ಧಾರವಾಡಕ್ಕೆ ವಕ್ಕರಿಸಿದ ಶನಿಕಾಟ: ಕುಡುಕ ಚಾಲಕನ ಅವಾಂತರಕ್ಕೆ 8 ಮಂದಿ ಬಲಿ

ಧಾರವಾಡಕ್ಕೆ ವಕ್ಕರಿಸಿದ ಶನಿಕಾಟ: ಕುಡುಕ ಚಾಲಕನ ಅವಾಂತರಕ್ಕೆ 8 ಮಂದಿ ಬಲಿ

Published : May 21, 2022, 11:35 AM ISTUpdated : May 21, 2022, 12:39 PM IST

*  ಧಾರವಾಡ ತಾಲೂಕಿನ ಬಾಡ ಗ್ರಾಮದ ಬಳಿ ನಡೆದ ಘಟನೆ
*  ಮಳೆಗೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಸಂಭವಿಸಿದ ಅಪಘಾತ
*  ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ 

ವರದಿ: ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ

ಧಾರವಾಡ(ಮೇ.21): ಆ ಗ್ರಾಮದಲ್ಲಿ ಇಂದು ಮದುವೆಯ ಖುಷಿ, ಖುಷಿಯಲ್ಲಿ ಎಲ್ಲರೂ ಮದುವೇ ಮಾಡಲೂ ತಯ್ಯಾರಿ ನಡೆಸಿದ್ರು ಇಂದು ಆಗಬೇಕಿದ್ದ ಮದುವೆಯ ಮನೆಯಲ್ಲಿ ಜವರಾಯ ಬಿಗ್ ಶಾಕ್ ಕೊಟ್ಟಿದ್ದಾನೆ. ಇಡೀ ಗ್ರಾಮಕ್ಕೆ ಗ್ರಾಮವೇ ಶೋಕದ ವಾತಾವರಣದಲ್ಲಿದೆ ಧಾರವಾಡ ತಾಲೂಕಿನ ಬೆನಕನಕಟ್ಟಿ ಗ್ರಾಮದ ಮಂಜುನಾಥ್ ದಾಸನಕೊಪ್ಪ ಎಂಬ ಯುವಕನು ಮದುವೇ ಇಂದು ನಡೆಯಬೇಕಿತ್ತು. ಆದರೆ ವಿಧಿಯ ಆಟವೇ ಬೇರೆಯೇ ಆಗಿದೆ. 

ಮೇ. 21 ರಂದು ಮನೇಯ ಮುಂದೆ ಅದ್ಧೂರಿಯಾಗಿ ಮದುವೇಯಾಗಲು ಆಮಂತ್ರಣ ಪತ್ರಿಕೆಯನ್ನ ರೆಡಿ ಮಾಡಿ ಸಂಭಂದಿಕರಿಗೆ ಕೊಡಲಾಗಿತ್ತು. ಹಿರಿಯರು ಮಾತಿನಂತೆ ಮನೆಯ ಮುಂದೆ ನಡೆಯಬೇಕಿದ್ದ ಮದುವೆ ಮಳೆಯಾಗುತ್ತಿರುವ ಹಿನ್ನಲೆಯಿಂದ ಮೇ. 20 ಬೆಳಿಗ್ಗೆ ಮಠದಲ್ಲಿ ಮದುವೆ ಮಾಡೋದಾಗಿ ನಿಶ್ಚಯ ಮಾಡಿರುತ್ತಾರೆ. ಆದರೆ ಮದುವೇಯಾಗಿ ಖುಷಿಯಿಂದ ಇರಬೇಕಾದ ಮಂಜುನಾಥ ಬಾಳಲ್ಲಿ ಸದ್ಯ ಬರಿಸಿಡಿಲು ಬಡದಂತಾಗಿದೆ..ಎಸ್ ನಿನ್ನೆ ರಾತ್ರಿ 9 ಗಂಟೆಗೆ ಬೆನಕನಟ್ಟಿ ಗ್ರಾಮದಿಂದ ರೇವಣ ಸಿದ್ದೆಶ್ವರ ಮಠದಲ್ಲಿ ಎಂಗೇಜ್‌ಮೆಂಟ್‌ ಕಾರ್ಯಕ್ರಮವನ್ನ ಮುಗಿಸಿಕೊಂಡು ಮನೆಗೆ ಬರುವಾಗ ಕ್ರೂಸರ್‌ರ್ ವಾಹನದ ಚಾಲಕನ ನಿರ್ಲಕ್ಷ್ಯದಿಂದ‌ ಮರಕ್ಕೆ ಡಿಕ್ಕಿಯಾಗಿ ಬಳಿಕ ಕೃಷರ್ ವಾಹನ ಪಲ್ಟಿಯಾಗಿದೆ. ಸ್ಥಳದಲ್ಲಿ 7 ಜನರು ಮೃತ ಪಟ್ಡಿದ್ದಾರೆ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮತ್ತಿಬ್ಬರು ಸಾವನ್ನಪದಪಿದ್ದಾರೆ. ಒಟ್ಟು 9 ಜನರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 

ಕರ್ನಾಟಕದಲ್ಲಿ ಮಳೆಯ ಆರ್ಭಟ: ರಾಜಕಾರಣದಲ್ಲಿ ಧಿಡೀರ್ ಬೆಳವಣಿಗೆ

ಇನ್ನು 13 ಜನರು ಕಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯ ಹೋರಾಟ ಮಾಡುತ್ತಿದ್ದಾರೆ. ಇನ್ನು ಚಾಲಕ ಕುಡಿದ ಮತ್ತಿನಲ್ಲಿ ವಾಹನವನ್ನ‌ ಚಲಾಯಿಸುತ್ತಿದ್ದ ಎಂದು ಪೋಲಿಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಇನ್ನು ಸ್ಥಳಕ್ಕೆ ಬೇಟಿ ನೀಡಿದ ಎಸ್ಪಿ ಪಿ ಕೃಷ್ಣಕಾಂತ ಭೇಟಿ ನೋಡಿ ಪ್ರಕರಣವನ್ನ ದಾಖಲಿಸಿಕೊಂಡು ಘಟನೆಯ ಬಗ್ಗೆ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. 

ಇನ್ನು ವಿಷಯ ತಿಳಿದು ಕುಟುಂಬಸ್ಥರು ಆಸ್ಪತ್ರೆ ಯ ಎದುರು ಕಣ್ಣೀರು ಹಾಕುತ್ತಿದ್ದಾರೆ. ಒಟ್ಟು ಕ್ರೂಸರ್ ವಾಹನದಲ್ಲಿ 22 ಜನರನ್ನ ಕರೆದುಕೊಂಡು ಹೋಗಲಾಗುತ್ತಿತ್ತು ಅದರಲ್ಲಿ 9 ಜನರು ಮೃತಪಟ್ಡಿದ್ದಾರೆ. 13 ಜನರು ಗಾಯಾಳುಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಮೃತ ರಾದವರ ಹೆಸರುಗಳನ್ನ ನೋಡೋದಾದ್ರೆ ಅನನ್ಯ(14), ಹರೀಶ್ (13), ಶಿಲ್ಪಾ(34), ನೀಲವ್ವಾ(60), ಮಧುಶ್ರಿ(20), ಮಹೇಶ್ವರಯ್ಯ(11), ಶಂಬುಲಿಂಗಯ್ಯ(35), ಚನ್ನವ್ವ ಮಂಜುಶ್ರಿ,  ಈ 9 ಜನರು ಮೃತ ಪಟ್ಟಿದ್ದಾರೆ. 13 ಜನರು ಸಾವು ಬದುಕಿನ ಮದ್ಯ ಹೋರಾಟವನ್ನ ನಡೆಸುತ್ತಿದ್ದಾರೆ. 

ಪ್ರತ್ಯಕ್ಷದರ್ಶಿ ಹೇಳುವ ಪ್ರಕಾರ ನಾನು ಘಟನೆ ಯಾದ ಜಾಗದಲ್ಲೇ ಇದ್ದೆ, ಅಲ್ಲಿ ನಾನು ಹೋಗಿ ನೋಡಿದ್ದೆ ಸ್ಥಳದಲ್ಲಿ ಜನ ತುಂಬಾ ಪರದಾಡುತ್ತಿದ್ದರು ನಾನು ಅಂಬುಲೈನ್ಸ್‌ಗೆ ಕರೆ ಮಾಡಿ ಹೇಳಿದ್ದೆನೆ ಬಳಿಕ ಪೋಲಿಸರು ಸ್ಥಳಕ್ಕೆ ಬಂದು ಗಾಯಾಳುಗಳನ್ನ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಹೇಳುತ್ತಿದ್ದಾರೆ. 

ಒಟ್ಡಿನಲ್ಲಿ ಚಾಲಕನ ಕುಡಿತದ ಚಡಕ್ಕೆ 9 ಜನರನ್ನ ಬಲಿ ಪಡೆದುಕೊಂಡಿದ್ದಾನೆ. ಮದುವೆಯಾಗಿ ಸುಖದಿಂದ‌ ಜೀವನ ನಡೆಸಬೇಕಿದ್ದ ಮಂಜುನಾಥ ದಾಸನಕೊಪ್ಪ ಎಂಬ ಯವಕನ ಮದುವೆಯ ಸಮಾರಂಭದ ಕಾರ್ಯಕ್ರಮದಲ್ಲಿ ಸದ್ಯ 9 ಜನರು ಸಾವನ್ನಪ್ಪಿದ್ದಾರೆ. ಇನ್ನು 13 ಜನರು ಕಿಮ್ಸ್ ನಲ್ಲಿ ಸಾವು ಬದುಕಿನ ಮಧ್ಯೆ ಹೋರಾಟವನ್ನ ಮಾಡುತ್ತಿದ್ದಾರೆ. ಇನ್ನುಳಿದ 13 ಜನರು ಬದುಕಿ ಬರಲಿ ಎಂಬುದು ನಮ್ಮ‌ ಆಶಯ.
 

24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
Read more