ಪುಷ್ಪ-2 ಕಾಲ್ತುಳಿತ, ಬದುಕುಳಿದ ಬಾಲಕನ ಆರ್ತನಾದ:‘ಅಮ್ಮ ಎಲ್ಲಿ..?’ ಅಲ್ಲು ಅಭಿಮಾನಿಯ ಪ್ರಶ್ನೆಗೆ ಉತ್ತರವೆಲ್ಲಿ?

ಪುಷ್ಪ-2 ಕಾಲ್ತುಳಿತ, ಬದುಕುಳಿದ ಬಾಲಕನ ಆರ್ತನಾದ:‘ಅಮ್ಮ ಎಲ್ಲಿ..?’ ಅಲ್ಲು ಅಭಿಮಾನಿಯ ಪ್ರಶ್ನೆಗೆ ಉತ್ತರವೆಲ್ಲಿ?

Published : May 01, 2025, 05:21 PM ISTUpdated : May 01, 2025, 05:37 PM IST

ಪುಷ್ಪ-2 ಸಿನಿಮಾ ಪ್ರೀಮಿಯರ್ ಶೋ ಸಮಯದಲ್ಲಿ ನಡೆದ ಕಾಲ್ತುಳಿತ.. ಆ ಬಳಿಕ ನಡೆದ ಹೈಡ್ರಾಮಾ ಎಲ್ಲವೂ ಗೊತ್ತೇ ಇದೆ. ಆ ಕಾಲ್ತುಳಿತದಲ್ಲಿ ಸಿಲುಕಿ 5 ತಿಂಗಳ ಕಾಲ ಕೋಮಾದಲ್ಲಿದ್ದ ಬಾಲಕ ಕೊನೆಗೂ ಮೃತ್ಯು ಜಯಿಸಿದ್ದಾನೆ. 

ಪುಷ್ಪ-2 ಸಿನಿಮಾ ಪ್ರೀಮಿಯರ್ ಶೋ ಸಮಯದಲ್ಲಿ ನಡೆದ ಕಾಲ್ತುಳಿತ.. ಆ ಬಳಿಕ ನಡೆದ ಹೈಡ್ರಾಮಾ ಎಲ್ಲವೂ ಗೊತ್ತೇ ಇದೆ. ಆ ಕಾಲ್ತುಳಿತದಲ್ಲಿ ಸಿಲುಕಿ 5 ತಿಂಗಳ ಕಾಲ ಕೋಮಾದಲ್ಲಿದ್ದ ಬಾಲಕ ಕೊನೆಗೂ ಮೃತ್ಯು ಜಯಿಸಿದ್ದಾನೆ. ಆದ್ರೆ ಬದುಕುಳಿದ ಅಲ್ಲು ಅಭಿಮಾನಿಯ ಆರ್ತನಾದ ಕೇಳಿದ್ರೆ ಎಂಥವರಿಗೂ ಕಣ್ತುಂಬಿ ಬರುತ್ತೆ. ಪುಷ್ಪ-2.. ಭಾರತೀಯ ಸಿನಿರಂಗದಲ್ಲಿ ಹೊಸ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಸಿನಿಮಾ. ಆದ್ರೆ ಇಂಥಾ ಪುಷ್ಪ-2 ಬಿಡುಗಡೆ ಸಮಯದಲ್ಲಿ ಆದ ದುರಂತ, ಅದರ ಸಕ್ಸಸ್​ ಸಂಭ್ರಮವನ್ನೆಲ್ಲಾ ಮರೆಸುವಂತೆ ಮಾಡಿಬಿಟ್ಟಿತ್ತು. 

ಸಿನಿಮಾ ಬಿಡುಗಡೆಯ ಹಿಂದಿನ ದಿನ ಹೈದ್ರಾಬಾದ್​ನ ಸಂಧ್ಯಾ ಥಿಯೇಟರ್​ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ರೇವತಿ ಅನ್ನೋ ಮಹಿಳೆ ಸಾವನ್ನಪ್ಪಿದ್ರು. ಆಕೆಯ 9 ವರ್ಷದ ಮಗ ಶ್ರೀತೇಜ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ. ಈ ದುರ್ಘಟನೆಗೆ ಅಲ್ಲು ಅರ್ಜುನ್ ಬೇಜವಾಬ್ದಾರಿಯೇ ಕಾರಣ ಅಂತ ಆಕ್ರೋಶ ವ್ಯಕ್ತಪಡಿಸಿದ್ದ ತೆಲಂಗಾಣ ಸಿಎಂ, ಇಡೀ ತೆಲುಗು ಚಿತ್ರೋದ್ಯಮಕ್ಕೆ ವಾರ್ನ್ ಮಾಡಿದ್ರು. ಈ ಕೇಸ್​​ನಲ್ಲಿ ಅಲ್ಲು ಅರ್ಜುನ್ ಅರೆಸ್ಟ್ ಆಗಿ ಒಂದು ದಿನ ಜೈಲು ಕೂಡ ನೋಡಿ ಬಂದ್ರು. ಈಗಲೂ ಈ ಕೇಸ್ ನಡೀತಾ ಇದೆ. ಇನ್ನೂ ಸಮಾಧಾನದ ವಿಚಾರ ಅಂದ್ರೆ ಗಂಭೀರವಾಗಿ ಗಾಯಗೊಂಡು ಕೋಮಾಗೆ ಜಾರಿದ್ದ ಬಾಲಕ ಶ್ರೀತೇಜ್​ ಕೊನೆಗೂ ಮೃತ್ಯವನ್ನ ಗೆದ್ದಿದ್ದಾರೆ. 4 ತಿಂಗಳು 25 ದಿನಗಳ ಬಳಿಕ ಬಾಲಕ ಶ್ರೀತೇಜ್​ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. 

ಆದ್ರೆ ಈ ಮೃತ್ಯ ಗೆದ್ದ ಬಾಲಕ ಕೇಳುತ್ತಿರೋ ಪ್ರಶ್ನೆಗಳಿಗೆ ಮಾತ್ರ ಉತ್ತರ ಸಿಕ್ತಾ ಇಲ್ಲ. ಹೌದು ಶ್ರೀತೇಜ್​ಗೆ ಆ ದಿನ ಸಿನಿಮಾ ನೋಡಲಿಕ್ಕೆ ತಾಯಿಯ ಜೊತೆಗೆ ಹೋಗಿದ್ದು, ನೂಕು ನುಗ್ಗಲು ಸಂಭವಿಸಿದ್ದು ಎಲ್ಲವೂ ನೆನಪಿದೆ. ಮುಂದೇನಾಯ್ತು ಅನ್ನೋದು ಗೊತ್ತಿಲ್ಲ. ಈ ಬಾಲಕ ತನ್ನ ತಾಯಿ ಎಲ್ಲಿ ಅನ್ನೋ ಪ್ರಶ್ನೆ ಕೇಳ್ತಾ ಇದ್ದಾನೆ. ಆದ್ರೆ ಈತನ ತಾಯಿ ಅದೇ ದಿನ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ರು ಅನ್ನೋ ವಿಚಾರ ಈ ಮುಗ್ದ ಬಾಲಕನಿಗೆ ಗೊತ್ತಿಲ್ಲ. ಈಗಾಗ್ಲೇ ಪುಷ್ಪ-2 ತಂಡ ಮತ್ತು ಅಲ್ಲು ಅರ್ಜುನ್ ಬಾಲಕನ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ. ಆಸ್ಪತ್ರೆಯ ವೆಚ್ಚಗಳನ್ನ ಕೂಡ ಸರ್ಕಾರ ಭರಿಸಿದೆ. ಅಂತೂ ಇಂತೂ ಬಾಲಕನ ಜೀವ ಉಳಿದಿದೆ. ಆದ್ರೆ ಈ ಅಭಿಮಾನಿಯ ಪ್ರಶ್ನೆಗಳಿಗೆ ಖುದ್ದು ಪುಷ್ಪನ ಬಳಿಯೂ ಉತ್ತರ ಇಲ್ಲ..!

05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
04:06ಸಲ್ಲೂಗೆ ಮತ್ತೆ ಕಂಟಕ; ದೇಶಪ್ರೇಮ ತೋರಿಸ್ತೀನಿ ಅಂದ್ರೂ 'ಮಾತೃಭೂಮಿ'ಗೆ ಇದೆಂತಾ ಅಗ್ನಿ ಪರೀಕ್ಷೆ?
08:55ರಾಕಿ ಬಾಯ್ ಡ್ರೀಮ್ ಸಿನಿಮಾದಲ್ಲಿ ಏನೆಲ್ಲಾ ಇದೆ? 'ಟಾಕ್ಸಿಕ್'ನಲ್ಲಿ ಗ್ಯಾಂಗ್​ಸ್ಟರ್​ಮಾತ್ರವಲ್ಲ, ಬೇರೆಯದ್ದೇ ಸ್ಟೋರಿ ಇದೆ!
04:43ಆಲಿಯಾ in ಡ್ರ್ಯಾಗನ್.. ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ!
12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more