ಕೊರೋನಾ ಸಂಕಷ್ಟದಲ್ಲಿರುವವರ ನೆರವಿಗೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿರುವ ಶಾಂತಾ ಕೃಷ್ಣಮೂರ್ತಿ ಫೌಂಡೇಶನ್ ಮುಂದೆ ಬಂದಿದ್ದು, ಕಳೆದ 19 ದಿನಗಳಿಂದ ಪ್ರತಿನಿತ್ಯ 10 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದು, ಈವರೆಗೆ ಸುಮಾರು 20 ಲಕ್ಷದ ಮೌಲ್ಯದ ಅಗತ್ಯ ಸಾಮಗ್ರಿಗಳನ್ನು ಬಡವರಿಗೆ ಹಂಚಿದೆ.
ಬೆಂಗಳೂರು(ಏ.23): ಮಹಾಮಾರಿ ಕೊರೋನಾ ಹೊಡೆತಕ್ಕೆ ಇಡೀ ವಿಶ್ವವೇ ನಲುಗಿ ಹೋಗಿದೆ. ಬಡವರು-ಕೂಲಿ ಕಾರ್ಮಿಕರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂತಹವರ ನೆರವಿಗೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿರುವ ಶಾಂತಾ ಕೃಷ್ಣಮೂರ್ತಿ ಫೌಂಡೇಶನ್ ಮುಂದೆ ಬಂದಿದ್ದು, ಕಳೆದ 19 ದಿನಗಳಿಂದ ಪ್ರತಿನಿತ್ಯ 10 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದು, ಈವರೆಗೆ ಸುಮಾರು 20 ಲಕ್ಷದ ಮೌಲ್ಯದ ಅಗತ್ಯ ಸಾಮಗ್ರಿಗಳನ್ನು ಬಡವರಿಗೆ ಹಂಚಿದೆ.
ಇದರ ಜತಗೆ ಸ್ಯಾನಿಟೈಸರ್, ಮಾಸ್ಕ್, ತರಕಾರಿಗಳನ್ನು ವಿತರಣೆ ಮಾಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.