ಸ್ವೆಟರ್ ಹಗರಣ: ನೀವು ಆನೆ ಆಗಿದ್ದರೆ ಪಲಾಯನ ಮಾಡ್ಬೇಡಿ, ಜಗ್ಗೇಶ್‌ಗೆ ಚರ್ಚೆಗೆ ಆಹ್ವಾನ

Aug 25, 2021, 4:17 PM IST

ಬೆಂಗಳೂರು, (ಆ.25): ಚಂದನವನದ ಮೋಸ್ಟ್​ ಫೇಮಸ್​ ಹಾಸ್ಯ ನಟ, ಹೀರೋ ಕೋಮಲ್​ ವಿರುದ್ಧ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಸಂಘಟನೆಗಳ ವತಿಯಿಂದ ಗಂಭೀರ ಆರೋಪ ಕೇಳಿ ಬರುತ್ತಿದ್ದು, ವಿದ್ಯಾರ್ಥಿಗಳಿಗೆ ನೀಡಬೇಕಿದ್ದ ಸ್ವೆಟರ್​ ಯೋಜನೆಯ ಹಣವನ್ನ ತಮ್ಮ ಲಾಭಕ್ಕೆ ಕೋಮಲ್​ ಬಳಸಿಕೊಂಡಿದ್ದಾರೆ ಎಂಬ ಆರೋಪ ಬೆಳಕಿಗೆ ಬಂದಿದೆ.

ಕೋಮಲ್ ಸ್ವೆಟರ್ ಹಗರಣ: ದಲಿತ ಸಂಘರ್ಷ ಸಮಿತಿಯನ್ನು ನಾಯಿಗೆ ಹೋಲಿಸಿದ ಜಗ್ಗೇಶ್?

ಆದ್ರೆ, ಈ ಆರೋಪವನ್ನು ಜಗ್ಗೇಶ್ ತಳ್ಳಿಹಾಕಿದ್ದಾರೆ. ಇದರಿಂದ ಆಕ್ರೋಶಗೊಂಡ ಡಿಎಸ್‌ಎಸ್‌ ಮುಖಂಡ ಸಿ.ಎಸ್ ರಘು ಕೆಂಡಾಮಂಡಲರಾಗಿದ್ದು, ನೀವು ಆನೆ ಆಗಿದ್ದರೆ ಪಲಾಯನ ಮಾಡಬೇಡಿ ಎಂದು ಜಗ್ಗೇಶ್‌ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ.