ದೊಡ್ಡಪ್ಪನ ಕೊಲೆಗೆ ಸೇಡು- ಇಬ್ಬರು ಸ್ನೇಹಿತರ ಭೀಕರ ಡಬಲ್ ಮರ್ಡರ್; ಸೇಡಿನ ಸಂಕೇತವಾಗಿ ಹೆಣದ ಪಕ್ಕ ಬಿಯರ್ ಬಾಟಲ್!

ದೊಡ್ಡಪ್ಪನ ಕೊಲೆಗೆ ಸೇಡು- ಇಬ್ಬರು ಸ್ನೇಹಿತರ ಭೀಕರ ಡಬಲ್ ಮರ್ಡರ್; ಸೇಡಿನ ಸಂಕೇತವಾಗಿ ಹೆಣದ ಪಕ್ಕ ಬಿಯರ್ ಬಾಟಲ್!

Published : Oct 17, 2025, 05:22 PM IST

ವಿಜಯಪುರ ಜಿಲ್ಲೆಯ ಕನ್ನೂರು ಗ್ರಾಮದಲ್ಲಿ, ದೊಡ್ಡಪ್ಪನ ಹತ್ಯೆಗೆ ಪ್ರತೀಕಾರವಾಗಿ ಇಬ್ಬರು ಸಹೋದರರು ಕುಚುಕು ಗೆಳೆಯರಾಗಿದ್ದ ಹಂತಕರನ್ನು ಕಲ್ಲುಗಳಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಹತ್ಯೆಯ ನಂತರ, ಸೇಡಿನ ಸಂಕೇತವಾಗಿ ಮೃತದೇಹಗಳ ಪಕ್ಕ ಬಿಯರ್ ಬಾಟಲ್‌ಗಳನ್ನು ಇಟ್ಟು ಪರಾರಿಯಾಗಿದ್ದಾರೆ.

ವಿಜಯಪುರ/ಕನ್ನೂರು (ಅ.17): ಸೇಡಿನ ಕಿಚ್ಚಿಗೆ ವಿಜಯಪುರ ಜಿಲ್ಲೆಯ ಶಾಂತವಾಗಿದ್ದ ಕನ್ನೂರು ಗ್ರಾಮದಲ್ಲಿ ಭೀಕರ ಡಬಲ್ ಮರ್ಡರ್ ನಡೆದಿದೆ. ದೊಡ್ಡಪ್ಪನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಇಬ್ಬರು ಸಹೋದರರು, ಹಂತಕರು ಎನ್ನಲಾದ ಕುಚುಕು ಗೆಳೆಯರನ್ನು ಕಲ್ಲುಗಳಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದಾರೆ.

ಹತ್ಯೆಯ ನಂತರ, ಸೇಡಿನ ಸಂಕೇತವಾಗಿ ಮೃತದೇಹಗಳ ಪಕ್ಕದಲ್ಲೇ ಬಿಯರ್ ಬಾಟಲ್‌ಗಳನ್ನು ಇಟ್ಟು ಪರಾರಿಯಾಗಿದ್ದಾರೆ. ಈ ಭೀಕರ ದ್ವಂದ್ವ ಕೊಲೆ ಪ್ರಕರಣ ವಿಜಯಪುರ ಜಿಲ್ಲೆಯಾದ್ಯಂತ ಭೀತಿ ಹುಟ್ಟಿಸಿದೆ. ಕೃತ್ಯ ಎಸಗಿ ಪರಾರಿಯಾಗಲು ಯತ್ನಿಸಿದ ಇಬ್ಬರು ಹಂತಕರ ಪೈಕಿ ಒಬ್ಬನನ್ನು ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಬಿಯರ್ ಬಾಟಲ್‌ನಿಂದ ಶುರುವಾದ ಮುಗಿಯದ ಜಗಳ:

ಪೊಲೀಸ್ ತನಿಖೆಯಲ್ಲಿ ಡಬಲ್ ಮರ್ಡರ್ ಹಿಂದಿನ ರೋಚಕ ಕಥೆ ಹೊರಬಿದ್ದಿದೆ. ಕನ್ನೂರು ಗ್ರಾಮದ ಈರನಗೌಡ ಎಂಬುವವರ ಹತ್ಯೆಯೇ ಇಂದಿನ ಡಬಲ್ ಮರ್ಡರ್‌ಗೆ ಮುಖ್ಯ ಕಾರಣವಾಗಿದೆ. ಸಾಗರ್ ಮತ್ತು ಇಸಾಕ್ ಎಂಬ ಇಬ್ಬರು ಕುಚುಕು ಗೆಳೆಯರು ಈರನಗೌಡರ ಕೊಲೆ ಮಾಡಿದ್ದ ಪ್ರಮುಖ ಆರೋಪಿಗಳಾಗಿದ್ದರು. ಈರನಗೌಡರನ್ನು ಅವರು ಬಿಯರ್ ಬಾಟಲ್‌ನಿಂದ ಹೊಡೆದು** ಕೊಲೆ ಮಾಡಿದ್ದರು ಎನ್ನಲಾಗಿದೆ. ಈ ಪ್ರಕರಣದಲ್ಲಿ ಅವರು ಜೈಲು ಸೇರಿ ಇತ್ತೀಚೆಗೆ ಬಿಡುಗಡೆಯಾಗಿದ್ದರು.

ಜೈಲಿನಿಂದ ಹೊರಬಂದ ನಂತರವೂ ಸಾಗರ್ ಮತ್ತು ಇಸಾಕ್ ಇಬ್ಬರೂ ತಮ್ಮ ಪಾಡಿಗೆ ಇರಲಿಲ್ಲ. ಈರನಗೌಡರ ಕುಟುಂಬದವರನ್ನು ಕೆಣಕಲು ಶುರುಮಾಡಿದರು. 'ತಾಕತ್ ಇದ್ದರೆ ನಮ್ಮನ್ನು ಮುಟ್ಟಿ' ಎಂದು ಓಪನ್ ಚಾಲೆಂಜ್ ಹಾಕುವ ಮೂಲಕ ಗ್ರಾಮದಲ್ಲಿ 'ಹವಾ' ಕ್ರಿಯೇಟ್ ಮಾಡಲು ಪ್ರಯತ್ನಿಸಿದರು. ಸಾಗರ್ ಮತ್ತು ಇಸಾಕ್‌ನ ಈ ವರ್ತನೆಯಿಂದ ತೀವ್ರವಾಗಿ ಕೆರಳಿದ ಈರನಗೌಡರ ತಮ್ಮನ ಮಕ್ಕಳು, ತಮ್ಮ ದೊಡ್ಡಪ್ಪನ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಪಣತೊಟ್ಟರು.

ಪಕ್ಕಾ ಸ್ಕೆಚ್, ತಲೆ ಜಜ್ಜಿ ಭೀಕರ ಹತ್ಯೆ

ಈರನಗೌಡರ ಕುಟುಂಬದ ಸಹೋದರರು ಸೇರಿ ಸಾಗರ್ ಮತ್ತು ಇಸಾಕ್‌ರನ್ನು ಮುಗಿಸಲು ಪಕ್ಕಾ ಸ್ಕೆಚ್ ಹಾಕಿದರು. ಎಂದಿನಂತೆ ಒಂದೇ ಬೈಕ್‌ನಲ್ಲಿ ಅಡ್ಡಾಡುತ್ತಿದ್ದ ಕುಚುಕು ಗೆಳೆಯರನ್ನು ಹಿಂಬಾಲಿಸಿ ಅಟ್ಯಾಕ್ ಮಾಡಲಾಗಿದೆ. ಹಂತಕರ ಪಡೆ, ತಮಗೆ ದೊರೆತ ಕಲ್ಲುಗಳನ್ನು ಎತ್ತಿಹಾಕಿ ಸಾಗರ್ ಮತ್ತು ಇಸಾಕ್‌ನ ತಲೆಗಳನ್ನು ಜಜ್ಜಿ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಕೊಲೆಯಾದ ನಂತರ ಹಂತಕರು ಒಂದು ವಿಚಿತ್ರ ಕೃತ್ಯ ಎಸಗಿದ್ದಾರೆ. ದೊಡ್ಡಪ್ಪನ ಕೊಲೆಗೆ ಸಾಗರ್ ಮತ್ತು ಇಸಾಕ್ ಯಾವ ಬಿಯರ್ ಬಾಟಲ್‌ಗಳನ್ನು ಬಳಸಿದ್ದರೋ, ಅದೇ ರೀತಿಯ ಬಾಟಲ್‌ಗಳನ್ನು ಮೃತದೇಹಗಳ ಪಕ್ಕದಲ್ಲಿ ಇಟ್ಟು, ಸೇಡು ತೀರಿಸಿಕೊಂಡಿರುವ ಸಂಕೇತವನ್ನು ನೀಡಿ ಅಲ್ಲಿಂದ ಪರಾರಿಯಾಗಿದ್ದಾರೆ.

ಸಣ್ಣ ಸೇಡಿನಿಂದ ಶುರುವಾದ ಘಟನೆ ಇಂದು ಎರಡು ಪ್ರತ್ಯೇಕ ಕೊಲೆಗಳಿಗೆ ಕಾರಣವಾಗಿ, ಬಾಳಿ ಬದುಕಬೇಕಿದ್ದ ಯುವಕರು ಜೈಲುಪಾಲಾಗಿದ್ದಾರೆ. ಈ ಸಂಬಂಧ ಪೊಲೀಸರು ಉಳಿದ ಹಂತಕರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
Read more