ಮೆಗಾಸ್ಟಾರ್ ಚೀರಂಜೀವಿ ಬಿಚ್ಚಿಟ್ರು ದಕ್ಷಿಣ ಚಿತ್ರರಂಗಕ್ಕಾದ ಅವಮಾನದ ಕಥೆ

ಮೆಗಾಸ್ಟಾರ್ ಚೀರಂಜೀವಿ ಬಿಚ್ಚಿಟ್ರು ದಕ್ಷಿಣ ಚಿತ್ರರಂಗಕ್ಕಾದ ಅವಮಾನದ ಕಥೆ

Published : Apr 27, 2022, 05:19 PM IST

ಇಂಡಿಯನ್ ಸಿನಿಮಾ ಇಂಡಸ್ಟ್ರಿಯನ್ನ (South Cinema Industry) ದಕ್ಷಿಣ ಭಾರತ ಚಿತ್ರರಂಗ ಆಳುತ್ತಿದೆ.  ಈ ಖುಷಿಯಲ್ಲಿರೋ ಟಾಲಿವುಡ್ನ ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಒಂದ್ ಕಾಲದಲ್ಲಿ ಬಾಲಿವುಡ್ ಮಂದಿ ಸೌತ್ ಚಿತ್ರರಂಗದ ಮೇಲೆ ಮಾಡುತ್ತಿದ್ದ ದಬ್ಬಾಳಿಕೆಯನ್ನ ಬಿಚ್ಚಿಟ್ಟಿದ್ದಾರೆ..

ಬಾಲಿವುಡ್ (Bollywood) ಮಂದಿ ದಕ್ಷಿಣ ಚಿತ್ರರಂಗವನ್ನ ಹೇಗೆಲ್ಲಾ ನೊಡಿದ್ದಾರೆ ಅಂತ ಚಿರಂಜೀವಿ ಆಚಾರ್ಯ (Acharya) ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟಿದ್ದಾರೆ. ರುದ್ರವೀಣ ಸಿನಿಮಾಗಾಗಿ ನ್ಯಾಷನಲ್ ಇಂಟಿಗ್ರಿಟಿ ಅವಾರ್ಡ್ (National Intigrity award) ಬಂದಿತ್ತು. ಆ ಅವಾರ್ಡ್ ಪಡೆಯೋಕೆ ಚಿರಂಜೀವಿ (Chiranjeevi) ಡೆಲ್ಲಿಗೆ ಹೋಗಿದ್ರು. ಆ ಕಾರ್ಯಕ್ರಮದಲ್ಲಿ ಇಂಡಿಯನ್ ಸಿನಿಮಾದ ವೈಭವ ಹೇಳುವ ಒಂದು ಪೋಸ್ಟರ್ ಹಾಕಿದ್ರು.

ಆ ಪೋಸ್ಟರ್ನಲ್ಲಿ ಹಿಂದಿಯ ನಟರಾದ ಧರ್ಮೇಂದ್ರ, ರಾಜ್ ಕಪೂರ್, ದಿಲೀಪ್ ಕುಮಾರ್, ದೇವಾನಂದ್ ಅಮಿತಾ ಬಚ್ಚನ್ ರಾಜೇಶ್ ಖನ್ಹ ಸೇರಿದಂತೆ ಹಿಂದಿ ಕಲಾವಿದರ ಫೋಟೋ ಮಾತ್ರ ಹಾಕಿದ್ರು. ಸೌತ್ ಸಿನಿಮಾ ಅಂತ ಬಂದಾಗ ಎನ್ಟಿಆರ್ ಹಾಗು ಜಯಲಲಿತಾರ ಚಿಕ್ಕ ಫೋಟೋ ಹಾಕಿ ಬಿಟ್ಟಿದ್ರು. ಆದ್ರೆ ಕನ್ನಡದ ಕಂಠೀರವ ರಾಜ್ ಕುಮಾರ್, ವಿಷ್ಣುವರ್ಧನ್, ಶಿವಾಜಿ ಗಣೇಶನ್ ಯಾರ ಫೊಟೋನೂ ಇರಲಿಲ್ಲ. ಇಂಡಿಯನ್ ಸಿನಿಮಾ ಅಂದ್ರೆ ಬರೀ ಹಿಂದಿ ಚಿತ್ರರಂಗ ಅಂತ ಪ್ರಜೆಕ್ಟ್ ಮಾಡಿದ್ರು. ಇದನ್ನ ನೋಡಿ ಅಂದು ನನಗೆ ತುಂಬಾ ನೋವಾಗಿತ್ತು ಎಂದಿದ್ದಾರೆ ಚಿರಂಜೀವಿ. 

ಸೌತ್ ಸಿನಿಮಾರಂಗವನ್ನ ಅವಮಾನಿಸುತ್ತಿದ್ದ ಬಾಲಿವುಡ್ ಮಂದಿ ಇಂದು ನಮ್ಮ ದಕ್ಷಿಣ ಸಿನಿಮಾಗಳಲ್ಲಿ ನಟಿಸೋದಕ್ಕೆ ಕಾಯುತ್ತಿದ್ದಾರೆ. ಅಂದು ಬೇರೆ ಭಾಷೆ ಸಿನಿಮಾಗಳು ಅಂದ್ರೆ ಲೆಕ್ಕಕ್ಕೇ ಇರಲಿಲ್ಲ. ಆದ್ರೆ ಇಂದು ನಮ್ಮ ಸಿನಿಮಾಗಳ ಗೆಲುವು ನೋಡಿ  ನಾವು ಗರ್ವ ಪಡುತ್ತಿದ್ದೇವೆ. ತಾರತಮ್ಯ ಮಾಡುತ್ತಿದ್ದವರಿಗೆ ಸೌತ್ ಚಿತ್ರರಂಗ ಸರಿಯಾದ ಉತ್ತರ ಕೊಡುತ್ತಿದೆ. ಇದಕ್ಕೆ ಕಾರಣ ನಮ್ಮ ಟೆಕ್ನೀಷಿಯನ್ಸ್, ನಮ್ಮ ನಿರ್ದೇಶಕ ರಾಜಮೌಳಿ. ಇಂದು ಭಾರತೀಯ ಚಿತ್ರರಂಗದ ಪೀಠಾಧಿಪತಿಯಾಗಿ ರಾಜಮೌಳಿ ಇದ್ದಾರೆ ಎಂದಿದ್ದಾರೆ ಚಿರಂಜೀವಿ. 

 ಹಾಲಿವುಡ್ ಬಾಲಿವುಡ್ ಕಾಲಿವುಡ್ ಟಾಲಿವುಡ್ ಅಂತ ತಾರತಮ್ಯ ಮಾಡುತ್ತಿದ್ದವರಿಗೆ ನಮ್ಮ ಸೌತ್ ಸಿನಿ ರಂಗ ಗರ್ವ ಪಡೋ ಹಾಗೆ ಉತ್ತರ ಕೊಟ್ಟಿದೆ. ಇದಕ್ಕೆ ಕಾರಣ ಸೌತ್ ಚಿತ್ರರಂಗದಿಂದ ಬರುತ್ತಿರೋ ಪ್ಯಾನ್ ಇಂಡಿಯಾ ಸಿನಿಮಾಗಳು. ಪ್ರಶಾಂತ್ ನೀಲ್. ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾ ಇಂದು ನ್ಯಾಷನಲ್ ಸಿನಿಮಾ ಆಗಿದೆ. ಅದೇ ರೀತಿ ಅಲ್ಲು ಅರ್ಜುನ್ ಪ್ರಭಾಸ್, ರಾಮ್ ಚರಣ್, ಜ್ಯೂ, ಎನ್ ಟಿಆರ್ ಪ್ರಭಾಸ್ರಂತದ ನ್ಯಾಷನಲ್ ಸ್ಟಾರ್ ಇದ್ದಾರೆ. ಇದನ್ನೆಲ್ಲಾ ನೋಡಿ ನಾವೆಲ್ಲಾ ಹೆಮ್ಮೆ ಪಡಬೇಕು ಅಂತ ಚಿರಂಜಿವಿ ಸೌತ್ ಚಿತ್ರರಂಗದ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ.  


 

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
Read more