ವಿವಾದಗಳ ಸರದಾರ ಮಂಜ್ರೇಕರ್‌ಗೆ ಬಿಸಿಸಿಐ ಗೇಟ್‌ಪಾಸ್ ನೀಡಿದ್ದೇಕೆ..?

Mar 15, 2020, 4:24 PM IST

ನವದೆಹಲಿ(ಮಾ.15): ಅತಿಯಾದರೆ ಅಮೃತವೂ ವಿಷವಾಗುತ್ತೆ ಎನ್ನುವ ಮಾತು ಕ್ರಿಕೆಟ್ ವೀಕ್ಷಕ ವಿವರಣೆಗಾರ ಸಂಜಯ್‌ ಮಂಜ್ರೇಕರ್‌ಗೆ ಸರಿಯಾಗಿ ಒಪ್ಪುತ್ತದೆ. ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಮಂಜ್ರೇಕರ್‌ಗೆ ಇದೀಗ ಬಿಸಿಸಿಐ ಕಾಮೆಂಟೇಟರಿಯಿಂದ ಗೇಟ್‌ಪಾಸ್ ನೀಡಿದೆ.

ವೀಕ್ಷಕ ವಿವರಣೆಗಾರ ಮಂಜ್ರೇಕರ್‌ಗೆ ಬಿಸಿಸಿಐ ಗೇಟ್‌ಪಾಸ್.!

13ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಂದೂಡಿದ ಬೆನ್ನಲ್ಲೇ ಬಿಸಿಸಿಐ ಮಂಜ್ರೇಕರ್ ಅವರನ್ನೂ ಕಾಮೆಂಟೇಟರಿ ಪ್ಯಾನಲ್‌ನಿಂದ ಹೊರಗಿಡುವ ತೀರ್ಮಾನ ತೆಗೆದುಕೊಂಡಿದೆ.

ಕೊರೋನಾ ವೈರಸ್; IPL 2020 ಟೂರ್ನಿ ರದ್ದು ಮಾಡಿದ ಬಿಸಿಸಿಐ

ಬಿಸಿಸಿಐ ಈ ದಿಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ಉಳಿದ ವೀಕ್ಷಕ ವಿವರಣೆಗಾರರಿಗೂ ಎಚ್ಚರಿಕೆ ರವಾನಿಸಿದೆ. ಸಂಜಯ್ ಮಂಜ್ರೇಕರ್‌ಗೆ ಕಾಮೆಂಟೇಟರಿಯಿಂದ ಗೇಟ್‌ಪಾಸ್ ನೀಡಲು ಕಾರಣವೇನು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.