ಡಿ.ಕೆ ಸುರೇಶ್ ಬೆನ್ನಿಗೆ ನಿಂತವರು ಯಾರು..? ಭಾರತ ವಿಭಜನ ಮಾತಿಗೆ ಕೆರಳಿ ಕೆಂಡವಾಯ್ತು ಬಿಜೆಪಿ..!

Feb 3, 2024, 4:16 PM IST

ಡಿಕೆ ಸುರೇಶ್ ಹೇಳಿದ ಅದೊಂದು ಹೇಳಿಕೆ, ಸಂಸತ್‌ನಲ್ಲಿ(Parliment) ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿತ್ತು. ದೇಶ ವಿಭಜನೆ ಬಗ್ಗೆ ಮಾತನಾಡಿದ್ದಕ್ಕೆ ಬಿಜೆಪಿ(BJP) ಕಟುವಾಗಿ ಟೀಕಿಸಿದೆ. ದೇಶ ವಿಭಜನೆಯ ಬಗ್ಗೆ ಮಾತಾಡಿರೋ ಡಿಕೆ ಸುರೇಶ್(DK Suresh) ಪರ ಕರ್ನಾಟಕ ಕಾಂಗ್ರೆಸ್ ನಿಂತಿದೆ. ಕಾಂಗ್ರೆಸ್ (COngress) ಸಂಸದ ಡಿಕೆ ಸುರೇಶ್ಅವರ ಪ್ರತ್ಯೇಕ ರಾಷ್ಟ್ರ ಹೇಳಿಕೆ ಸಂಸತ್ತಿನಲ್ಲಿ ಭಾರೀ ಗದ್ದಲ, ಕೋಲಾಹಲಕ್ಕೆ ಕಾರಣವಾಗಿತ್ತು. ಆದ್ರೆ ಈ ರೀತಿಯ ಹೇಳಿಕೆ ಸಹಿಸಲ್ಲ ಅನ್ನೋ ಮೂಲಕ ಸುರೇಶ್ ಹೇಳಿಕೆಯನ್ನ ಖರ್ಗೆ ಖಂಡಿಸಿದ್ದಾರೆ. ಡಿಕೆ ಸುರೇಶ್ ಅವರು ದೇಶ ವಿಭಜನೆ ಮಾತು ಸಂಸತ್ತಿನಲ್ಲಿ ದೊಡ್ಡ ಕೋಲಾಹಲಕ್ಕೆ ಸಾಕ್ಷಿಯಾಗಿದೆ. ಆದ್ರೆ ಸುರೇಶ್ ಅವರು ಮಾತ್ರ ನನ್ನ ಮಾತನ್ನ ತಿರುಚಿದ್ದಾರೆ ಅಂತ ಹೇಳಿದ್ರು.

ಇದನ್ನೂ ವೀಕ್ಷಿಸಿ: News Hour: ಸಂಸತ್ ಕಲಾಪದಲ್ಲೂ ಪ್ರತ್ಯೇಕ ರಾಷ್ಟ್ರದ ಕಿಚ್ಚು: ಡಿ.ಕೆ. ಸುರೇಶ್ ಕ್ಷಮೆ ಕೇಳುವಂತೆ ಬಿಜೆಪಿ ಪಟ್ಟು !