ವೈದ್ಯರ ಸಲಹೆಗೆ ಇನ್ಮುಂದೆ ಆಸ್ಪತ್ರೆಗೆ ಹೋಗಬೇಕಾಗಿಲ್ಲ, ವೈದ್ಯರೇ ಕಾಲ್ ಮಾಡ್ತಾರೆ..!

Sep 7, 2020, 10:15 AM IST

ಬೆಂಗಳೂರು (ಸೆ. 07): ಕೊರೊನಾದಿಂದಾಗಿ ರೋಗಿಗಳು ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಾರೆ. ಮನೆಯಲ್ಲಿಯೇ ಉಳಿದು ನಿರ್ಲಕ್ಷ್ಯ ವಹಿಸುತ್ತಾರೆ. ಅಂತವರಿಗಾಗಿ ಸಲಹೆ, ಸಹಕಾರ ನೀಡಲು ವೈದ್ಯರೇ ಮುಂದೆ ಬಂದಿದ್ದಾರೆ. ರೋಗಿಗಳು ಆಸ್ಪತ್ರೆಗೆ ಹೋಗಬೇಕಾಗಿಲ್ಲ. ವೈದ್ಯರೇ ಕರೆ ಮಾಡುವ ಯೋಜನೆಯನ್ನು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಇಲಾಖೆ ಜಾರಿಗೆ ತಂದಿದೆ. 

37 ವೈದ್ಯರಿರುವ ತಂಡ ಜಿಲ್ಲೆಯ ಜನರಿಗೆ ವೈದ್ಯಕೀಯ ಮಾಹಿತಿ ನೀಡುತ್ತದೆ. ಏನೇ ಸಮಸ್ಯೆಗಳಿದ್ದರೂ ಮುಕ್ತವಾಗಿ ಚರ್ಚಿಸಬಹುದಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ರವಿಕುಮಾರ್ ಡಿಹೆಚ್ಓ ಜೊತೆ ಚಿಟ್ ಚಾಟ್ ನಡೆಸಿದ್ದಾರೆ ಬನ್ನಿ ನೋಡೋಣ..!

ಫಿಟ್‌ ಆಗಿರೋಕೆ ಇಡೀ ಮೊಟ್ಟೆನಾ..? ಎಗ್‌ವೈಟ್ ಮಾತ್ರಾನಾ?