ಜಾಮೀನು ಸಿಕ್ಕಿದೆ ಕಣ್ರೋ.. ಆರೋಪ ಬಾಕಿ ಇದೆ.. ತಡ್ಕಳ್ರೋ: ದರ್ಶನ್ ಗ್ಯಾಂಗ್ ನಗು ತಾತ್ಕಾಲಿಕ!

ಜಾಮೀನು ಸಿಕ್ಕಿದೆ ಕಣ್ರೋ.. ಆರೋಪ ಬಾಕಿ ಇದೆ.. ತಡ್ಕಳ್ರೋ: ದರ್ಶನ್ ಗ್ಯಾಂಗ್ ನಗು ತಾತ್ಕಾಲಿಕ!

Published : Dec 15, 2024, 12:47 PM IST

ದರ್ಶನ್​​​ಗೆ ಹೈಕೋರ್ಟ್ ರೆಗ್ಯೂಲರ್ ಬೇಲ್ ಮಂಜೂರು ಮಾಡಿದೆ. ಇಷ್ಟು ದಿನ ಮೆಡಿಕಲ್ ಗ್ರೌಂಡ್ಸ್ ಮೇಲೆ ಮಧ್ಯಂತರ ಬೇಲ್ ಮೇಲೆ ಇದ್ದುದರಿಂದ ದರ್ಶನ್ ಆಸ್ಪತ್ರೆ ಬಿಟ್ಟು ಆಚೆ ಬಂದಿರಲಿಲ್ಲ. ಆದ್ರೆ ಈಗ ರೆಗ್ಯೂಲರ್ ಬೇಲ್ ಸಿಕ್ಕಿದ್ದು, ದರ್ಶನ್​ಗೆ ರಿಲ್ಯಾಕ್ಸ್ ಸಿಕ್ಕಿದೆ. 

ದರ್ಶನ್​​​ಗೆ ಹೈಕೋರ್ಟ್ ರೆಗ್ಯೂಲರ್ ಬೇಲ್ ಮಂಜೂರು ಮಾಡಿದೆ. ಇಷ್ಟು ದಿನ ಮೆಡಿಕಲ್ ಗ್ರೌಂಡ್ಸ್ ಮೇಲೆ ಮಧ್ಯಂತರ ಬೇಲ್ ಮೇಲೆ ಇದ್ದುದರಿಂದ ದರ್ಶನ್ ಆಸ್ಪತ್ರೆ ಬಿಟ್ಟು ಆಚೆ ಬಂದಿರಲಿಲ್ಲ. ಆದ್ರೆ ಈಗ ರೆಗ್ಯೂಲರ್ ಬೇಲ್ ಸಿಕ್ಕಿದ್ದು, ದರ್ಶನ್​ಗೆ ರಿಲ್ಯಾಕ್ಸ್ ಸಿಕ್ಕಿದೆ. ಆದ್ರೆ   ಜಾಮೀನು ಸಿಕ್ಕಿರೋದು ಕಂಡು ದಾಸನ ಅಭಿಮಾನಿ ಬಳಗ ದರ್ಶನ್ ಆರೋಪಮುಕ್ತ ಆಗಿಬಿಟ್ಟ ಅನ್ನುವಂತೆ ಸಂಭ್ರಮಿಸ್ತಾ ಇದೆ. ದರ್ಶನ್ ಮಹಾಸಾಧನೆ ಮಾಡಿಬಂದಂತೆ ಸಿನಿರಂಗದವರು ಸೆಲೆಬ್ರೇಟ್ ಮಾಡ್ತಾ ಇದ್ದಾರೆ. ಆದ್ರೆ ಇವರಿಗೆಲ್ಲಾ ಅರ್ಥವಾಗಬೇಕಾದ ಸಂಗತಿ ಏನು..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ. ಯೆಸ್ ದರ್ಶನ್​ಗೆ ಬೇಲ್ ಸಿಕ್ತಾನೇ ಅವನ ಕೇಡಿ ಅಭಿಮಾನಿಗಳ ಆಟಾಟೋಪ ಮರು ಪ್ರಾರಂಭ ಆಗಿದೆ. ನಿನ್ನೆ ಆಸ್ಪತ್ರೆ ಬಳಿ ಅನೇಕ ಅಭಿಮಾನಿಗಳು ನೆರೆದು ದಾಸನಿಗೆ ಜೈಕಾರ ಹಾಕಿದ್ದಾರೆ. 

ದರ್ಶನ್ ಮನೆಗೆ ಬರಬಹುದು ಅಂತ ಒಂದಿಷ್ಟು ಫ್ಯಾನ್ಸ್ RR ನಗರದ ಮನೆ ಬಳಿ ಬಂದು ಕುಣಿದಾಡಿದ್ದಾರೆ. ಈ ನಡುವೆ ಪಟಾಕಿ ಹೊಡೆದು ಗದ್ದಲ ಎಬ್ಬಿಸ್ತಾ ಇದ್ದ ಒಂದಿಷ್ಟು ಅಭಿಮಾನಿಗಳನ್ನ ಎಳೆದುಕೊಂಡು ಹೋಗಿ ಪೊಲೀಸರು ಪೂಜೆ ಮಾಡಿ ಕಳುಹಿಸಿಕೊಟ್ಟಿದ್ದಾರೆ.  ಇವರ ಸಂಭ್ರಮ ನೋಡ್ತಾ ಇದ್ರೆ ದರ್ಶನ್ ಈ ಕೇಸ್​ನಲ್ಲಿ ಆರೋಪ ಮುಕ್ತ ಆಗಿ, ಕ್ಲೀನ್ ಚಿಟ್ ಪಡೆದುಕೊಂಡಬಿಟ್ಟ ಅನ್ನುವಂತೆ ಇದೆ. ಅದ್ರೆ ನೆನಪಿರಲಿ ಸದ್ಯ ಸಿಕ್ಕಿರೋದು ಜಾಮೀನು ಅಷ್ಟೇ. ಕೇಸ್​ನ ವಿಚಾರಣೆ ಮುಂದೂವರೆಯಲಿದೆ. ಕೋರ್ಟ್ ವಾದ-ಪ್ರತಿವಾದ ಆಲಿಸಲಿದೆ. ಪೊಲೀಸರು ಸಂಗ್ರಹಿಸಿದ ಸಾಕ್ಷಿಯನ್ನ ಪರೀಶೀಲನೆ ಮಾಡಲಿದೆ. ಎಫ್.ಎಸ್.ಎಲ್ ಸೇರಿದಂತೆ ಲ್ಯಾಬ್ ಗಳು ನೀಡಿರೋ ವರದಿಗಳನ್ನ ಪರಿಶೀಲನೆ ಮಾಡಿಲಿದೆ. ಅದೆಲ್ಲದರ ಆಧಾರದ ಮೇಲೆ ಅಂತೀಮ ತೀರ್ಪು ಬರಲಿದೆ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್