟರ್‌ಗಳು ತುಂಬಾ ಮಂದಿ ಇದ್ದಾರೆ. ಇಂಥವರಿಗೆ ತಕ್ಕ ಪಾಠವಾಗಬೇಕಾದರೆ ಈ ಮಂಜುನಾಥನಿಗೆ ಶಿಕ್ಷೆಯಾಗಬೇಕು. ಆದರೆ ಮಹಿಳೆ ತನಗೆ ಮಂಜುನಾಥ ಬೇಕು ಆಗ್ರಹಿಸಿದ್ದಾಳೆ.

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more