ತೆಲುಗು ಧಾರಾವಾಹಿಗೆ ಮತ್ತೊಬ್ಬ ಕನ್ನಡದ ನಟ ಪವನ್ ರವೀಂದ್ರ ಎಂಟ್ರಿ!

Suvarna News   | Asianet News
Published : Jun 08, 2021, 04:56 PM IST
ತೆಲುಗು ಧಾರಾವಾಹಿಗೆ ಮತ್ತೊಬ್ಬ ಕನ್ನಡದ ನಟ ಪವನ್ ರವೀಂದ್ರ ಎಂಟ್ರಿ!

ಸಾರಾಂಶ

ಎರಡನೇ ತೆಲುಗು ಧಾರಾವಾಹಿಗೆ ಸಹಿ ಮಾಡಿದ ನಟ ಪವನ್ ರವೀಂದ್ರ. ಕಾವ್ಯಾಂಜಲಿ ಧಾರಾವಾಹಿಯಿಂದ ಹೊರ ಬಂದಿಲ್ಲ.  

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಕಾವ್ಯಾಂಜಲಿ' ನಟ ಪವನ್ ರವೀಂದ್ರ ಇದೀಗ ಎರಡನೇ ತೆಲುಗು ಧಾರಾವಾಹಿಗೆ ಸಹಿ ಮಾಡಿದ್ದಾರೆ. 'ಮೌನರಾಗ' ನಂತರ 'ವೈದೇಹಿ ಪರಿಣಯಂ' ಧಾರವಾಹಿಯಲ್ಲಿ ತಮ್ಮ ಪ್ರತಿಭೆ ತೋರಿಸಲಿದ್ದಾರೆ ಈ ನಟ.

ಧಾರಾವಾಹಿಯಿಂದ ಹೊರ ಬಂದಿಲ್ಲ, ದಯವಿಟ್ಟು ಮೆಸೇಜ್ ಮಾಡಬೇಡಿ: ಅಕ್ಷತಾ ದೇಶಪಾಂಡೆ 

'ನಾನು ಎನ್‌ಆರ್‌ಐ ಹುಡುಗ ದೇವಾಂಶ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವೆ. ಅಜ್ಜಿಯ ಒತ್ತಾಯಕ್ಕೆ ವಿದೇಶದಿಂದ ಭಾರತಕ್ಕೆ ಆಗಮಿಸುತ್ತಾನೆ. ಅಸಲಿಗೆ ದೇವಾಂಶ್ ತಂದೆ ಹೊಸ ಮದುವೆ ಮಾಡುವ ಪ್ಲಾನ್‌ನಿಂದ ಕರೆಸಿಕೊಂಡಿರುತ್ತಾರೆ. ಅಣ್ಣನ ಮದುವೆ ಮುರಿದು ಬಿದ್ದ ಕಾರಣ ದೇವಾಂಶ್ ಮದುವೆ ವಿಚಾರದಲ್ಲಿ ನಂಬಿಕೆ ಕಳೆದುಕೊಂಡಿರುತ್ತಾನೆ. ಆದರೆ ವಿಧಿಯಾಟವೇ ಬೇರೆಯೇ ಆಗಿರುತ್ತೆ. ವೈದೇಹಿ ಎಂಬ ಹುಡುಗಿಯನ್ನು ಪ್ರೀತಿಸಲು ಆರಂಭಿಸುತ್ತಾನೆ. ಇದರ ಸುತ್ತ ಧಾರಾವಾಹಿ ನಡೆದುಕೊಂಡು ಹೋಗುತ್ತದೆ,' ಎಂದಿದ್ದಾರೆ ದೇವಾಂಶ್ ಪಾತ್ರಧಾರಿ ಪವನ್.

'ಕಾವ್ಯಾಂಜಲಿ' ಧಾರಾವಾಹಿಯಿಂದ ಹೊರ ನಡೆದ ನಟಿ ದೀಪಾ ಜಗದೀಶ್?

ಕಾವ್ಯಾಂಜಲಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿರುವ ದೇವಾಂಶ್ ಎರಡೂ ಪ್ರಾಜೆಕ್ಟ್‌ಗಳನ್ನು ಸಮವಾಗಿ ನಿಭಾಯಿಸಲಿದ್ದಾರೆ. 'ಈ ಪ್ಯಾಂಡಮಿಕ್‌ ಸಮಯದಲ್ಲಿ ಹೈದರಾಬಾದ್- ಬೆಂಗಳೂರು ಪ್ರಯಾಣ ಮಾಡುವುದು ದೊಡ್ಡ ಚಾಲೆಂಜ್. ನನ್ನ ಪಾತ್ರಕ್ಕೆ ನ್ಯಾಯ ನೀಡಲು ಚಿತ್ರೀಕರಣದಲ್ಲಿ ಭಾಗಿಯಾಗುವೆ. ಎಲ್ಲಾ ರೀತಿಯ ಮುಂಜಾಗೃತ ಕ್ರಮಗಳನ್ನು ಕೈಗೊಂಡಿರುತ್ತೇನೆ,' ಎಂದು ಪವನ್ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಟಿ ಮಂಜು ಭಾಷಿಣಿ ಫ್ಯಾನ್ಸ್​ ಕಣ್ಣಿಗೆ ಕಾಣಿಸಿದ್ರೆ ನಿಮ್​ ಕಥೆ ಗೋವಿಂದ: Bigg Boss ಡಾಗ್​ ಸತೀಶ್​ಗೆ ಯಾಕಿಂತ ಎಚ್ಚರಿಕೆ?
ಗಿಲ್ಲಿ ನಟ ನಿನ್ನ*ನ್ ಅಂದಿದ್ದನ್ನ Bigg Boss ತೋರಿಸಿಲ್ಲ, ಅವನಂಥಾ ಗಲೀಜು ಲೈಫಲ್ಲೇ ನೋಡಿಲ್ಲ-ಡಾಗ್ ಸತೀಶ್!