ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?

ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?

Published : Nov 09, 2025, 09:11 AM IST

ಕಿರಿಕ್ ಬ್ಯೂಟಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಎಂಗೇಜ್​ಮೆಂಟ್ ವಿಷ್ಯ ಈಗಾಗ್ಲೇ ಜಗಜ್ಜಾಹೀರಾಗಿದೆ. ನಿಶ್ಚಿತಾರ್ಥದ ಬಳಿಕ ವಿಜಯ್, ರಶ್ಮಿಕಾ ಸಿನಿಮಾಗಳಲ್ಲಿ ಬ್ಯುಸಿಯಾದ್ರೆ , ಅವರ ಮನೆಮಂದಿ ಮದುವೆಗೆ ಡೇಟ್ ಫಿಕ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲ ಮದುವೆ ನಡೆಯೋ ಜಾಗ ಕೂಡ ಫಿಕ್ಸ್ ಆಗಿದೆ.

ಕಿರಿಕ್ ಬ್ಯೂಟಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಎಂಗೇಜ್​ಮೆಂಟ್ ವಿಷ್ಯ ಈಗಾಗ್ಲೇ ಜಗಜ್ಜಾಹೀರಾಗಿದೆ. ನಿಶ್ಚಿತಾರ್ಥದ ಬಳಿಕ ವಿಜಯ್, ರಶ್ಮಿಕಾ ಸಿನಿಮಾಗಳಲ್ಲಿ ಬ್ಯುಸಿಯಾದ್ರೆ , ಅವರ ಮನೆಮಂದಿ ಮದುವೆಗೆ ಡೇಟ್ ಫಿಕ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲ ಮದುವೆ ನಡೆಯೋ ಜಾಗ ಕೂಡ ಫಿಕ್ಸ್ ಆಗಿದೆ.

ರಶ್ಮಿಕಾ-ವಿಜಯ್ ಕಲ್ಯಾಣಕ್ಕೆ ಮುಹೂರ್ತ ಫಿಕ್ಸ್..!
ಯೆಸ್ ಕಳೆದ ಅಕ್ಟೋಬರ್ ತಿಂಗಳಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಎಂಗೇಜ್​ಮೆಂಟ್ ಗುಟ್ಟಾಗಿ ನಡೆದಿತ್ತು. ಎಂಗೇಜ್​ಮೆಂಟ್ ಟೈಂನಲ್ಲಿ ಫೆಬ್ರುವರಿ ತಿಂಗಳಲ್ಲಿ ಮದುವೆ ಮಾಡ್ಲಿಕ್ಕೆ ಇಬ್ಬರ ಮನೆ ಮಂದಿ ನಿರ್ಧಾರ ಮಾಡಿದ್ರು. ಫೈನಲಿ ಈಗ ಈ ತಾರಾಜೋಡಿ ಕಲ್ಯಾಣಕ್ಕೆ ಡೇಟ್ ಫಿಕ್ಸ್ ಮಾಡಿದ್ದಾರೆ. ಫೆಬ್ರುವರಿ 26ನೇ ಈ ತಾರೀಖು ವಿಜಯ್-ರಶ್ಮಿಕಾ ಮದುವೆ ನಡೆಯಲಿದೆ.

ರಾಜಸ್ಥಾನ ಅರಮನೆಯಲ್ಲಿ ತಾರಾಜೋಡಿ ಮದುವೆ..!
ಹೌದು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ರಾಜಸ್ಥಾನದ ಪ್ಯಾಲೇಸ್ ಹೊಟೇಲ್‌ನಲ್ಲಿ ಮದುವೆ ಆಗೋದಕ್ಕೆ ನಿರ್ಧಾರ ಮಾಡಿದ್ದಾರೆ. ಕೋಟೆ ನಗರಿ ರಾಜಸ್ಥಾನದಲ್ಲಿ ಅನೇಕ ಅರಮನೆಗಳಿವೆ. ಉದಯಪುರದ ಅರಮನೆಯನ್ನ ಹೊಟೇಲ್ ಆಗಿ ಬದಲಾಯಿಸಿದ್ದು ಅಲ್ಲಿ ಇವೆಂಟ್​ಗಳನ್ನ ನಡೆಸೋದಕ್ಕೆ ಬಾಡಿಗೆ ಕೊಡಲಾಗುತ್ತೆ. ಈ ಉದಯಪುರ ಪ್ಯಾಲೇಸ್ ಹೊಟೇಲ್​ನಲ್ಲೇ ರಶ್ಮಿಕಾ ವಿಜಯ್ ಮದುವೆ ನಡೆಯೋದು ಫಿಕ್ಸ್ ಆಗಿದೆ.

ಮಡಿಕೇರಿ, ಹೈದ್ರಾಬಾದ್ ಬಿಟ್ಟು ಉದಯಪುರ ಯಾಕೆ..?
ರಶ್ಮಿಕಾ ಮಂದಣ್ಣ ಮಡಿಕೇರಿ ಮೂಲದವರು. ಕೊಡವ ಕುಟುಂಬದವರಾದ ಅವರ ಮೂಲ ಮನೆ ಈಗಲೂ ವಿರಾಜಪೇಟೆಯಲ್ಲಿದೆ. ಇನ್ನೂ ದೇವರಕೊಂಡ ಫ್ಯಾಮಿಲಿ ಹೈದರಾಬಾದ್​ನವರು. ಸೋ ವಧು-ವರ ಇಬ್ಬರ ಜಾಗವನ್ನೂ ಬಿಟ್ಟು ರಾಜಸ್ಥಾನದ ಉದಯಪುರದಲ್ಲಿ ಮದುವೆ ನಡೆಸಲಾಗ್ತಾ ಇದೆ. ಇದಕ್ಕೆ ಕಾರಣ ಬೇರೆನೂ ಇಲ್ಲ.. ಖಾಸಗಿತನಕ್ಕೆ ಅಡ್ಡಿ ಬರಬಾರದು ಅಂತ.

ಫೆ.26ಕ್ಕೆ ಡೆಸ್ಟಿನೇಷನ್ ವೆಡ್ಡಿಂಗ್.. ಆಪ್ತರಿಗಷ್ಟೇ ಆಹ್ವಾನ..!
ಈ ಹಿಂದೆ ಇದೇ ಉದಯಪುರ ಪ್ಯಾಲೇಸ್ ಹೊಟೇಲ್​ನಲ್ಲಿ ಹಲವು ಸೆಲೆಬ್ರಿಟಿಗಳ ಮದುವೆ ನಡೆದಿದೆ. ಇಲ್ಲಿಯೇ ರಶ್ಮಿಕಾ- ವಿಜಯ್ ಕೂಡ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಳ್ತಾ ಇದ್ದು, ತೀರಾ ಆಪ್ತರಿಗೆ ಮಾತ್ರ ಆಹ್ವಾನ ಹೋಗಲಿದೆಯಂತೆ.

ವಿಜಯ್ ರಶ್ಮಿಕಾದೂ ಬರೊಬ್ಬರಿ 8 ವರ್ಷಗಳ ಲವ್​ ಸ್ಟೋರಿ. ಫೈನಲಿ ಅದಕ್ಕೀಗ ಅಧಿಕೃತ ಮುದ್ರೆ ಬೀಳ್ತಾ ಇದೆ. ಮುಂದಿನ ವರ್ಷ ಗೀತಾ ಗೋವಿಂದ ಸತಿಪತಿರಾಗ್ತಾ ಇದ್ದಾರೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
02:48ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!
04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
Read more