ರೂಪಾಯಿಯಲ್ಲೇ ವ್ಯಾಪಾರವಾದ್ರೆ  ಏನೇನು ಲಾಭ..? ಅಸಲಿ ಆಟ ಈಗ ಆರಂಭ..ಮುಂದಿದೆ ದೊಡ್ಡ ಹಬ್ಬ..!

ರೂಪಾಯಿಯಲ್ಲೇ ವ್ಯಾಪಾರವಾದ್ರೆ ಏನೇನು ಲಾಭ..? ಅಸಲಿ ಆಟ ಈಗ ಆರಂಭ..ಮುಂದಿದೆ ದೊಡ್ಡ ಹಬ್ಬ..!

Published : Dec 29, 2023, 02:49 PM IST

ಭಾರತದಲ್ಲಿ ದೋಸ್ತಿ ಅಕೌಂಟ್ ತೆರೆದ ವಿದೇಶಗಳು!
ಡಾಲರ್ಗೇ ನಡುಕ ತರಿಸಿತಾ  ಭಾರತದ ರೂಪಾಯಿ?!
ಚೀನಾಗೇ ಇಲ್ಲದ ಮಾನ್ಯತೆ ಭಾರತ ಗಳಿಸಿದ್ದು ಹೇಗೆ? 
 

ಸ್ವತಂತ್ರ ಭಾರತದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ರೂಪಿಸ್‌ನಲ್ಲಿ ನಡೆದಿದೆ ದೊಡ್ಡಮೊತ್ತದ, ದೊಟ್ಟ ಮಟ್ಟದ ವ್ಯಾಪಾರ. ನರೇಂದ್ರ ಮೋದಿ(Narendra Modi) ಪ್ರಧಾನಿ ಪಟ್ಟದಲ್ಲಿ ಕೂತ ದಿನದಿಂದಲೂ, ದೇಶದಲ್ಲಿ ದೊಡ್ಡಮಟ್ಟದ ಬದಲಾವಣೆ ಆಗ್ತಾ ಇದೆ. ದೊಡ್ಡ ದೊಡ್ಡ ಕನಸುಗಳನ್ನೇ ಹೊತ್ತು ಪಟ್ಟವೇರಿದ ಪ್ರಧಾನಿ, ಒಂದೊಂದೇ ಕನಸುಗಳನ್ನ ನನಸು ಮಾಡಿಕೊಳ್ತಾ ಇದಾರೆ. ಅವರ ಅಂಥದ್ದೇ ಕನಸುಗಳಲ್ಲಿ ಒಂದು, ರೂಪಾಯಿಯನ್ನ ಅಂತಾರಾಷ್ಟ್ರೀಯ ಕರೆನ್ಸಿಯಾಗಿಸೋದು. ಒಂದೊಂದು ದೇಶದಲ್ಲೂ ಒಂದೊಂದು ಕರೆನ್ಸಿ ಚಲಾವಣೆಯಲ್ಲಿದೆ. ಅದೇ ಥರ ಭಾರತದಲ್ಲಿರೋದು, ರೂಪಾಯಿ. ನಿಮಗೊಂದು ಸಂಗತಿ ಗೊತ್ತಿರ್ಲಿ , ಜಗತ್ತಿನ ಬಹುತೇಕ ದೇಶಗಳ ನಡುವೆ ವ್ಯವಹಾರ ನಡೆಯೋದು ಅಮೆರಿಕಾದ(America) ಕರೆನ್ಸಿಯಾಗಿರೋ ಡಾಲರ್ ಮೂಲಕ. ಅಂದ್ರೆ, ಭಾರತ(India) ಯಾವ್ದಾದ್ರೂ ದೇಶದಿಂದ ಏನಾದ್ರೂ ತಗೋಬೇಕು ಅಂದ್ರೆ, ಮೊದಲು ತನ್ನ ಬಳಿ ಇರೋ ದುಡ್ಡನ್ನ ಡಾಲರ್ ಆಗಿ ಕನ್ವರ್ಟ್ ಮಾಡ್ಕೊಬೇಕು. ಬಳಿಕ ಆ ದುಡ್ಡನ್ನ ಆ ದೇಶಕ್ಕೆ ಕೊಟ್ಟು, ತನಗೆ ಬೇಕಿರೋ ವಸ್ತುನಾ ಕೊಂಡುಕೊಳ್ಳಬೇಕು. ಜಗತ್ತಿನ ಮೇಲೆ ಕಪಿಮುಷ್ಠಿ ಸಾಧಿಸಿಬಿಟ್ಟಿದೆ ಅಮೆರಿಕ. ಅಮೆರಿಕಾಗೆ ಇರೋ ಈ ಶಕ್ತಿನೇ ಇವತ್ತು, ಆ ದೇಶವನ್ನ ಹಿರಿಯಣ್ಣ ಅನ್ನೋ ಪಟ್ಟದಲ್ಲಿ ಕೂರಿಸಿರೋದು. ಅಮೆರಿಕಾಗೆ ಈ ಶಕ್ತಿ ಇರೋದ್ರಿಂದ ಎಲ್ಲಾ ದೇಶಗಳೂ ಅಮೆರಿಕಾದ ನಿರ್ಣಯಕ್ಕೆ ತಲೆಬಾಗೋ ವಾತಾವರಣ ನಿರ್ಮಾಣವಾಗಿಬಿಟ್ಟಿದೆ. ಅಕಸ್ಮಾತ್ ಅಮೆರಿಕಾ ಸಿಟ್ಟುಮಾಡ್ಕೊಂಡ್ರೆ, ಕೋಪಕ್ಕೆ ತುತ್ತಾದ ರಾಷ್ಟ್ರ ವ್ಯಾಪಾರ ಮಾಡೋದೇ ಕಷ್ಟವಾಗ್ಬಿಡುತ್ತೆ. 

ಇದನ್ನೂ ವೀಕ್ಷಿಸಿ:  5 ವರ್ಷದಲ್ಲಿ 4 ಮದುವೆ.. ರೀಲ್ಸ್ ರಾಣಿಯ ಮ್ಯಾರೇಜ್ ಸ್ಟೋರಿ ಇದು..!

21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
Read more