ಈ ಸುದ್ದಿ ವಿಧಾನಸೌಧದಲ್ಲಿ ಸೌಂಡ್‌ ಮಾಡಿತ್ತು!: ಅಂಗನವಾಡಿ ಕಾರ್ಯಕರ್ತೆಯರು ಈಗ ಫುಲ್‌ ಖುಷ್‌..!

ಈ ಸುದ್ದಿ ವಿಧಾನಸೌಧದಲ್ಲಿ ಸೌಂಡ್‌ ಮಾಡಿತ್ತು!: ಅಂಗನವಾಡಿ ಕಾರ್ಯಕರ್ತೆಯರು ಈಗ ಫುಲ್‌ ಖುಷ್‌..!

Published : Aug 04, 2023, 03:23 PM IST

ಬೆಳಗಾವಿಯ ಅಂಗನವಾಡಿ ಕಾರ್ಯಕರ್ತೆಯರ ಚಿನ್ನಾಭರಣಗಳು ಈಗ ಅವರ ಕೈ ಸೇರಿವೆ. ಇದು ನಮ್ಮ ಬಿಗ್‌ 3ಯ ಇಂಪ್ಯಾಕ್ಟ್‌ ಆಗಿದೆ.
 

ಹೆಚ್ಚು ಕಮ್ಮಿ ಕಳೆದ 20 ತಿಂಗಳಿಂದ ಸರ್ಕಾರ ಅಂಗನವಾಡಿಗೆ(Anganwadi)ಬಾಡಿಗೆ ಹಣ ಬಿಡುಗಡೆ ಮಾಡಿರಲಿಲ್ಲ. ಅವರೆಲ್ಲ ಆ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಮಾಂಗಲ್ಯವನ್ನ ಅಡವಿಟ್ಟಿದ್ದರು. ತಾಳಿ, ಇತರೆ ಆಭರಣ(ornaments) ಅಡವಿಟ್ಟು ಬಾಡಿಗೆ ಕಟ್ಟುತ್ತಿದ್ದರು. ಈ ಸುದ್ದಿ ಇಡೀ ರಾಜ್ಯವೇ ನಾಚಿಕೆ ಪಡೋ ಸುದ್ದಿ ಆಗಿತ್ತು. ಕುಂದಾನಗರಿ ಬೆಳಗಾವಿ(Belagavi) ಜಿಲ್ಲೆಯಲ್ಲಿ ಅದೆಷ್ಟೋ ಅಂಗನವಾಡಿಗಳು ಇದ್ದಾವೆ. ಆದ್ರೆ, ಬೆಳಗಾವಿ ನಗರದ ಕೆಲವು ಅಂಗನ ವಾಡಿಯ ಬಾಡಿಗೆ ಕಟ್ಟದೇ ಕಟ್ಟಡ ಖಾಲಿ ಮಾಡಿ ಅಂತ ಮಾಲೀಕರು ಪೀಡಿಸುತ್ತಿದ್ರು. ಹೀಗಾಗಿ ಭವಿಷ್ಯದ ಮಕ್ಕಳ ಹಿತ ದೃಷ್ಟಿಯಿಂದ ಮಾತೃ ಹೃದಯ ಮಿಡಿದು ಕೆಲವು ಕಾರ್ಯಕರ್ತೆಯರು ತಮ್ಮ ಚಿನ್ನಾಭರಣ ಅಡವಿಟ್ಟು ಬಾಡಿಗೆ ಕಟ್ಟುತ್ತಿದ್ರು.

ಆದ್ರೆ ಇವರ ನೆರವಿಗೆ ಯಾರೂ ನಿಲ್ಲಲಿಲ್ಲ. ಬಿಗ್3ಯಲ್ಲಿ ಸುದ್ದಿ ಪ್ರಸಾರ ಆಗ್ತಿದ್ದಂತೆ ಇಡೀ ಜಿಲ್ಲಾಡಳಿತ ಅಲರ್ಟ್ ಆಯ್ತು. ಖುದ್ದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅಖಾಡಕ್ಕೆ ಧುಮುಕಿದ್ರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪನಿರ್ದೇಶಕ ನಾಗರಾಜ್ಗೆ ಕ್ಲಾಸ್ ತೆಗೆದುಕೊಂಡ್ರು. ತಕ್ಷಣವೇ ಅಂಗನವಾಡಿಗೆ ತೆರಳಿ ಟೀಚರ್ಸ್‌ಗಳಿಗೆ ಧೈರ್ಯ ತುಂಬಿ ಸಮಸ್ಯೆ ಕ್ಲೀಯರ್ ಮಾಡಲು ತಿಳಿಸಿದ್ರು. ಅದಾಗಲೇ ಈ ಸುದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್ ಅವರ ಗಮನಕ್ಕೂ ಬಂದಿತ್ತು. ಶಭಾನಾ ಅವ್ರು 22 ಸಾವಿರಕ್ಕೆ ತಮ್ಮ ಮಾಂಗಲ್ಯ ಸರವನ್ನ ಅಡವಿಟ್ಟಿದ್ದರು. ಸಿಡಿಪಿಓ ಲಕ್ಷ್ಮಣ ಭಜಂತ್ರಿ ವೈಯಕ್ತಿಕ 22 ಸಾವಿರ ಹಣ ನೀಡಿದ್ದಾರೆ. ಸದ್ಯ ಶಭಾನಾ ಅವರ ಮಾಂಗಲ್ಯಸರ ಅವರ ಕೈ ಸೇರಿದೆ. ಇನ್ನೂ ಉಳಿದ ಕಾರ್ಯಕರ್ತೆಯರು ಅಡವಿಟ್ಟಿರುವ ಚಿನ್ನಾಭರಣವನ್ನು ಹಂತ ಹಂತವಾಗಿ ಬಿಡಿಸಿಕೊಡಲಾಗುತ್ತೆ.

ಇದನ್ನೂ ವೀಕ್ಷಿಸಿ:  ಹಳೇ ಸಿಟ್ಟಿಗೆ ಸೇಡು ತೀರಿಸಿಕೊಂಡನಾ ವಾಟರ್‌ಮ್ಯಾನ್‌ ?: ಕಲುಷಿತ ನೀರು ಸೇವಿಸಿ 130 ಮಂದಿ ಅಸ್ವಸ್ಥ !

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more