
ರಾಜಮೌಳಿ ಮತ್ತೊಂದು ದೊಡ್ಡ ಹೆಜ್ಜೆ ಅಂದ್ರೆ ಅದು ವಾರಣಾಸಿ.. ಪ್ರಿನ್ಸ್ ಮಹೇಶ್ ಬಾಬು ಜೊತೆ ವಾರಣಾಸಿಯ ಅಖಾಡಕ್ಕೆ ಇಳಿದಿರೋ ರಾಜಮೌಳಿ ಕನ್ನಡಿಗರನ್ನೂ ವಾರಣಾಸಿ ಲೋಕಕ್ಕೆ ಕರೆದೊಯ್ಯಲು ಬಹುದೊಡ್ಡ ಪ್ಲ್ಯಾನ್ ಮಾಡಿದ್ದಾರೆ.
ಭಾರತೀಯ ಚಿತ್ರರಂಗದ ಭುಜಬಲ ಎಸ್.ಎಸ್.ರಾಜಮೌಳಿ ಮತ್ತೊಂದು ದೊಡ್ಡ ಹೆಜ್ಜೆ ಅಂದ್ರೆ ಅದು ವಾರಣಾಸಿ.. ಪ್ರಿನ್ಸ್ ಮಹೇಶ್ ಬಾಬು ಜೊತೆ ವಾರಣಾಸಿಯ ಅಖಾಡಕ್ಕೆ ಇಳಿದಿರೋ ರಾಜಮೌಳಿ ಕನ್ನಡಿಗರನ್ನೂ ವಾರಣಾಸಿ ಲೋಕಕ್ಕೆ ಕರೆದೊಯ್ಯಲು ಬಹುದೊಡ್ಡ ಪ್ಲ್ಯಾನ್ ಮಾಡಿದ್ದಾರೆ. ಅದಕ್ಕೆ ಬಾದ್ ಷಾ ಕಿಚ್ಚ ಸುದೀಪ್ಗೆ ಗಾಳ ಹಾಕಿದ್ದಾರೆ ನಮ್ಮ ಜಕ್ಕಣ್ಣ.. ಹಾಗಾದ್ರೆ ಮೌಳಿಯ ವಾರಣಾಸಿಗೂ, ಬಾದ್ ಷಾ ಸುದೀಪ್ಗೂ ಏನು ಸಂಬಂಧ. ಎಸ್.ಎಸ್.ರಾಜಮೌಳಿ ಈಗ ಭಾರತೀಯ ಚಿತ್ರರಂಗವನ್ನ ಮತ್ತೆ ಆವರಿಸಿಕೊಳ್ತಿದ್ದಾರೆ. ತ್ರಿಬಲ್ ಆರ್ ಸಿನಿಮಾ ಆದ್ಮೇಲೆ ಸೈಲೆಂಟ್ ಆಗಿ ಕೆಲಸ ಮಾಡುತ್ತಿದ್ದ ಜಕ್ಕಣ್ಣ, ಈಗ ವೈಲೆಂಟ್ ಆಗಿದ್ದಾರೆ. ಅದು ವಿವಾಗದಿಂದಲೂ ಹೌದು. ಹೊಸ ಸಿನಿಮಾ ಅನೌನ್ಸ್ನಿಂದಲೂ ಹೌದು. ರಾಜಮೌಳಿ ನಾನು ಹನುಮಂತನ ನಂಬುವುದಿಲ್ಲ ಅಥ ಹೇಳಿಕೆ ಕೊಟ್ಟಿದ್ದಾರೆಂದು ಕೇಸ್ಗಳು ದಾಖಲಾಗ್ತಿವೆ.
ಇದು ಆಂಧ್ರದ ತುಂಬೆಲ್ಲಾ ವಿವಾದದ ಹೊಗೆ ಎಬ್ಬಿಸಿದೆ. ಆದ್ರೆ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಮೌಳಿ ತನ್ನ ಸಿನಿಮಾ ಟೈಟಲ್ ವಾರಣಾಸಿ ಎಂದು ಅನೌನ್ಸ್ ಮಾಡಿಯೇ ಬಿಟ್ಟಿದ್ದಾರೆ. ಟೌಟಲ್ ಅನೌನ್ಸ್ ಆಗುತ್ತಿದ್ದಂತೆ ಮತ್ತೊಂದು ವಿಚಾರ ಸ್ಯಾಂಡಲ್ವುಡ್ನಲ್ಲಿ ಬುಸುಗುಟ್ಟುತ್ತಿದೆ. ಆ ಕಡೆ ವಾರಣಾಸಿ ಸುವಾಸನೆ ಆದ್ರೆ ಇಲ್ಲಿ ರಾಜಮೌಳಿ ಕಣ್ಣು ಮತ್ತೆ ಕಿಚ್ಚನ ಮೇಲೆ ಬಿದ್ದಿದೆ ಅನ್ನೋ ಪ್ರೀತಿಯ ವೇದನೆ ಶುರುವಾಗಿದೆ. ಯಾಕಂದ್ರೆ ವಾರಣಾಸಿ ಸಿನಿಮಾಗಾಗಿ ಸುದೀಪ್ ಗೆ ಮೌಳಿ ಗಾಳ ಹಾಕಿದ್ದಾರಂತೆ. ಮಹೇಶ್ ಬಾಬು ಜೊತೆ ನಟಿಸೋಕೆ ಸುದೀಪ್ಗೆ ಆಫರ್ ಮಾಡಲಾಗಿದ್ಯಂತೆ. ತೆಲುಗು ಚಿತ್ರರಂಗದಲ್ಲಿ ಕಿಚ್ಚ ಯಾರ ಟೀಂ ಅಂದ್ರೆ ಎಲ್ಲರಿಗೂ ಗೊತ್ತು ಅದು ರಾಜಮೌಳಿ ಟೀಮ್ ಅನ್ನೋದು.
ಸುದೀಪ್ ನಟನೆ ಬಗ್ಗೆ ಅರೆದು ಕುಡಿದಿರೋ ರಾಜಮೌಳಿ ಕಿಚ್ಚನನ್ನ ಆ ವಿಷಯದಲ್ಲಿ ಬಿಗಿದಪ್ಪಿಕೊಳ್ತಾರೆ. ಸುದೀಪ್ ಅದ್ಭತ ನಟ ಅಂತ ಹಲವು ಭಾರಿ ರಾಜಮೌಳಿಯೇ ಸರ್ಟಿಫಿಕೆಟ್ ಕೊಟ್ಟಿದ್ದು ಇದೆ. ಅಷ್ಟೆ ಅಲ್ಲ ಜಕ್ಕಣ್ಣನ ಸಿನಿಮಾ ಬಂದ್ರೆ ಕಣ್ಣು ಮುಚ್ಚಿಕೊಂಡು ಕಣ್ಣಿಗೊತ್ತಿಕೊಳ್ಳೋ ಸುದೀಪ್ ಈಗ ಹಾಗು ಬಾಹುಬಲಿ ಸಿನಿಮಾದಲ್ಲಿ ನಟಿಸಿರೋದನ್ನ ಮರೆಯೋಕೆ ಸಾಧ್ಯವಿಲ್ಲ. ರಾಜಮೌಳಿಯ ವಾರಣಾಸಿಗೆ ಪ್ರಮುಖ ಪಾತ್ರಗಳನ್ನ ರಿವೀಲ್ ಮಾಡಲಾಗಿದೆ. ಪ್ರಿನ್ಸ್ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರ್ ಹೆಸರುಗಳು ಅನೌನ್ಸ್ ಆಗಿವೆ.
ಇನ್ನುಳಿದಂತೆ ಎಲ್ಲಾ ಮುಖ್ಯ ಪಾತ್ರಗಳಿಗೂ ಹುಡುಕಾಟ ಶುರುವಾಗಿದ್ದು, ವೀರ ಆಂಜನೇಯನ ಪಾತ್ರಕ್ಕಾಗಿ ಸುದೀಪ್ ನಟಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದ್ರೆ ಈ ಪಾತ್ರಕ್ಕೆ ಕಿಚ್ಚ ಒಪ್ಪಿಕೊಂಡಿದ್ದಾರಾ..? ಅದಕ್ಕೆ ಸುದೀಪ್ ಮನವೇ ಉತ್ತರ ಕೊಡಬೇಕು. ರಾಜಮೌಳಿ ಕಥೆ ಕಟ್ಟೋದ್ರಲ್ಲಿ ನಂಬರ್ ಒನ್ ಅಂತ ಮತ್ತೆ ಹೇಳಬೇಕಿಲ್ಲ. ಅವರದ್ಧೇ ಕಲ್ಪನಾ ಲೋಕದಲ್ಲಿ ಹೊಸ ಪ್ರಪಂಚವನ್ನೇ ಸೃಷ್ಟಿಸುತ್ತಾರೆ. ಈಗ್ಲೂ ವಾರಣಾಸಿಯಾ ರಿಯಲ್ ಸ್ಟೋರಿಯನ್ನೇನು ಹೇಳುತ್ತಿಲ್ಲ ಮೌಳಿ. ಬದ್ಲಾಗಿ ಅವರದ್ದೇ ಕಲ್ಪನೆಯಲ್ಲಿ ಟೈಮ್ ಟ್ರಾವೆಲರ್ ಸ್ಟೋರಿಯನ್ನ ಸಿದ್ಧಪಡಿಸಿದ್ದಾರೆ. ಅದರಲ್ಲಿ ಬಾದ್ ಷಾ ಸುದೀಪ್ಗೂ ಒಂದು ಸ್ಥಾನ ಇದೆ ಅನ್ನೋದೆ ಇಂಟ್ರೆಸ್ಟಿಂಗ್.