ಒಬ್ಬನೇ ರೋಗಿಯಿಂದ ಬರೋಬ್ಬರಿ 250 ಜನರಿಗೆ ಸಂಕಷ್ಟ| ಬೊಮ್ಮನಹಳ್ಳಿಯ ಸ್ಲಂನಲ್ಲಿ ಬಿಹಾರ ಮೂಲದ 150 ಮಂದಿ ವಾಸಿಸುತ್ತಿದ್ದರು| ಇದರಲ್ಲಿ ಒಬ್ಬ ವ್ಯಕ್ತಿಗೆ ಕೊರೋನಾ ಸೊಂಕು ತಗುಲಿದೆ| ಇದರಿಂದ ಸ್ಲಂನಲ್ಲಿ ವಾಸಿಸುತ್ತಿದ್ದ ಎಲ್ಲರಿಗೂ ಭಯ|
ಬೆಂಗಳೂರು(ಏ.23): ಕೊರೋನಾ ಸೋಂಕಿನಿಂದ ಬೆಂಗಳೂರು ಅಕ್ಷರಶಃ ನಲುಗಿ ಹೋಗುತ್ತಿದೆ. ಹೌದು, ಕೇವಲ ಒಬ್ಬನೇ ರೋಗಿಯಿಂದ ಬರೋಬ್ಬರಿ 250 ಜನರಿಗೆ ಸಂಕಷ್ಟ ಎದುರಾಗಿದೆ. ನಗರದ ಬೊಮ್ಮನಹಳ್ಳಿಯ ಸ್ಲಂನಲ್ಲಿ ಬಿಹಾರ ಮೂಲದ 150 ಮಂದಿ ವಾಸಿಸುತ್ತಿದ್ದರು. ಇದರಲ್ಲಿ ಒಬ್ಬ ವ್ಯಕ್ತಿಗೆ ಕೊರೋನಾ ಸೊಂಕು ತಗುಲಿದೆ. ಇದರಿಂದ ಇಲ್ಲಿ ವಾಸಿಸುತ್ತಿದ್ದ ಎಲ್ಲರಿಗೂ ಭಯ ಆರಂಭವಾಗಿದೆ.
ಪ್ರಧಾನಿ ಮೋದಿ ತವರು ರಾಜ್ಯದಲ್ಲಿ ಹಿಡಿತಕ್ಕೆ ಸಿಗದ ಕೊರೋನಾ, 2ನೇ ಸ್ಥಾನದಲ್ಲಿ ಗುಜರಾತ್
ಸೋಂಕಿತ ಈ ಪ್ರದೇಶಲ್ಲಿ ಕಳೆದ ಎರಡು ತಿಂಗಳಿಂದ ಕೆಲಸ ಮಾಡುತ್ತಿದ್ದ. ಈತ ಪ್ರಾಥಮಿಕವಾಗಿ 80 ಮಂದಿಯನ್ನ ಸಂಪರ್ಕಿಸಿದ್ದ ಎಂದು ಮಾಹಿತಿ ಲಭ್ಯವಾಗಿದೆ. ಇನ್ನು ದ್ವಿತೀಯ ಸಂಪರ್ಕದಲ್ಲಿ 200 ಕ್ಕೂ ಹೆಚ್ಚುನ ಮಂದಿ ಜನ ಇದ್ದರು ಎಂದು ತಿಳಿದು ಬಂದಿದೆ.