ಪೊಲೀಸ್​​​ ಆಗಬೇಕಿದ್ದವನು ಬೆಟ್ಟಿಂಗ್​ ಆಡಿ ಸತ್ತ! ಸೋತಿದ್ದು 18 ಲಕ್ಷ, ಗೆದ್ದಿದ್ದು 19 ಕೋಟಿ!

ಪೊಲೀಸ್​​​ ಆಗಬೇಕಿದ್ದವನು ಬೆಟ್ಟಿಂಗ್​ ಆಡಿ ಸತ್ತ! ಸೋತಿದ್ದು 18 ಲಕ್ಷ, ಗೆದ್ದಿದ್ದು 19 ಕೋಟಿ!

Published : Jul 05, 2025, 01:33 PM IST

ಆನ್‌ಲೈನ್ ಬೆಟ್ಟಿಂಗ್‌ ಚಟಕ್ಕೆ ಬಿದ್ದು ಹಣ ಕಳೆದುಕೊಂಡು, ಸಾಲ ಮಾಡಿಕೊಂಡ ಯುವಕನೊಬ್ಬ ನೇಣಿಗೆ ಶರಣಾಗಿದ್ದಾನೆ. ನಗರದ ಸರಸ್ವತಿ ಬಡಾವಣೆಯ ನಿವಾಸಿ ಶಶಿಕುಮಾರ (25) ಮೃತ ಯುವಕ. ಆತ್ಮಹತ್ಯೆಗೆ ಮುನ್ನ 6 ಪುಟಗಳ ಡೆತ್ ನೋಟ್‌ ಬರೆದು, ಸೆಲ್ಫೀ ವೀಡಿಯೋ ಮಾಡಿದ್ದಾನೆ.

ಆತ ಪೊಲೀಸ್​​ ಆಗಬೇಕು. ಕಾನೂನಿನ ರಕ್ಷಣೆ ಮಾಡಬೇಕು ಅಂತ ಕನಸು ಕಂಡವನು. ತನ್ನ ಕನಸು ನನಸು ಮಾಡಿಕೊಳ್ಳಲು ಪರೀಕ್ಷೆಗಳನ್ನ ಬರೆದಿದ್ದ. ಆತನ ಹೆತ್ತವರು ಮಗ ಏನಾದ್ರೂ ಸಾಧಿಸಿಯೇ ತೀರುತ್ತಾನೆ ಅಂದುಕೊಂಡಿದ್ರು. ಆದ್ರೆ ಆವತ್ತೊಂದು ದಿನ, ಮನೆಯಲ್ಲಿರುವಾಗ್ಲೇ ಆತ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ. ಯಾಕೆ ಸತ್ತ ಏನಾಯ್ತು ಅಂತ ಯೋಚಿಸುತ್ತಿರುವಾಗ್ಲೇ ಅವನ ಬೆಡ್​ ರೂಮ್​ನಲ್ಲಿ ಒಂದು ಡೆತ್​ ನೋಟ್​ ಸಿಕ್ಕಿತ್ತು. ಆತ ಬರೆದಿದ್ದನ್ನ ಕಂಡು ಹೆತ್ತವರೇ ಕಂಗಾಲಾಗಿದ್ರು. ಕಾರಣ ಆತ ಆನ್​ಲೈನ್​​ ಬೆಟ್ಟಿಂಗ್​ಗೆ ದಾಸನ್ನಾಗಿಬಿಟ್ಟಿದ್ದ. ಅಷ್ಟೇ ಅಲ್ಲ ಆ ಬೆಟ್ಟಿಂಗ್​​ನಿಂದ ಕೋಟಿ ಲೆಕ್ಕದಲ್ಲಿ ಮೋಸ ಹೋಗಿದ್ದ. ಅಷ್ಟಕ್ಕೂ ಆನ್​ಲೈನ್​ ಜೂಜಿಗೆ ಬಿದ್ದು ಪ್ರಾಣ ಬಿಟ್ಟವನು ಯಾರು? ಆತನಿಗೆ ಮೋಸವಾಗಿದ್ದೇಗೆ? ಬೆಟ್ಟಿಂಗ್​​, ಆನ್‌ಲೈನ್​ ಗೇಮ್​ಗಳಿಗೆ ದಾಸರಾಗಿರುವವರು ಮತ್ತು ಪೋಷಕರು ನೋಡಲೇಬೇಕಾದ ಸ್ಟೋರಿಯೇ ಇವತ್ತಿನ ಎಫ್​.ಐ.ಆರ್.

₹19 ಕೋಟಿ ಗೆದ್ದಿದ್ದೆ:

ಆನ್‌ಲೈನ್ ಗೇಮಿಂಗ್‌ನಲ್ಲಿ ₹18 ಲಕ್ಷ ಕಳೆದುಕೊಂಡಿದ್ದೇನೆ. ಇದೇ ಆನ್ ಲೈನ್ ಗೇಮಿಂಗ್‌ನಲ್ಲಿ ₹19 ಕೋಟಿಗೂ ಅಧಿಕ ಹಣ ಗೆದ್ದಿದ್ದೇನೆ. ಆದರೆ, ಆನ್‌ಲೈನ್ ಗೇಮ್ ನಡೆಸುವವರು ನನಗೆ ಹಣ ಕೊಟ್ಟಿಲ್ಲ. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದೇನೆ. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆಟದಲ್ಲಿ ₹19 ಲಕ್ಷ ಕಳೆದುಕೊಂಡು ತೀವ್ರ ಖಿನ್ನತೆಗೆ ಒಳಗಾಗಿದ್ದೇನೆ ಎಂದು ಶಶಿಕುಮಾರ ಡೆತ್ ನೋಟ್‌ನಲ್ಲಿ ವಿವರಿಸಿದ್ದಾರೆ.

24:26ಗಂಡನ ಮೊಬೈಲ್‌ನಲ್ಲಿತ್ತು ಅತ್ತೆ ಜೊತೆಗಿನ ಸರಸದ ಸಾಕ್ಷಿ! ಮದುವೆಯಾಗಿ 15 ದಿನಕ್ಕೆ ಗಂಡನ ಅಸಲಿಯತ್ತು ಬಯಲು!
22:33ಇದು ದಾವಣಗೆರೆ ಬಂಗಾರದ ಕಥೆ! ಬ್ಯಾಂಕ್​ ರಾಬರಿ ರೋಚಕ ಇನ್ವೆಸ್ಟಿಗೇಷನ್! 6 ತಿಂಗಳ ನಂತರ ಖದೀಮರು ಅಂದರ್!
02:46ಸುಗ್ರೀವಾಜ್ಞೆಗಿಲ್ಲ ಕಿಂಚಿತ್ತೂ ಬೆಲೆ, ಕಂತು ಕಟ್ಟಕ್ಕೆ ತಡವಾಗಿದ್ದಕ್ಕೆ ಮೈಕ್ರೋಫೈನಾನ್ಸ್‌ ಸಿಬ್ಬಂದಿಯಿಂದ ಹಲ್ಲೆ!
01:53ದಾವಣಗೆರೆ: ಸಿಲಿಂಡರ್ ಸ್ಫೋಟಕ್ಕೆ ಹೊತ್ತಿ ಉರಿದ ಮನೆ, ಇಡೀ ಗ್ರಾಮದಲ್ಲಿ ಆವರಿಸಿದ ದಟ್ಟ ಹೊಗೆ!
01:29ಪೋಷಕರೇ ಎಚ್ಚರ: ಆಟವಾಡುತ್ತಾ ನೀರಿನ ಮೋಟರ್ ಹಿಡಿದ ಮಗು ಕರೆಂಟ್‌ ಶಾಕ್‌ನಿಂದ ಸಾವು!
03:41ಕುರ್‌ಕುರೇಗಾಗಿ 2 ಕುಟುಂಬಗಳ ನಡುವೆ ಮಾರಾಮಾರಿ, 10 ಮಂದಿ ಆಸ್ಪತ್ರೆಗೆ, ಊರು ಬಿಟ್ಟ 25 ಜನ!
03:33ರಾಜ್ಯ ಸರ್ಕಾರದಲ್ಲಿ ಮತ್ತೆ ಶಾಸಕ vs ಸಚಿವರ ಸಂಘರ್ಷ!
02:21ಬಸ್ ಮತ್ತು ಬಸ್ ಡಿಪೋಗಾಗಿ ವಿದ್ಯಾರ್ಥಿಗಳಿಂದ ಜಗಳೂರು To ದಾವಣಗೆರೆ ಪಾದಯಾತ್ರೆ!
44:35ದಾವಣಗೆರೆಯಲ್ಲಿ ಶಕ್ತಿಪ್ರದರ್ಶನಕ್ಕೆ ಯತ್ನಾಳ್ ಟೀಂ ಪ್ಲಾನ್!
Read more