ಸಿಂಗಾಪುರ ಅಗ್ನಿ ಅವಘಡದಲ್ಲಿ ಸಿಲುಕಿದ್ದ ಪವನ್ ಪುತ್ರ: ಮೃತ್ಯು ಗೆದ್ದ ಮಾರ್ಕ್ ಶಂಕರ್!

ಸಿಂಗಾಪುರ ಅಗ್ನಿ ಅವಘಡದಲ್ಲಿ ಸಿಲುಕಿದ್ದ ಪವನ್ ಪುತ್ರ: ಮೃತ್ಯು ಗೆದ್ದ ಮಾರ್ಕ್ ಶಂಕರ್!

Published : Apr 14, 2025, 12:04 PM ISTUpdated : Apr 14, 2025, 12:56 PM IST

ಆಂಧ್ರ ಡಿಸಿಎಂ, ಪವರ್ ಸ್ಟಾರ್ ಕಲ್ಯಾಣ್ ಮಗ ಸಿಂಗಾಪುರದ ಶಾಲೆಯಲ್ಲಿ ನಡೆದ ಅಗ್ನಿ ದುರಂತದಲ್ಲಿ ಸಿಲುಕಿದ್ದು ಇಡೀ ಮೆಗಾ ಫ್ಯಾಮಿಲಿಯನ್ನ ಆತಂಕದಲ್ಲಿ ಮುಳುಗುವಂತೆ ಮಾಡಿತ್ತು. ಇದೀಗ ಪವನ್ ಕಲ್ಯಾಣ್ ಪುತ್ರನೂ ಸೇರಿದಂತೆ 22 ಜನರನ್ನ ರಕ್ಷಣೆ ಮಾಡಲಾಹಿದೆ.

ಆಂಧ್ರ ಡಿಸಿಎಂ, ಪವರ್ ಸ್ಟಾರ್ ಕಲ್ಯಾಣ್ ಮಗ ಸಿಂಗಾಪುರದ ಶಾಲೆಯಲ್ಲಿ ನಡೆದ ಅಗ್ನಿ ದುರಂತದಲ್ಲಿ ಸಿಲುಕಿದ್ದು ಇಡೀ ಮೆಗಾ ಫ್ಯಾಮಿಲಿಯನ್ನ ಆತಂಕದಲ್ಲಿ ಮುಳುಗುವಂತೆ ಮಾಡಿತ್ತು. ಇದೀಗ ಪವನ್ ಕಲ್ಯಾಣ್ ಪುತ್ರನೂ ಸೇರಿದಂತೆ 22 ಜನರನ್ನ ರಕ್ಷಣೆ ಮಾಡಲಾಹಿದೆ. ಖುದ್ದು ಸಿಂಗಾಪುರಕ್ಕೆ ಹೋಗಿ ಮಗನನ್ನ ಕರೆತಂಡ ಪವನ್ ಕಲ್ಯಾಣ್ ಕಣ್ಣೀರು ಹಾಕ್ತಾನೇ ನಿಟ್ಟುಸಿರು ಬಿಟ್ಟಿದ್ದಾರೆ. ಆಂಧ್ರ ಡಿಸಿಎಂ , ಟಾಲಿವುಡ್​​ನ ಪವರ್ ಸ್ಟಾರ್ ಪವನ್ ಒಂದು ಸುದೀರ್ಘ ನಿಟ್ಟುಸಿರು ಬಿಟ್ಟಿದ್ದಾರೆ. ಸಿಂಗಾಪುರದಲ್ಲಿ ನಡೆದ ಅಗ್ನಿ ಅವಗಢದಲ್ಲಿ ಪವನ್ ಕಲ್ಯಾಣ್ ರ 8 ವರ್ಷದ ಪುತ್ರ ಮಾರ್ಕ್ ಶಂಕರ್ ಕೂಡ ಸಿಲುಕಿದ್ದ. ಸಿಂಗಾಪುರದಲ್ಲಿ ಮಾರ್ಕ್ ಶಂಕರ್ ಓದ್ತಾ ಇದ್ದ ಶಾಲೆಗೆ ಬೆಂಕಿ ಬಿದ್ದು 20ಕ್ಕೂ ಹೆಚ್ಚು ಜನರು ಅಪಾಯದಲ್ಲಿ ಸಿಲುಕಿದ್ರು. ಕೊನೆಗೂ ಈ ಅಗ್ನಿ ಅವಗಢದಿಂದ ಮಾರ್ಕ್ ಸೇರಿದಂತೆ 22 ಜನರನ್ನ ರಕ್ಷಣೆ ಮಾಡಲಾಗಿದೆ. 

ಖುದ್ದು ಪವನ್ ಸಿಂಗಾಪುರಗೆ ತೆರಳಿ ಮಗನನ್ನ ಮರಳಿ ಮನೆಗೆ ಕರೆತಂದಿದ್ದಾರೆ. ಕಳೆದ ಏಪ್ರಿಲ್ 8ನೇ ತಾರೀಖು ನಡೆದ ಈ ಅವಗಢದ ವಿಚಾರ ಗೊತ್ತಾದಾಗ ಪವನ್ ಕಲ್ಯಾಣ್ ಚಡಪಡಿಸಿ ಹೋಗಿದ್ರು. ಪತ್ನಿ ಅನ್ನಾ ಜೊತೆಗೆ ಸಿಂಗಾಪುರ್ ಪ್ಲೈಟ್ ಏರಿದ್ರು. ಅದೃಷ್ಟವಶಾತ್ ಈ ಅವಗಢದಲ್ಲಿ ಸಿಲುಕಿದವರೆನ್ನೆಲ್ಲಾ ರಕ್ಷಣೆ ಮಾಡಲಾಗಿತ್ತು. ಆದ್ರೆ ಎಲ್ಲರಿಗೂ ಗಂಭೀರ ಗಾಯಗಳಾಗಿದ್ವು.  ಪವನ್ ಪುತ್ರ ಮಾರ್ಕ್​​ ಕೈಕಾಲಿಗೂ ಸುಟ್ಟ ಗಾಯಗಳಾಗಿದ್ದು ಸಿಂಗಾಪುರದ ಆಸ್ಪತ್ರೆಗೆ ಸೇರಿಸಲಾಗಿತ್ತು. ಮಗನ ಸ್ಥಿತಿ ಕಂಡು ಕಣ್ಣೀರಿಟ್ಟಿದ್ದ ಪವನ್, ಇದೀಗ ಪುತ್ರನನ್ನ ಕರೆದುಕೊಂಡು ಹೈದ್ರಾಬಾದ್ ಗೆ ಮರಳಿದ್ದಾರೆ. ಶನಿವಾರ ರಾತ್ರಿ ಹೈದ್ರಾಬಾದ್​​ ಏರ್​ಪೋರ್ಟ್​​ಗೆ ಬಂದಿಳಿದ ಪವನ್ ಮಗನನ್ನ ಗಟ್ಟಿಯಾಗಿ ತಬ್ಬಿಕೊಂಡು ಕರೆತಂದಿದ್ದಾರೆ. ಪವನ್ ಮಗನನ್ನ ತಬ್ಬಿ ಹಿಡಿದಿದ್ದ ರೀತಿಯಲ್ಲೇ ಅವರ ಆತಂಕ, ನೋವು., ಪ್ರೀತಿ ಎಲ್ಲವೂ ಎದ್ದು ಕಾಣ್ತಾ ಇದೆ.  

ಪವನ್ ಕಲ್ಯಾಣ್ - ಅನ್ನಾ ದಂಪತಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ. ತನ್ನ ಸಿನಿಮಾ-ರಾಜಕೀಯ ಬದುಕಿನ ನಡುವೆ ಬ್ಯುಸಿಯಾಗಿರೋ ಪವನ್ , 8 ವರ್ಷದ ಪುತ್ರನನ್ನ ಸಿಂಗಾಪುರದ ಶಾಲೆಯಲ್ಲಿ ಓದಿಸ್ತಾ ಇದ್ದಾರೆ. ಆದ್ರೆ ಕಳೆದ ಮಂಗಳವಾರ ನಡೆದ ಅಗ್ನಿ ದುರಂತದಲ್ಲಿ ಮಾರ್ಕ್ ಶಂಕರ್ ಓದ್ತಾ ಇದ್ದ ಶಾಲೆ ಸಿಲುಕಿತ್ತು. ಶಾಲೆಯಲ್ಲಿದ್ದ ಕೆಲ ಮಕ್ಕಳು ಸೇರಿದಂತೆ ಒಟ್ಟು 22 ಮಂದಿ ಪ್ರಾಣಾಪಾಯಕ್ಕೆ ಸಿಲುಕಿದ್ರು. ತಮ್ಮ ಪುತ್ರ ಪ್ರಾಣಾಪಾಯಕ್ಕೆ ಸಿಲುಕಿದ ವಿಚಾರ ಗೊತ್ತಾಗಿ ಪವನ್ ತತ್ತರಿಸಿ ಹೋಗಿದ್ರು. ಇದೀಗ ಮಗನನ್ನ ಮರಳಿ ಮನೆಗೆ ಕರೆತಂದಿರೋ ಪವನ್ ನಿಟ್ಟುಸಿರು ಬಿಟ್ಟಿದ್ದಾರೆ. ಜೊತೆಗೆ ಈ ಕಷ್ಟದ ಸಮಯದಲ್ಲಿ ತನ್ನ ಜೊತೆಗೆ ನಿಂತವರಿಗೆಲ್ಲಾ ಧನ್ಯವಾದ ಹೇಳಿದ್ದಾರೆ. ಮೃತ್ಯ ಗೆದ್ದ ಮಗನಿಗೆ ದೃಷ್ಟಿ ತೆಗೆದು ಮನೆಗೆ ಬರಮಾಡಿಕೊಂಡಿದ್ದಾರೆ.

04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
Read more