ರೂಪಾಯಿಯಲ್ಲೇ ವ್ಯಾಪಾರವಾದ್ರೆ  ಏನೇನು ಲಾಭ..? ಅಸಲಿ ಆಟ ಈಗ ಆರಂಭ..ಮುಂದಿದೆ ದೊಡ್ಡ ಹಬ್ಬ..!

ರೂಪಾಯಿಯಲ್ಲೇ ವ್ಯಾಪಾರವಾದ್ರೆ ಏನೇನು ಲಾಭ..? ಅಸಲಿ ಆಟ ಈಗ ಆರಂಭ..ಮುಂದಿದೆ ದೊಡ್ಡ ಹಬ್ಬ..!

Published : Dec 29, 2023, 02:49 PM IST

ಭಾರತದಲ್ಲಿ ದೋಸ್ತಿ ಅಕೌಂಟ್ ತೆರೆದ ವಿದೇಶಗಳು!
ಡಾಲರ್ಗೇ ನಡುಕ ತರಿಸಿತಾ  ಭಾರತದ ರೂಪಾಯಿ?!
ಚೀನಾಗೇ ಇಲ್ಲದ ಮಾನ್ಯತೆ ಭಾರತ ಗಳಿಸಿದ್ದು ಹೇಗೆ? 
 

ಸ್ವತಂತ್ರ ಭಾರತದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ರೂಪಿಸ್‌ನಲ್ಲಿ ನಡೆದಿದೆ ದೊಡ್ಡಮೊತ್ತದ, ದೊಟ್ಟ ಮಟ್ಟದ ವ್ಯಾಪಾರ. ನರೇಂದ್ರ ಮೋದಿ(Narendra Modi) ಪ್ರಧಾನಿ ಪಟ್ಟದಲ್ಲಿ ಕೂತ ದಿನದಿಂದಲೂ, ದೇಶದಲ್ಲಿ ದೊಡ್ಡಮಟ್ಟದ ಬದಲಾವಣೆ ಆಗ್ತಾ ಇದೆ. ದೊಡ್ಡ ದೊಡ್ಡ ಕನಸುಗಳನ್ನೇ ಹೊತ್ತು ಪಟ್ಟವೇರಿದ ಪ್ರಧಾನಿ, ಒಂದೊಂದೇ ಕನಸುಗಳನ್ನ ನನಸು ಮಾಡಿಕೊಳ್ತಾ ಇದಾರೆ. ಅವರ ಅಂಥದ್ದೇ ಕನಸುಗಳಲ್ಲಿ ಒಂದು, ರೂಪಾಯಿಯನ್ನ ಅಂತಾರಾಷ್ಟ್ರೀಯ ಕರೆನ್ಸಿಯಾಗಿಸೋದು. ಒಂದೊಂದು ದೇಶದಲ್ಲೂ ಒಂದೊಂದು ಕರೆನ್ಸಿ ಚಲಾವಣೆಯಲ್ಲಿದೆ. ಅದೇ ಥರ ಭಾರತದಲ್ಲಿರೋದು, ರೂಪಾಯಿ. ನಿಮಗೊಂದು ಸಂಗತಿ ಗೊತ್ತಿರ್ಲಿ , ಜಗತ್ತಿನ ಬಹುತೇಕ ದೇಶಗಳ ನಡುವೆ ವ್ಯವಹಾರ ನಡೆಯೋದು ಅಮೆರಿಕಾದ(America) ಕರೆನ್ಸಿಯಾಗಿರೋ ಡಾಲರ್ ಮೂಲಕ. ಅಂದ್ರೆ, ಭಾರತ(India) ಯಾವ್ದಾದ್ರೂ ದೇಶದಿಂದ ಏನಾದ್ರೂ ತಗೋಬೇಕು ಅಂದ್ರೆ, ಮೊದಲು ತನ್ನ ಬಳಿ ಇರೋ ದುಡ್ಡನ್ನ ಡಾಲರ್ ಆಗಿ ಕನ್ವರ್ಟ್ ಮಾಡ್ಕೊಬೇಕು. ಬಳಿಕ ಆ ದುಡ್ಡನ್ನ ಆ ದೇಶಕ್ಕೆ ಕೊಟ್ಟು, ತನಗೆ ಬೇಕಿರೋ ವಸ್ತುನಾ ಕೊಂಡುಕೊಳ್ಳಬೇಕು. ಜಗತ್ತಿನ ಮೇಲೆ ಕಪಿಮುಷ್ಠಿ ಸಾಧಿಸಿಬಿಟ್ಟಿದೆ ಅಮೆರಿಕ. ಅಮೆರಿಕಾಗೆ ಇರೋ ಈ ಶಕ್ತಿನೇ ಇವತ್ತು, ಆ ದೇಶವನ್ನ ಹಿರಿಯಣ್ಣ ಅನ್ನೋ ಪಟ್ಟದಲ್ಲಿ ಕೂರಿಸಿರೋದು. ಅಮೆರಿಕಾಗೆ ಈ ಶಕ್ತಿ ಇರೋದ್ರಿಂದ ಎಲ್ಲಾ ದೇಶಗಳೂ ಅಮೆರಿಕಾದ ನಿರ್ಣಯಕ್ಕೆ ತಲೆಬಾಗೋ ವಾತಾವರಣ ನಿರ್ಮಾಣವಾಗಿಬಿಟ್ಟಿದೆ. ಅಕಸ್ಮಾತ್ ಅಮೆರಿಕಾ ಸಿಟ್ಟುಮಾಡ್ಕೊಂಡ್ರೆ, ಕೋಪಕ್ಕೆ ತುತ್ತಾದ ರಾಷ್ಟ್ರ ವ್ಯಾಪಾರ ಮಾಡೋದೇ ಕಷ್ಟವಾಗ್ಬಿಡುತ್ತೆ. 

ಇದನ್ನೂ ವೀಕ್ಷಿಸಿ:  5 ವರ್ಷದಲ್ಲಿ 4 ಮದುವೆ.. ರೀಲ್ಸ್ ರಾಣಿಯ ಮ್ಯಾರೇಜ್ ಸ್ಟೋರಿ ಇದು..!

50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
Read more