ಪರೋಕ್ಷವಾಗಿ ಅಲ್ಲು ಅರ್ಜುನ್​ದೇ ತಪ್ಪು ಎಂದ ಪವನ್: ತೆಲಂಗಾಣ CM ಗ್ರೇಟ್, ಆಂಧ್ರ DCM ಕೊಟ್ರು ಮಾರ್ಕ್ಸ್!

ಪರೋಕ್ಷವಾಗಿ ಅಲ್ಲು ಅರ್ಜುನ್​ದೇ ತಪ್ಪು ಎಂದ ಪವನ್: ತೆಲಂಗಾಣ CM ಗ್ರೇಟ್, ಆಂಧ್ರ DCM ಕೊಟ್ರು ಮಾರ್ಕ್ಸ್!

Published : Jan 01, 2025, 12:35 PM IST

ಅಲ್ಲು ಅರ್ಜುನ್ Vs ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿಷ್ಯ ಆಂಧ್ರದಲ್ಲೂ ಸದ್ದು ಮಾಡಿದೆ. ಅದ್ರಲ್ಲೂ ಈ ಬಗ್ಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಇದೇ ಮೊದಲ ಬಾರಿ ಮಾತನಾಡಿದ್ದಾರೆ. ಮೊದಲೇ ಎಲ್ಲರೂ ಆಳಿಗೊಂದು ಕಲ್ಲು ಎಸೀತಾ ಇದ್ದಾರೆ. 

ಅಲ್ಲು ಅರ್ಜುನ್ Vs ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿಷ್ಯ ಆಂಧ್ರದಲ್ಲೂ ಸದ್ದು ಮಾಡಿದೆ. ಅದ್ರಲ್ಲೂ ಈ ಬಗ್ಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಇದೇ ಮೊದಲ ಬಾರಿ ಮಾತನಾಡಿದ್ದಾರೆ. ಮೊದಲೇ ಎಲ್ಲರೂ ಆಳಿಗೊಂದು ಕಲ್ಲು ಎಸೀತಾ ಇದ್ದಾರೆ. ಈ ನಡುವೆ ಪವನ್ ಕಲ್ಯಾಣ್ ಕೂಡ ಅಲ್ಲು ಪರ ನಿಂತಿಲ್ಲ. ಅಳಿಯನ ಪರ ಮಾತನಾಡೋ ಬದಲು ತೆಲಂಗಾಣ ಸಿಎಂ  ಗ್ರೇಟ್ ಎಂದಿದ್ದಾರೆ ಪವನ್ ಕಲ್ಯಾಣ್. ಪುಷ್ಪ-2 ಸಿನಿಮಾದ ಬಳಿಕ ಅಲ್ಲು ಅರ್ಜುನ್​ಗೆ ಒಂದು ಕಡೆ ಯಶಸ್ಸು ಒದ್ದುಕೊಂಡು ಬಂದ್ರೆ, ಮತ್ತೊಂದು ಕಡೆ ಅದರ ಜೊತೆ ಜೊತೆಗೆ ದುರಾದೃಷ್ಟವೂ ಬೆನ್ನು ಬಿದ್ದಿದೆ. ಸಂಧ್ಯಾ ಥಿಯೇಟರ್​​ನಲ್ಲಾದ ಕಾಲ್ತುಳಿತ ಪ್ರಕರಣದಲ್ಲಿ ಈಗಾಗ್ಲೇ ಅಲ್ಲು ಅರ್ಜುನ್ ಜೈಲು ಸೇರಿ, ಜಾಮೀನಿನ ಮೇಲೆ ಆಚೆ ಬಂದಾಗಿದೆ. 

ತೆಲಂಗಾಣ ಸಿಎಂ ಅಂತೂ ಅಲ್ಲು ಅರ್ಜುನ್ ಮೇಲೆ ಕೆಂಡಾಮಂಡಳ ಆಗಿದ್ದಾರೆ. ಅಸಲಿಗೆ ಈ ಕೇಸ್​ನಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಬೇಕಂತಲೇ ಅಲ್ಲು ಅರ್ಜುನ್​ನ ಜೈಲಿಗೆ ಕಳಿಸಿದ್ರು ಅನ್ನೋ ಅಲ್ಲು ಅರ್ಜುನ್ ಫ್ಯಾನ್ಸ್ ಆರೋಪ. ಇದರ ಬಗ್ಗೆ ತೆಲಂಗಾಣ, ಆಂಧ್ರದ ಅನೇಕ ಸಿನಿಮಾ ಮತ್ತು ರಾಜಕೀಯ ನಾಯಕರು ಮಾತನಾಡಿದ್ದಾರೆ. ಇದೀಗ ಇದೇ ಮೊದಲ ಬಾರಿಗೆ ತೆಲಂಗಾಣ ಡಿಸಿಎಂ ಪವನ್ ಕಲ್ಯಾಣ್ ಕೂಡ ಮಾತನಾಡಿದ್ದಾರೆ. ಪವನ್ ಕಲ್ಯಾಣ್ ಅಲ್ಲು ಅರ್ಜುನ್​ಗೆ ಮಾವ. ಅಸಲಿಗೆ ಕಳೆದ ಚುನಾವಣೆ ವೇಳೆ ಅಲ್ಲು ಅರ್ಜುನ್ ಮೇಲೆ  ಪವನ್ ಕಲ್ಯಾಣ್​ಗೆ ತುಸು ಅಸಮಾಧಾನ ಆಗಿತ್ತು. ಕರ್ನಾಟಕದ ಅರಣ್ಯ ಭವನಕ್ಕೆ ಬಂದ ವೇಳೆ ಈಗ ಕಾಡುಕಳ್ಳರನ್ನ ಹೀರೋ ಅಗಿ ಮೆರೆಸಲಾಗ್ತಾ ಇದೆ ಅಂತ ಪುಷ್ಪನ ಕಾಲೆಳೆದಿದ್ರು. 

ಇದೀಗ ಕಾಲ್ತುಳಿದ ಪ್ರಕರಣದಲ್ಲೂ ಪವನ್ ಕಲ್ಯಾಣ್ ಅಳಿಯನ ಪರ ವಹಿಸಿಲ್ಲ. ಅಲ್ಲು ಅರ್ಜುನ್ ಪರವಾಗಿ ಯಾರಾದರೂ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬವನ್ನ ಭೇಟಿ ಮಾಡಬೇಕಿತ್ತು ಅಂದಿದ್ದಾರೆ. ಇನ್ನೂ ತೆಲಂಗಾಣ ಸಿಎಂ ಸ್ವಾರ್ಥದಿಂದ ಅಲ್ಲು ಅರ್ಜುನ್​ನ ಅರೆಸ್ಟ್ ಮಾಡಿಸಿಲ್ಲ ಅವರು ಅಂಥವರಲ್ಲ ಅಂದಿದ್ದಾರೆ. ಅಲ್ಲಿಗೆ ಪರೋಕ್ಷವಾಗಿ ಅಲ್ಲು ಅರ್ಜುನ್​ನ ಅಪರಾಧಿ ಅಂದಿದ್ದಾರೆ ಪವನ್.  ಅಲ್ಲಿಗೆ ಹಳ್ಳಕ್ಕೆ ಬಿದ್ದ ಅಲ್ಲು ಮೇಲೆ ಆಳಿಗೊಂದರಂತೆ ಕಲ್ಲು ಹಾಕ್ತಾ ಇದ್ದಾರೆ. ಖುದ್ದು ಅಲ್ಲು ಅರ್ಜುನ್ ಮಾವ ಪವನ್ ಕಲ್ಯಾಣ್ ಕೂಡ ತಮ್ಮದೊಂದು ಇರಲಿ ಅಂತ ಪುಷ್ಪನಿಗೆ ಕಲ್ಲು ಹೊಡೆದಂತಿದೆ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
Read more