RRR: ಪ್ರತಿ ನಿಮಿಷವೂ ರೋಚಕ, ಮೈನವಿರೇಳಿಸುವ ದೃಶ್ಯ ವೈಭವ.!

RRR: ಪ್ರತಿ ನಿಮಿಷವೂ ರೋಚಕ, ಮೈನವಿರೇಳಿಸುವ ದೃಶ್ಯ ವೈಭವ.!

Published : Mar 26, 2022, 11:19 AM ISTUpdated : Mar 26, 2022, 11:49 AM IST

RRR ನಲ್ಲಿ ಜ್ಯೂ, ಎನ್‌ಟಿಆರ್ ಕೋಮರಂ ಭೀಮ್ ಪಾತ್ರ ಮಾಡಿದ್ದಾರೆ. ರಾಮ್ ಚರಣ್ ಅಲ್ಲೂರಿ ಸೀತರಾಮ ರಾಜು ರೋಲ್‌ನಲ್ಲಿ ವಿಜೃಂಭಿಸಿದ್ದಾರೆ. ಇಬ್ಬರು ಸೌತ್ ಸೂಪರ್ ಸ್ಟಾರ್ಸ್. 

RRR ಸ್ಟೋರಿ ತುಂಬಾ ಸಿಂಪಲ್, ಆದ್ರೆ ಅದನ್ನ ಮೌಳಿ ತೋರಿಸಿದ ರೀತಿ ವಾವ್ಹ್ ಅನ್ನಿಸುತ್ತೆ. ಸಿನಿಮಾದ ಕತೆ ಕೋಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರದ್ದು. ಸೀತಾರಾಮ ರಾಜು ಬ್ರಿಟೀಷರ ಸರ್ಕಾರದಲ್ಲಿ ನಿಷ್ಠಾವಂತ ಪೊಲೀಸ್ ಅಧಿಕಾರಿ, ಕೋಮರಂ ಭೀಮ್ ಕಾಡಿನಲ್ಲಿರೋ ಕೊಂಡ ಸಮುದಾಯದ ಕಾವಲುಗಾರ. ಕೋಮರಂ ಭೀಮ್ ಕಾಡಿನಿಂದ ನಗರಕ್ಕೆ ಬರುತ್ತಾನೆ. ಅದಕ್ಕೊಂದು ಉದ್ದೇಶ ಇದೆ. ಮತ್ತೊಂದು ಕಡೆ ಅಲ್ಲೂರಿ ಸೀತ ರಾಮ ರಾಜು ಆಂಗ್ಲರಿಗೆ ತೋರುತ್ತಿರುವ ನಿಷ್ಠೆಯ ಹಿಂದೆಯೂ ಒಂದು ಉದ್ದೇಶ ಇದೆ. ಈ ಎರಡೂ ಉದ್ದೇಶಗಳು ಒಂದು ಕಡೆ ಸೇರುತ್ತವೆ. ರಾಮ್ ಬೆಂಕಿ, ಭೀಮ್ ನೀರು. ಇವೆರಡೂ ಒಂದಾಗುತ್ತದೆ. ಆ ಬಳಿಕ RRR ನಲ್ಲಿ ಕಾಡ್ಗಿಚ್ಚು, ಪ್ರಳಯ ಸುನಾಮಿ ಎದ್ದು ಬಿಡುತ್ತೆ.

RRR ನಲ್ಲಿ ಜ್ಯೂ, ಎನ್‌ಟಿಆರ್ ಕೋಮರಂ ಭೀಮ್ ಪಾತ್ರ ಮಾಡಿದ್ದಾರೆ. ರಾಮ್ ಚರಣ್ ಅಲ್ಲೂರಿ ಸೀತರಾಮ ರಾಜು ರೋಲ್‌ನಲ್ಲಿ ವಿಜೃಂಭಿಸಿದ್ದಾರೆ. ಇಬ್ಬರು ಸೌತ್ ಸೂಪರ್ ಸ್ಟಾರ್ಸ್. ಇಬ್ಬರನ್ನು ಒಂದೇ ಫ್ರೇಮ್‌ನಲ್ಲಿ ತೋರಿಸೋದು ತುಂಬಾ ಕಷ್ಟ. ಬಟ್, ಜಕ್ಕಣ್ಣ ರಾಜಮೌಳಿ ಮಿಸ್ಟರ್ ಪರ್ಫೆಕ್ಟ್ ಅನ್ನೋದು ಇಲ್ಲೂ ಸಾಭೀತಾಗಿದೆ. ಒಂದು ದೃಶ್ಯದಲ್ಲಿ ಜೂ ಎನ್‌ಟಿಆರ್‌ ಪಾತ್ರ ಮೇಳೈಸಿದ್ರೆ, ಮತ್ತೊಂದು ದೃಶ್ಯದಲ್ಲಿ ರಾಮ್ ಚರಣ್ ಘರ್ಜಿಸುತ್ತಾರೆ. ಈ ಎರಡೂ ಪಾತ್ರಗಳು ಒಟ್ಟಿಗೆ ಕಾಣಿಸಿಕೊಂಡಾಗ ಇಬ್ಬರ ಅಭಿಮಾನಿಗಳು ಒಟ್ಟಿಗೆ ಸಂಭ್ರಮಿಸುವಂತೆ ಮಾಡಿದ್ದಾರೆ.

ರಾಜಮೌಳಿ, ಸಿನಿಮಾದ ಕತೆಯಲ್ಲಿ ಅದೆಷ್ಟು ಗಟ್ಟಿಯಾಗಿದ್ದಾರೋ ಸಿನಿಮಾದ ಹಾಡುಗಳು ಕಣ್ಣಲ್ಲಿ ಕೂತುಬಿಡುತ್ತೆ. ನಾಟು-ನಾಟು ಹಾಡಿನಲ್ಲಿ ರಾಮ್ ಚರಣ್ ಜ್ಯೂ, ಎನ್ಟಿಆರ್ ಡಾನ್ಸ್ ಇಡೀ ಚಿತ್ರಮಂದಿರವೇ ಶಿಳ್ಳೆಯಲ್ಲಿ ಮುಳುಗುಂತೆ ಮಾಡುತ್ತೆ. ಸಿನಿಮಾದ ಕೊನೆಯಲ್ಲಿ ಬರೋ ಮತ್ತೊಂದು ಹಾಡು ದೇಶಪ್ರೇಮವನ್ನ ಮತ್ತಷ್ಟು ಉಕ್ಕಿ ಬರುವಂತೆ ಮಾಡುತ್ತೆ. 

 

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more