
ಕಾರ್ತಿಕ ಮಾಸವು ಬೆಳಕಿನ, ಶುದ್ಧಿಯ ಮತ್ತು ಪುಣ್ಯದ ಮಾಸ. ಈ ದಾಮೋದರ ಕಾಲದಲ್ಲಿ ಶಿವ-ವಿಷ್ಣು ಆರಾಧನೆ, ಪಿತೃಪೂಜೆ, ಲಕ್ಷದೀಪೋತ್ಸವ ಮತ್ತು ನದಿ ಸ್ನಾನಕ್ಕೆ ವಿಶೇಷ ಮಹತ್ವವಿದೆ.
ಕಾರ್ತಿಕ ಮಾಸವು ಬೆಳಕಿನ, ಶುದ್ಧಿಯ ಮತ್ತು ಪುಣ್ಯದ ಮಾಸ. ಈ ದಾಮೋದರ ಕಾಲದಲ್ಲಿ ಶಿವ-ವಿಷ್ಣು ಆರಾಧನೆ, ಪಿತೃಪೂಜೆ, ಲಕ್ಷದೀಪೋತ್ಸವ ಮತ್ತು ನದಿ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಗಂಗೆಯೂ ಈ ಕಾಲದಲ್ಲಿ ಕಾವೇರಿಯಲ್ಲಿ ಮುಳುಗಿ ಪಾಪ ತೊಳೆಯುತ್ತಿದ್ದಾಳೆ ಎಂಬ ನಂಬಿಕೆಯಿದೆ. ನದಿ ಸ್ನಾನದಿಂದ ಶರೀರ ಶುದ್ಧಿ, ಮನಸ್ಸಿಗೆ ಶಾಂತಿ ಮತ್ತು ಪುಣ್ಯ ಪ್ರಾಪ್ತಿ ಉಂಟಾಗುತ್ತದೆ. ದೀಪಾವಳಿ, ತುಳಸಿ ವಿವಾಹ, ವನಭೋಜನ ಮುಂತಾದ ಆಚರಣೆಗಳು ಈ ಮಾಸವನ್ನು ಶ್ರೇಷ್ಠಗೊಳಿಸುತ್ತವೆ. ಬದುಕಿನ ಕತ್ತಲನ್ನು ಬೆಳಗುವ ಮಾಸವೇ ಕಾರ್ತಿಕ