ಹೆಂಡತಿಯ ಹೆಣ ಹಾಕಿ 6 ತಿಂಗಳು ನಾಟಕ ಮಾಡಿದ್ದ!  ಡಾ. ಕೃತಿಕಾ ರೆಡ್ಡಿ ಕೊಲೆಗೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್!

ಹೆಂಡತಿಯ ಹೆಣ ಹಾಕಿ 6 ತಿಂಗಳು ನಾಟಕ ಮಾಡಿದ್ದ! ಡಾ. ಕೃತಿಕಾ ರೆಡ್ಡಿ ಕೊಲೆಗೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್!

Published : Oct 17, 2025, 02:15 PM IST

ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದ್ದ ಚರ್ಮರೋಗ ತಜ್ಞೆ ಡಾ. ಕೃತಿಕಾ ರೆಡ್ಡಿ ಅವರದ್ದು ಸಹಜ ಸಾವಲ್ಲ, ಬದಲಿಗೆ ಕೊಲೆ ಎಂದು ಮರಣೋತ್ತರ ಪರೀಕ್ಷೆ ವರದಿಯಿಂದ ದೃಢಪಟ್ಟಿದೆ. ಪತ್ನಿಯ ಸಣ್ಣ ಕಾಯಿಲೆಗಳನ್ನು ಸಹಿಸದ ಆಕೆಯ ಸರ್ಜನ್ ಪತಿಯೇ, ಮಾಡಿದ ಕುಕೃತ್ಯ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ಬೆಂಗಳೂರು (ಅ.17): ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದ ಡರ್ಮಟಾಲಜಿಸ್ಟ್ (ಚರ್ಮರೋಗ ತಜ್ಞೆ) ಕೃತಿಕಾ ರೆಡ್ಡಿ ಮಹಿಳೆಯ ಸಾವಿನ 6 ತಿಂಗಳ ನಂತರ ಬಂದ ಮರಣೋತ್ತರ ಪರೀಕ್ಷೆ (Post-Mortem) ವರದಿಯಿಂದ ಬೆಚ್ಚಿಬೀಳಿಸುವ ಸತ್ಯ ಬಯಲಾಗಿದೆ. ಹೆಂಡತಿಯ ಸಾಮಾನ್ಯ ಕಾಯಿಲೆಗಳನ್ನು ನೆಪ ಮಾಡಿ, ಆಕೆಯ ವೈದ್ಯ ಪತಿಯೇ ಅರಿವಳಿಕೆ (Anaesthesia) ಔಷಧಿಯನ್ನು ಮಿತಿಮೀರಿ (Overdose) ನೀಡಿ ಕೊಲೆ ಮಾಡಿರುವುದು ದೃಢಪಟ್ಟಿದೆ.

ಸರ್ಜನ್ ಆಗಿರುವ ಪತಿ ಮತ್ತು ಡರ್ಮಟಾಲಜಿಸ್ಟ್ ಆಗಿದ್ದ ಪತ್ನಿ ಒಂದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ವೈದ್ಯರಾಗಿದ್ದರಿಂದ ಇವರ ಜೋಡಿಯನ್ನು 'ಹೇಳಿ ಮಾಡಿಸಿದ ಜೋಡಿ' ಎಂದೇ ಗುರುತಿಸಲಾಗಿತ್ತು. ಆದರೆ, ಮದುವೆಯಾಗಿ ಕೇವಲ ಒಂದು ವರ್ಷದಲ್ಲೇ ಪತ್ನಿ ಕೃತಿಕಾ ಅನಾರೋಗ್ಯದಿಂದ ಮೃತಪಟ್ಟಿದ್ದರು.

ಅಕ್ಕನ ಅನುಮಾನದಿಂದ ಬಯಲಾಯ್ತು ಪಾಪಿ ಕೃತ್ಯ:

ಕೃತಿಕಾಳ ಸಾವಿನ ಬಗ್ಗೆ ಅನುಮಾನಗೊಂಡ ಆಕೆಯ ಅಕ್ಕ, ತಕ್ಷಣವೇ ಪೊಲೀಸರಿಗೆ ದೂರು ನೀಡಿ ಮರಣೋತ್ತರ ಪರೀಕ್ಷೆ ಮಾಡಿಸಿದ್ದರು. ಆರು ತಿಂಗಳುಗಳ ನಂತರ ಬಂದ ಪಿ.ಎಂ. ವರದಿಯಲ್ಲಿ ಕೃತಿಕಾಳದ್ದು ಕೊಲೆ (Murder) ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಪೊಲೀಸ್ ತನಿಖೆಯಲ್ಲಿ ಡಾಕ್ಟರ್ ಗಂಡನ ಕರಾಳ ಮುಖ ಅನಾವರಣಗೊಂಡಿದೆ. ಡಾಕ್ಟರ್ ಪತಿ ತನ್ನನ್ನು ತಾನೇ ಸುಂದರನೆಂದು ಭಾವಿಸಿಕೊಂಡಿದ್ದ ಮತ್ತು ಈ ಭ್ರಮೆಯಲ್ಲಿ ಅಪ್ಸರೆಯಂತಿದ್ದ ಕೃತಿಕಾಳನ್ನು ಮದುವೆಯಾಗಿದ್ದ. ಮದುವೆಯಾದ 4 ತಿಂಗಳಲ್ಲಿ ಕೃತಿಕಾಳಿಗೆ ಲೋ ಶುಗರ್ (Low Sugar) ಮತ್ತು **ಗ್ಯಾಸ್ಟ್ರೈಟೀಸ್ (Gastritis) ಸಮಸ್ಯೆ ಕಾಣಿಸಿಕೊಂಡಿತ್ತು.

ಸಣ್ಣ ಕಾಯಿಲೆಗೆ ಹಿಂಸೆ, ಕೊನೆಗೆ ಕೊಲೆ

ಇಂದಿನ ದಿನಗಳಲ್ಲಿ ಸಾಮಾನ್ಯ ಎನಿಸಿರುವ ಈ ಸಣ್ಣ ಕಾಯಿಲೆಗಳನ್ನು ಡಾಕ್ಟರ್ ಪತಿ ಗಂಭೀರವಾಗಿ ಪರಿಗಣಿಸಿದ್ದ. ಮದುವೆಗೂ ಮುನ್ನ ತನಗೆ ಕಾಯಿಲೆ ಇದೆ ಎಂದು ಕೃತಿಕಾ ಹೇಳಲಿಲ್ಲ, ಆಕೆ ತನಗೆ ಮೋಸ ಮಾಡಿದ್ದಾರೆ ಎಂದು ಪತ್ನಿಯ ಮೇಲೆ ಹಿಂಸೆ ನೀಡಲು ಶುರುಮಾಡಿದ್ದ. ಮದುವೆಯಾದ 11 ತಿಂಗಳಿಗೇ ಆಕೆಯನ್ನು ತವರು ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದ. ಆದರೆ, ಹೊರಗೆ ಏನೂ ಆಗಿಲ್ಲ ಎಂಬಂತೆ ನಟಿಸುತ್ತಿದ್ದ ಈ ಪಾಪಿ ಪತಿ, ತಾನೇ ಪತ್ನಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದ. ಇದೇ ನೆಪದಲ್ಲಿ ಒಂದು ದಿನ ಉದ್ದೇಶಪೂರ್ವಕವಾಗಿ ಓವರ್ ಡೋಸ್ ಅನೆಸ್ಥೇಷಿಯಾ ನೀಡಿ ಕೃತಿಕಾಳ ಕಥೆಯನ್ನು ಮುಗಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನೂರಾರು ಕನಸುಗಳನ್ನು ಕಂಡಿದ್ದ ತಂದೆಯ ಕಣ್ಣ ಮುಂದೆ ತನ್ನ ಮಗಳ ಸಾವು ಅಸಹಾಯಕತೆ ಮೂಡಿಸಿದೆ. ಒಂದು ಸಣ್ಣ ಕಾಯಿಲೆಯನ್ನು ನೆಪ ಮಾಡಿಕೊಂಡು ಒಬ್ಬ ಡಾಕ್ಟರ್‌ ಈ ಮಟ್ಟಕ್ಕೆ ಇಳಿದಿರುವುದು ಅಕ್ಷಮ್ಯ. ನ್ಯಾಯಾಲಯದಿಂದ ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪೊಲೀಸರು ವೈದ್ಯ ಪತಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
Read more