ಸರ್ಕಾರದ ಟೀಕೆ..ಓಕೆ.. ದೇಶದ ತಂಟೆಗೆ ಬಂದ್ರೆ ಜೋಕೆ! ಏನು ಹೇಳುತ್ತಿವೆ 3 ಭಾರತೀಯ ಕಾನೂನು!

ಸರ್ಕಾರದ ಟೀಕೆ..ಓಕೆ.. ದೇಶದ ತಂಟೆಗೆ ಬಂದ್ರೆ ಜೋಕೆ! ಏನು ಹೇಳುತ್ತಿವೆ 3 ಭಾರತೀಯ ಕಾನೂನು!

Published : Dec 22, 2023, 02:36 PM IST

ಅಧಿವೇಶನದಲ್ಲಿ ಜಾರಿಗೆ ಬಂತು ದೇಶ ಬದಲಿಸೋ ಕಾಯ್ದೆಗಳು..!
ಅಮೃತಕಾಲದ ನವಭಾರತಕ್ಕೆ ಭಾರತೀಯ ನ್ಯಾಯ ಸಂಹಿತೆ..!
ಕಾನೂನಲ್ಲಿ ಬದಲಾಗಿದ್ದೇನೇನು..? ಬದಲಾಗುವುದೇನೇನು..?

ಅಧಿವೇಶನದಲ್ಲಿ ಜಾರಿಗೆ ಬಂತು ದೇಶ ಬದಲಿಸೋ ಕಾಯ್ದೆಗಳು. ಬ್ರಿಟಿಷ್(British)ಕಾಲದ ಮತ್ತೊಂದು ಸೃಷ್ಟಿ ಈಗ ಇತಿಹಾಸದ ಪುಟ ಸೇರಿದ್ದಾಯ್ತು. ಸರ್ಕಾರವನ್ನ ಟೀಕಿಸಿದ್ರೆ.. ಓಕೆ..ದೇಶದ ತಂಟೆಗೆ ಬಂದ್ರೆ ಜೋಕೆ ಅಂತಿದೆ, ಹೊಸ ಕಾನೂನು. ಪ್ರಧಾನಿ ನರೇಂದ್ರ(Narendra Modi) ಮೋದಿ ಅವರ ನೇತೃತ್ವದಲ್ಲಿ ಭಾರತ ಬದಲಾಗ್ತಾ ಇದೆ. ಈಗ ಅಂಥಾ ಬದಲಾವಣೆ ದೊಡ್ಡಮಟ್ಟದಲ್ಲೇ ನಡೀತಾ ಇದೆ. ಇದೇ ಅಧಿವೇಶನದಲ್ಲಿ, ವಸಾಹತುಶಾಹಿ ಕಾನೂನುಗಳಿಗೆ ತಿಲಾಂಜಲಿ ಇಡೋಕೆ ಮೋದಿ ಸರ್ಕಾರ ಮುಂದಾಗಿದೆ. ಮೋದಿ ಅವರು ಈ ಹಿಂದೆ ಒಂದು ಮಾತು ಹೇಳಿದ್ರು. ಆ ಮಾತನ್ನ ಭಾರತೀಯರು ಸುಲಭವಾಗಿ ಮರೆಯೋಕೆ ಸಾಧ್ಯವಿಲ್ಲ. ಇದು ಮೋದಿ ಅವರ ಮಾತಲ್ಲ.. ಮೋದಿ ಅವರು ನಂಬಿಕೊಂಡಿರೋ ಮಂತ್ರ. ವಸಾಹತುಶಾಲಿ ಮಂಪರಿನಿಂದ ಗುಲಾಮಗಿರಿಯ ನೆನಪಿಂದ ಭಾರತ(India) ಆಚೆ ಬರ್ಬೇಕು ಅನ್ನೋದೇ ಮೋದಿ ಅವರ ದೊಡ್ಡ ಕಸನು. ಆ ಕನಸು ನನಸಾಗಿಸಿಕೊಳ್ಳೋಕೆ. ಮೋದಿ ಅವರು ಮಾಡ್ತಾ ಇರೋ ಪ್ರಯತ್ನ ಒಂದೆರಡಲ್ಲ. ಆ ಪ್ರಯತ್ನಗಳ ಕಂಪ್ಲೀಟ್ ಕಥೆ ನಿಮಗೆ ಹೇಳ್ತೀವಿ. ಆದ್ರೆ ಅದನ್ನ ಹೇಳೋ ಮುಂಚೆ, ಈಗ ದೇಶದಲ್ಲಾಗಿರೋ ಅತಿ ದೊಡ್ಡ ಬದಲಾವಣೆಯ ಕತೆ ಹೇಳ್ತೀವಿ ಕೇಳಿ. ಆ ಮೂರೂ ಕಾನೂನುಗಳನ್ನ(criminal law bill) ಬ್ರಿಟಿಷರ ಕಾಲದಲ್ಲಿ ಸೃಷ್ಟಿಸಲಾಗಿತ್ತು. ನೂರಾರು ವರ್ಷಗಳ ಹಿಂದೆ ಅವನ್ನ ರಚಿಸಿದ್ದರು. ಮೋದಿಜಿ ಪ್ರಧಾನಿಯಾದ ಬಳಿಕ ಗುಲಾಮಿತನದ ಎಲ್ಲಾ ಚಿನ್ಹೆಗಳನ್ನು ಈ ದೇಶದಿಂದ ತೊಲಗಿಸಿ, ಹೊಸ ಆತ್ಮವಿಶ್ವಾಸದೊಂದಿದೆ ಮಹಾನ್ ಭಾರತ ನಿರ್ಮಾಣದ ರಚನೆಗೆ ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದಲ್ಲಿ ಗುಲಾಮಿತನದ ಒಂದೇ ಒಂದು ಸಂಕೇತವೂ ಉಳಿಯದ ಹಾಗೆ ಮಾಡೋಕೆ ಸನ್ನದ್ಧರಾಗಿದ್ದಾರೆ. ಅದನ್ನ ಒಂದೊಂದೇ ಹಂತದಲ್ಲಿ ಸಾಧಿಸ್ತಾ ಇರೋದಕ್ಕೆ ಕಣ್ಣೆದುರೇ ಹತ್ತಾರು ಉದಾಹರಣೆಗಳಿವೆ. ಅಷ್ಟಕ್ಕೂ ಈಗ್ಯಾಕೆ ಈ ಮಾತು ಬಂತು ಅಂತ ಕೇಳ್ತೀರಾ? ಅದಕ್ಕೆ  ಕಾರಣವೂ ಇದೆ.

ಇದನ್ನೂ ವೀಕ್ಷಿಸಿ:  ಹನುಮ ಸಂಕೀರ್ತನಾ ಯಾತ್ರೆಗೆ ಮುಸ್ಲಿಂ ಸಂಘಟನೆಗಳ ವಿರೋಧ: ಅನಾಹುತ ಸಂಭವಿಸಿದ್ರೆ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ !

50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
Read more