ಮೈಸೂರು ದಸರಾಗೆ ಅಶ್ವತ್ಥಾಮ ಎಂಟ್ರಿ?

ಮೈಸೂರು ದಸರಾಗೆ ಅಶ್ವತ್ಥಾಮ ಎಂಟ್ರಿ?

Published : Sep 30, 2021, 06:02 PM IST

ಪ್ರತಿ ವರ್ಷ ಮೈಸೂರು ದಸರಾ ನೋಡೊಕೆ ನಾವೆಲ್ಲ ಕಾತರದಿಂದ ಕಾಯ್ತಿವಿ. ಅದ್ರಲ್ಲೂ ಜಂಬೂ ಸವಾರಿಯಲ್ಲಿ ಸಾಗೋ ಆನೆಗಳನ್ನ ನೋಡೋಕೆ ಮಕ್ಕಳು ತುದಿಗಾಗಲ್ಲಿ ನಿಂತಿರ್ತಾರೆ. ಆದ್ರೆ ಇಲ್ಲಿ ಆನೆಯೇ ಜಂಬೂ ಸವಾರಿ ನೋಡಿಕೊಂಡು ಹೋಗೊಕೆ ಬಂದಿದೆ ಅಂದ್ರೆ ನೀವು ನಂಬಲೇ ಬೇಕು. ಮೊದಲ ಬಾರಿ ಮೈಸೂರಿಗೆ ಎಂಟ್ರಿ ಕೊಟ್ಟಿರೋ ಈ ತರುಣ ಆನೆಗೆ ನಗರದ ಭಯ ಈಗಷ್ಟೇ ಕಡಿಮೆ ಆಗ್ತಿದೆ.

ಮೈಸೂರು(ಸೆ.30): ಜಂಬೂ ಸವಾರಿ ಟೀಂನಲ್ಲಿ ಮೊದಲ ಬಾರಿ ಕಾಣಿಸಿಕೊಂಡಿರೋ 34 ವರ್ಷದ ಅಶ್ವತ್ಥಾಮ ಆನೆ ವಿಚಾರವನ್ನ. ಗಜಪಡೆಯ 8 ಆನೆಗಳ ಪೈಕಿ ತರುಣ ಆನೆ ಎನಿಸಿಕೊಂಡಿರುವ ಅಶ್ವತ್ಥಾಮ ಆನೆ ನೋಡಲು ಬಲು ಆಕರ್ಷಣೆ ಹೊಂದಿದೆ. ಅಗಲವಾದ ಅಣೆಪಟ್ಟಿ, ಎತ್ತರವಾದ ಮೈಕಟ್ಟು, ವಿಶಾಲವಾದ ಬೆನ್ನು ಇದ್ದೆಲ್ಲವನ್ನು ಪರಿಗಣಿಸಿರುವ ಅರಣ್ಯ ಇಲಾಖೆ ಈ ಆನೆಯನ್ನು ಎರಡನೇ ಸಾಲಿನ ಪ್ರಮುಖ ಆನೆಯಾಗಿ ಪರಿಗಣಿಸಿದೆ. 

ದಸರಾ ಉದ್ಘಾಟನೆ: ಸಂಪ್ರದಾಯ ಮುರಿದು ಎಸ್‌. ಎಂ ಕೃಷ್ಣರನ್ನೇಕೆ ಕರೆದಿದ್ದು ಬೊಮ್ಮಾಯಿ?!

ಮೊದಲ ಬಾರಿಗೆ ದಸರಾದಲ್ಲಿ(Dussehra) ಪಾಲ್ಗೊಳ್ಳುವ ಅವಕಾಶ ಪಡೆದಿರುವ ಅಶ್ವತ್ಥಾಮ ಆನೆಯನ್ನು ಹಾಸನ ಜಿಲ್ಲೆ ಸಕಲೇಶಪುರ ಸುತ್ತಮುತ್ತ 2017 ರಲ್ಲಿ ಸೆರೆ ಹಿಡಿಯಲಾಗಿದೆ. ಸೆರೆ ಸಿಕ್ಕ ಕೇವಲ ನಾಲ್ಕು ವರ್ಷಗಳಲ್ಲಿ ಪುಂಡಾನೆ ಗಂಭೀರ ಆನೆಯಾಗಿ ಬದಲಾಗಿದೆ. ಈ ಕಾರಣಕ್ಕೆ ಅರಣ್ಯ ಇಲಾಖೆ(Forest department) ಅಧಿಕಾರಿಗಳು ಈ ಬಾರಿ ದಸರಾಕ್ಕೆ ಅಶ್ವತ್ಥಾಮನನ್ನು ಕರೆತಂದಿದ್ದಾರೆ. 34 ರ ಹರೆಯದ ಆಕರ್ಷಕ ಆನೆಯು 2.85 ಮೀಟರ್ ಎತ್ತರ, 3.46 ಉದ್ದದ ದೇಹ ಹಾಗೂ 3,630 ಕೆ.ಜಿ ತೂಕವಿದೆ. ಸಮತಟ್ಟಾದ ಬೆನ್ನು ನೀಳ ದಂತ ಹೊಂದಿರುವುದರಿಂದ  ಅಭಿಮನ್ಯುವಿನ ಉತ್ತರಾಧಿಕಾರಿಗಳ ಆನೆಗಳ ಪಟ್ಟಿಯಲ್ಲಿ ಈತನು ಸೇರ್ಪಡೆಗೊಂಡಿದ್ದಾನೆ. 

01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ