ಮೈಸೂರು ದಸರಾಗೆ ಅಶ್ವತ್ಥಾಮ ಎಂಟ್ರಿ?

ಮೈಸೂರು ದಸರಾಗೆ ಅಶ್ವತ್ಥಾಮ ಎಂಟ್ರಿ?

Published : Sep 30, 2021, 06:02 PM IST

ಪ್ರತಿ ವರ್ಷ ಮೈಸೂರು ದಸರಾ ನೋಡೊಕೆ ನಾವೆಲ್ಲ ಕಾತರದಿಂದ ಕಾಯ್ತಿವಿ. ಅದ್ರಲ್ಲೂ ಜಂಬೂ ಸವಾರಿಯಲ್ಲಿ ಸಾಗೋ ಆನೆಗಳನ್ನ ನೋಡೋಕೆ ಮಕ್ಕಳು ತುದಿಗಾಗಲ್ಲಿ ನಿಂತಿರ್ತಾರೆ. ಆದ್ರೆ ಇಲ್ಲಿ ಆನೆಯೇ ಜಂಬೂ ಸವಾರಿ ನೋಡಿಕೊಂಡು ಹೋಗೊಕೆ ಬಂದಿದೆ ಅಂದ್ರೆ ನೀವು ನಂಬಲೇ ಬೇಕು. ಮೊದಲ ಬಾರಿ ಮೈಸೂರಿಗೆ ಎಂಟ್ರಿ ಕೊಟ್ಟಿರೋ ಈ ತರುಣ ಆನೆಗೆ ನಗರದ ಭಯ ಈಗಷ್ಟೇ ಕಡಿಮೆ ಆಗ್ತಿದೆ.

ಮೈಸೂರು(ಸೆ.30): ಜಂಬೂ ಸವಾರಿ ಟೀಂನಲ್ಲಿ ಮೊದಲ ಬಾರಿ ಕಾಣಿಸಿಕೊಂಡಿರೋ 34 ವರ್ಷದ ಅಶ್ವತ್ಥಾಮ ಆನೆ ವಿಚಾರವನ್ನ. ಗಜಪಡೆಯ 8 ಆನೆಗಳ ಪೈಕಿ ತರುಣ ಆನೆ ಎನಿಸಿಕೊಂಡಿರುವ ಅಶ್ವತ್ಥಾಮ ಆನೆ ನೋಡಲು ಬಲು ಆಕರ್ಷಣೆ ಹೊಂದಿದೆ. ಅಗಲವಾದ ಅಣೆಪಟ್ಟಿ, ಎತ್ತರವಾದ ಮೈಕಟ್ಟು, ವಿಶಾಲವಾದ ಬೆನ್ನು ಇದ್ದೆಲ್ಲವನ್ನು ಪರಿಗಣಿಸಿರುವ ಅರಣ್ಯ ಇಲಾಖೆ ಈ ಆನೆಯನ್ನು ಎರಡನೇ ಸಾಲಿನ ಪ್ರಮುಖ ಆನೆಯಾಗಿ ಪರಿಗಣಿಸಿದೆ. 

ದಸರಾ ಉದ್ಘಾಟನೆ: ಸಂಪ್ರದಾಯ ಮುರಿದು ಎಸ್‌. ಎಂ ಕೃಷ್ಣರನ್ನೇಕೆ ಕರೆದಿದ್ದು ಬೊಮ್ಮಾಯಿ?!

ಮೊದಲ ಬಾರಿಗೆ ದಸರಾದಲ್ಲಿ(Dussehra) ಪಾಲ್ಗೊಳ್ಳುವ ಅವಕಾಶ ಪಡೆದಿರುವ ಅಶ್ವತ್ಥಾಮ ಆನೆಯನ್ನು ಹಾಸನ ಜಿಲ್ಲೆ ಸಕಲೇಶಪುರ ಸುತ್ತಮುತ್ತ 2017 ರಲ್ಲಿ ಸೆರೆ ಹಿಡಿಯಲಾಗಿದೆ. ಸೆರೆ ಸಿಕ್ಕ ಕೇವಲ ನಾಲ್ಕು ವರ್ಷಗಳಲ್ಲಿ ಪುಂಡಾನೆ ಗಂಭೀರ ಆನೆಯಾಗಿ ಬದಲಾಗಿದೆ. ಈ ಕಾರಣಕ್ಕೆ ಅರಣ್ಯ ಇಲಾಖೆ(Forest department) ಅಧಿಕಾರಿಗಳು ಈ ಬಾರಿ ದಸರಾಕ್ಕೆ ಅಶ್ವತ್ಥಾಮನನ್ನು ಕರೆತಂದಿದ್ದಾರೆ. 34 ರ ಹರೆಯದ ಆಕರ್ಷಕ ಆನೆಯು 2.85 ಮೀಟರ್ ಎತ್ತರ, 3.46 ಉದ್ದದ ದೇಹ ಹಾಗೂ 3,630 ಕೆ.ಜಿ ತೂಕವಿದೆ. ಸಮತಟ್ಟಾದ ಬೆನ್ನು ನೀಳ ದಂತ ಹೊಂದಿರುವುದರಿಂದ  ಅಭಿಮನ್ಯುವಿನ ಉತ್ತರಾಧಿಕಾರಿಗಳ ಆನೆಗಳ ಪಟ್ಟಿಯಲ್ಲಿ ಈತನು ಸೇರ್ಪಡೆಗೊಂಡಿದ್ದಾನೆ. 

26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!