ಗಣೇಶ ಚತುರ್ಥಿಗೆ ಬೆಂಗ್ಳೂರಿನ ಈ 5 ದೇವಾಲಯಗಳಿಗೆ ಭೇಟಿ ಕೊಡಿ; ಬೇಡಿಕೆ ಈಡೇರಿಸಿಕೊಳ್ಳಿ

Sep 1, 2019, 4:22 PM IST

ವಿಘ್ನ ವಿನಾಶಕನನ್ನು ಪೂಜಿಸಿ ಆರಾಧಿಸುವ ಗಣೇಶನ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ.. ಕೆಲ ದೇವಾಲಯಗಳಲ್ಲಿ ಗಣಪ ವರಸಿದ್ಧಿ ವಿನಾಯಕನಾಗಿ ಕಂಗೊಳಿಸಿದರೆ, ಇನ್ನು ಕೆಲವು ಕಡೆ ಶಕ್ತಿ ಗಣಪತಿಯಾಗಿ, ವಿಘ್ನ ವಿನಾಶಕನಾಗಿ, ಬುದ್ಧಿ ಗಣಪನಾಗಿ, ಕಂಕಣ ಭಾಗ್ಯ ಕರುಣಿಸುವವನಾಗಿ, ಅಷ್ಟೈಶ್ವರ್ಯ ವೃದ್ಧಿಸುವವನಾಗಿ ಹೀಗೆ ನಾನಾ ವಿಧಗಳಲ್ಲಿ, ರೂಪಗಳಲ್ಲಿ ನಮ್ಮ ಗಣಪ ಮಿಂಚುತ್ತಿದ್ದಾನೆ. ಅಗಾಧ ಪ್ರಮಾಣದ ಫ್ಯಾನ್ ಫಾಲೋಯಿಂಗ್  ಹೊಂದಿರುವ ಗಣಪನ ಸಹಸ್ರಾರು ದೇವಾಲಯಗಳ ಪೈಕಿ ಬೆಂಗಳೂರಲ್ಲಿ ನೀವು ಭೇಟಿ ಕೊಡಲೇಬೇಕಾದ ಕೆಲ ಪ್ರಮುಖವಾದ ದೇವಾಲಯಗಳು ಇಲ್ಲಿವೆ ನೋಡಿ.