ವಿಧಾನಸಭೆಯಲ್ಲಿ ಸಿದ್ದು Vs ಅಶ್ವತ್ಥ್ ರಣರೋಚಕ ಜಂಗೀಕುಸ್ತಿ!"ನಿಮ್ಮವರದ್ದೆಲ್ಲಾ ಬಿಚ್ಚಿಡಬೇಕಾಗತ್ತೆ" ಸಿದ್ದರಾಮಯ್ಯ ಆರ್ಭಟ!

ವಿಧಾನಸಭೆಯಲ್ಲಿ ಸಿದ್ದು Vs ಅಶ್ವತ್ಥ್ ರಣರೋಚಕ ಜಂಗೀಕುಸ್ತಿ!"ನಿಮ್ಮವರದ್ದೆಲ್ಲಾ ಬಿಚ್ಚಿಡಬೇಕಾಗತ್ತೆ" ಸಿದ್ದರಾಮಯ್ಯ ಆರ್ಭಟ!

Published : Jul 19, 2024, 05:37 PM ISTUpdated : Jul 19, 2024, 05:38 PM IST


ವಾಲ್ಮೀಕಿ ನಿಗಮದ ಅಕ್ರಮದ ಅಖಾಡದಲ್ಲಿ ಕೈ-ಕಮಲ ಮಹಾಯುದ್ಧ..! 
ವರುಣಾ ವಾರಸ್ದಾರನಿಗೂ.. ಮಲ್ಲೇಶ್ವರ ಮಗಧೀರನಿಗೂ ಜಿದ್ದಾಜಿದ್ದಿ..!
ವಿಧಾನಸಭೆಯ ಒಳಗೂ ಹೊರಗೂ ವಾಲ್ಮೀಕಿ ಅಕ್ರಮದ ಜ್ವಾಲೆ ಧಗಧಗ..!
 

ವಾಲ್ಮೀಕಿ ಅಕ್ರಮದ (Valmiki Corporation) ಅಖಾಡದಲ್ಲಿ ಕೈ-ಕಮಲ ನಾಯಕರ ಭರ್ಜರಿ ಜಂಗೀಕುಸ್ತಿ ನಡೆದಿದೆ. ಕರ್ನಾಟಕದ ವಿಧಾನಸಭೆ ಅದೆಷ್ಟೋ ಜಟಾಪಟಿ ಜಂಗೀಕುಸ್ತಿಗಳಿಗೆ ಸಾಕ್ಷಿಯಾಗಿದೆ. ವಿಧಾನಸೌಧ ಹೊರಗಿನ ಶತ್ರುತ್ವ ವಿಧಾನಸೌಧದ ಒಳಗೆ ಧಗಧಗಿಸಿದ್ದಿದೆ. ವೈಯಕ್ತಿಕ ದ್ವೇಷದ ಜ್ವಾಲಾಗ್ನಿ ವಿಧಾನಸಭೆಯಲ್ಲಿ ಹೊತ್ತಿ ಉರಿದದ್ದೂ ಇದೆ. ಆದ್ರೆ ಮುಖ್ಯಮತ್ರಿ ಸಿದ್ದರಾಮಯ್ಯ(Siddaramaiah) ಮತ್ತು ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಮಧ್ಯೆ ಅಂಥಾ ವೈಯಕ್ತಿಕ ದ್ವೇಷವೇನಿಲ್ಲ. ಇರೋದು ರಾಜಕೀಯ ದ್ವೇಷ ಅಷ್ಟೇ. ಆ ರಾಜಕೀಯ ದ್ವೇಷದ ಮೊದಲ ಕಿಡಿ ಹೊತ್ತಿಕೊಂಡದ್ದು ಕಳೆದ ವರ್ಷ. ಬಿಜೆಪಿ(BJP) ಸಮಾವೇಶವೊಂದರಲ್ಲಿ ಮಾತಾಡ್ತಾ, ಟಿಪ್ಪು ಸುಲ್ತಾನನಂತೆ ಸಿದ್ದರಾಮಯ್ಯನವರನ್ನೂ ಹೊಡೆದು ಹಾಕ್ಬೇಕು ಅಂತ ಅಶ್ವತ್ಥನಾರಾಯಣ ಹೇಳಿದ್ರೆ, ಧಮ್ಮಿದ್ರೆ ತಾಕತ್ತಿದ್ರೆ ಹೊಡೆದು ಹಾಕ್ಲಿ ನೋಡೋಣ ಅಂತ ವಿಧಾನಸಭೆಯಲ್ಲೇ ಸವಾಲ್ ಹಾಕಿ ನಿಂತಿದ್ರು ಸಿದ್ದರಾಮಯ್ಯ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂಪಾಯಿಗಳ ಅಕ್ರಮ ಪ್ರಕರಣ ರಾಜ್ಯ ರಾಜಕೀಯದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿ ಬಿಟ್ಟಿದೆ. ಹಗರಣದಲ್ಲಿ ಈಗಾಗ್ಲೇ ಮಾಜಿ ಸಚಿನ ಬಿ.ನಾಗೇಂದ್ರ ಅರೆಸ್ಟ್ ಆಗಿದ್ದು, ದೊಡ್ಡ ದೊಡ್ಡವರ ಬುಡದಲ್ಲೇ ಕಂಪನ ಶುರುವಾಗಿದೆ. 

ಇದನ್ನೂ ವೀಕ್ಷಿಸಿ:  ಪೊಲೀಸರ ರಿಮ್ಯಾಂಡ್ ಅರ್ಜಿಯಲ್ಲಿ ಏನಿದೆ..? ದಾಸನಿಗೆ ಸದ್ಯಕಿಲ್ಲವಾ ಬಿಡುಗಡೆ ಭಾಗ್ಯ..?

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more