ಬರ್ತಿದ್ದಾನೆ ಬಳ್ಳಾರಿ ಬೊಂಬಾಟ್ ಹುಡುಗ: ಕಿರೀಟಿ ಶ್ರಮಕ್ಕೆ ಬಹುಪರಾಕ್ ಎಂದ ರಾಜಮೌಳಿ!

ಬರ್ತಿದ್ದಾನೆ ಬಳ್ಳಾರಿ ಬೊಂಬಾಟ್ ಹುಡುಗ: ಕಿರೀಟಿ ಶ್ರಮಕ್ಕೆ ಬಹುಪರಾಕ್ ಎಂದ ರಾಜಮೌಳಿ!

Published : Apr 21, 2022, 04:03 PM ISTUpdated : Apr 21, 2022, 04:51 PM IST

ಸಿನಿಮಾರಂಗಾನೆ ಹಾಗೆ  ಆಕರ್ಷಣೆ, ಎಂಥವರನ್ನೂ ಸೆಳೆದುಬಿಡುತ್ತೆ. ಸದ್ಯ ರಾಜಕಾರಣಿ , ಬಳ್ಳಾರಿ ಗಣಿದಣಿ ಜನಾರ್ಧನರೆಡ್ಡಿ  ಪುತ್ರನಿಗೂ ಇದೇ ಸೆಳೆತ. ಸಿನಿಮಾ ಆಕರ್ಷಣೆಯಲ್ಲಿ ಅಪ್ಪ ದುಡ್ಡಾಕ್ತಾರೆ ನಾನೂ ಹೀರೋ ಅಂತ ಬರಲಿಲ್ಲ. ಬಂದು ಸಿನಿಮಾಗೆ ಬೇಕಾದ ಎಲ್ಲ ತಯಾರಿಯನ್ನೂ ಮಾಡಿಕೊಂಡಿದ್ದಾನೆ. 

ಸಿನಿಮಾರಂಗಾನೆ ಹಾಗೆ  ಆಕರ್ಷಣೆ, ಎಂಥವರನ್ನೂ ಸೆಳೆದುಬಿಡುತ್ತೆ. ಸದ್ಯ ರಾಜಕಾರಣಿ , ಬಳ್ಳಾರಿ ಗಣಿದಣಿ ಜನಾರ್ಧನರೆಡ್ಡಿ  ಪುತ್ರನಿಗೂ ಇದೇ ಸೆಳೆತ. ಸಿನಿಮಾ ಆಕರ್ಷಣೆಯಲ್ಲಿ ಅಪ್ಪ ದುಡ್ಡಾಕ್ತಾರೆ ನಾನೂ ಹೀರೋ ಅಂತ ಬರಲಿಲ್ಲ. ಬಂದು ಸಿನಿಮಾಗೆ ಬೇಕಾದ ಎಲ್ಲ ತಯಾರಿಯನ್ನೂ ಮಾಡಿಕೊಂಡಿದ್ದಾನೆ. ಕಿರೀಟಿ ರೆಡ್ಡಿ ತನ್ನ ಮೊದಲ ಸಿನಿಮಾಗಾಗಿ ಏನೆಲ್ಲ ಶ್ರಮಪಟ್ಟಿದ್ದಾನೆ ಅನ್ನೋದಕ್ಕೆ ಉದಾಹರಣೆ ಈ ವೀಡಿಯೋ.

ಸಿನಿಮಾ ಇಂಟ್ರೋಡಕ್ಷನ್‌ಗಾಗಿಯೇ ಇಷ್ಟು ಕಷ್ಟ ಪಟ್ಟಿದ್ದಾರೆಂದರೆ ಇನ್ನು  ಇಡೀ ಸಿನಿಮಾಗಾಗಿ ಎಷ್ಟೆಲ್ಲಾ ಪರಿಶ್ರಮ ಹಾಕಿರಬಹುದು?  ಕಿರೀಟಿ ನಟನೆಯ ಮೊದಲ ಸಿನಿಮಾದ ಇಂಟ್ರಡಕ್ಷನ್ ಟೀಸರ್ ಯೂಟ್ಯೂಬ್ ನಲ್ಲಿ  ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.  ಕಿರೀಟಿ ಸ್ಟಂಟ್ಸ್, ಡ್ಯಾನ್ಸ್, ಆಕ್ಷನ್ ಸೀನ್ಸ್ ಕಂಡು ಚಿತ್ರರಸಿಕರು ಹುಬ್ಬೇರಿಸಿದ್ದರು. 

ಸ್ವತಃ  ಬಾಹುಬಲಿ ರಾಜಮೌಳಿಯೇ ಕಿರೀಟಿ ಆಕ್ಟಿಂಗ್ , ಸ್ಟಂಟ್ಸ್ ಗೆ ಬಹುಪರಾಕ್ ಅಂತಾ ಬೆನ್ನುತಟ್ಟಿದ್ದರು. ಇಷ್ಟೆಲ್ಲಾ ಮೆಚ್ಚುಗೆ ಪಡೆದಿರುವ ಕಿರೀಟಿ ಸಾಹಸದ ಹಿಂದೆ ಅಷ್ಟೇ ,ನೋವು, ಕಷ್ಟದ ಪರಿಶ್ರಮ  ಕೂಡ ಅಡಗಿದೆ ಅನ್ನೋದನ್ನ ದೃಶ್ಯಗಳು ಹೇಳುತ್ತಿವೆ.

ಜನಾರ್ದನ ರೆಡ್ಡಿ ಸುಪುತ್ರ ಕಿರೀಟಿ ಇಂಟ್ರಡಕ್ಷನ್ ಟೀಸರ್ ಹಿಂದಿನ ಪರಿಶ್ರಮ ಸಣ್ಣದೊಂದು ಝಲಕ್ ನ್ನು ಚಿತ್ರತಂಡ ರಿಲೀಸ್ ಮಾಡಿದೆ.  ಛಲ ಬಿಡದೇ ಕಿರೀಟಿ ಸ್ಟಂಟ್ಸ್ ಗಳನ್ನು ಅದ್ಭುತವಾಗಿ ಮಾಡಿದ್ದಾರೆ. ಖ್ಯಾತ ಸ್ಟಂಟ್ ಮಾಸ್ಟರ್ ಪೀಟರ್ ಹೇನ್ ಸಾರಥ್ಯದಲ್ಲಿ ಮೂಡಿ ಬಂದಿರುವ ಸ್ಟಂಟ್ಸ್ ಮೈ ಜುಮ್ ಎನಿಸುತ್ತವೆ. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ನಡಿ ಅದ್ಧೂರಿ ಬಜೆಟ್ ನಲ್ಲಿ ತಯಾರಾಗ್ತಿರುವ 15ನೇ ಸಿನಿಮಾ ಇದಾಗಿದ್ದು, ಮಯಾಬಜಾರ್ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ಓಂಕಾರ ಹಾಕಿರುವ, ಬಾಹುಬಲಿ ಛಾಯಾಗ್ರಾಹಕ ಕೆಕೆ ಸೆಂಥಿಲ್ ಕುಮಾರ್ ಕ್ಯಾಮೆರಾ ಕೈಚಳಕ ಹಾಗೂ ದೇವಿಶ್ರೀಪ್ರಸಾದ್ ಮ್ಯೂಸಿಕ್ ಪುಳಕ ಹಾಗೂ ರವೀಂದರ್ ಕಲಾ ನಿರ್ದೇಶನ ಕಿರೀಟಿ ಸಿನಿಮಾಗಿದೆ. ಕಿರೀಟಿ ತಂದೆ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಬಣ್ಣ ಹಚ್ಚಿದ್ದು, ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದು, ಜೆನಿಲಿಯಾ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ. ಇದೊಂದು ಸ್ಯಾಂಪಲ್ ಅಷ್ಟೆ.. ಇನ್ನೂ ಮುಂದಿದೆ ಕಿರೀಟಿಯ ನಟನಾ ಚಾತುರ್ಯವನ್ನು ನೊಡಲು ಕಾಯುತ್ತಿರಿ ಎನ್ನುತ್ತಿದೆ ಚಿತ್ರತಂಡ..

 

06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
02:48ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!
04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
Read more