ಗೌತಮ್​-ಭೂಮಿ ಒಂದಾಗೋ ಹೊತ್ತಲ್ಲಿ ಇದ್ಯಾವಳು ಬಂದಳಪ್ಪಾ? ಹೀಗೆ ಮಾಡ್ಬೇಡಿ ಪ್ಲೀಸ್​ ಅಂತಿದ್ದಾರೆ ಫ್ಯಾನ್ಸ್​!

Published : Mar 19, 2024, 12:00 PM IST
ಗೌತಮ್​-ಭೂಮಿ ಒಂದಾಗೋ ಹೊತ್ತಲ್ಲಿ ಇದ್ಯಾವಳು ಬಂದಳಪ್ಪಾ? ಹೀಗೆ ಮಾಡ್ಬೇಡಿ ಪ್ಲೀಸ್​ ಅಂತಿದ್ದಾರೆ ಫ್ಯಾನ್ಸ್​!

ಸಾರಾಂಶ

ಗೌತಮ್​ ಮತ್ತು ಭೂಮಿಕಾ ಇನ್ನೇನು ಒಂದಾಗಬೇಕು ಎನ್ನುವಷ್ಟರಲ್ಲಿ ಮಾನ್ಯಳ ಎಂಟ್ರಿಯಾಗಿದೆ. ಗೌತಮ್​ ಈಕೆಯನ್ನು ನೋಡಿ ಶಾಕ್​ ಆಗಿದ್ದಾನೆ. ಯಾರಿವಳು?  

ಗೌತಮ್​ ಮತ್ತು ಭೂಮಿಕಾ ಒಂದಾಗೋ ಟೈಂ ಹತ್ತಿರ ಬಂದೇ ಬಿಟ್ಟಿದೆ. ಹೇಗಾದರೂ ಮಾಡಿ ಭೂಮಿಕಾಗೆ ಪ್ರೀತಿಯನ ನಿವೇದನೆ ಮಾಡಿಕೊಳ್ಳುವ ಮನಸ್ಸು ಮಾಡಿದ್ದಾನೆ ಗೌತಮ್​. ಇದೇ ಕಾರಣಕ್ಕೆ ಭೂಮಿಕಾಳನ್ನು ಕರೆದುಕೊಂಡು ಗಾರ್ಡನ್​ಗೆ ಹೋಗಿದ್ದಾನೆ. ಮುಂದೇನು ಮಾಡುವುದೋ ತಿಳಿಯುತ್ತಿಲ್ಲ. ಇದೇ ಕಾರಣಕ್ಕೆ ಗೆಳೆಯ ಆನಂದ್​ನ ಸಹಾಯ ಪಡೆದಿದ್ದಾರೆ. ಅಷ್ಟಕ್ಕೂ, ಪ್ರೀತಿ-ಗೀತಿ ಅನ್ನೋದೇ ಗೊತ್ತಿಲ್ಲದ ಗೌತಮ್​ಗೆ ಈಗ ಪತ್ನಿ ಭೂಮಿ ಮೇಲೆ ಲವ್​ ಶುರುವಾಗಿದೆ. ಅತ್ತ ಭೂಮಿಕಾ ಅಂತೂ ತನ್ನ ಪ್ರೀತಿಯನ್ನು ಪತಿಗೆ ಹೇಗೆ ತಿಳಿಸಬೇಕು ಎನ್ನುವುದನ್ನು ತಿಳಿಯದೇ ಕಸಿವಿಸಿಯಲ್ಲಿಯೇ ಇದ್ದಾಳೆ. ಅವಳು ಪ್ರೀತಿಯನ್ನು ತಿಳಿಸಲು ಎಷ್ಟೇ ಪ್ರಯತ್ನ ಮಾಡಿದರೂ ಅದು ಪೆದ್ದು ಗೌತಮ್​ಗೆ ಗೊತ್ತೇ ಆಗುತ್ತಿಲ್ಲ. ಸ್ನೇಹಿತ ಆನಂದ್​, ಗೌತಮ್​ಗೆ ಚಾಲೆಂಜ್​ ಕೊಟ್ಟಿದ್ದ. ಪತ್ನಿಗೆ ಕಿಸ್​ ಮಾಡ್ಲೇಬೇಕು ಎನ್ನುವ ಚಾಲೆಂಜ್​ ಇದಾಗಿತ್ತು. ಇಲ್ಲದಿದ್ದರೆ ಪಾರ್ಟಿಯಲ್ಲಿ ಕುಡಿದ ವಿಷಯವನ್ನು ಅಜ್ಜಿಗೆ ತಿಳಿಸುವುದಾಗಿ ಹೇಳಿದ್ದ. ಗೌತಮ್​ಗೆ ಬೇರೆ ದಾರಿಯೇ ಇರಲಿಲ್ಲ. ಪತ್ನಿಗೆ ಕಿಸ್​ ಕೊಡಲೇಬೇಕು ಎಂದು ಹೋಗಿದ್ದ. ಅಷ್ಟರಲ್ಲಿಯೇ ಭೂಮಿಕಾ ಸಮೀಪ ಹಲ್ಲಿ ಬಂದು ಇನ್ನೇನು ಇಬ್ಬರೂ ಒಂದಾಗುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ.  

ನಂತರ ಆಫೀಸ್​ನಲ್ಲಿ ಮೀಟಿಂಗ್​ ನಡೆಯುತ್ತಿದ್ದಾಗ ಭೂಮಿಕಾ ಫೋನ್​ ಬಂದಿದೆ. ಎಲ್ಲರೂ ಗೌತಮ್​ಗೆ ತಮಾಷೆ ಮಾಡಿದ್ದಾರೆ. ಭೂಮಿಕಾ ಇನ್ನೂ ಫೋನ್​ ಕಟ್​ ಮಾಡಿರಲಿಲ್ಲ. ಆ ವೇಳೆಗಾಗಲೇ ಭೂಮಿಗೆ ಕಿಸ್​ ಮಾಡುವಂತೆ ಗೌತಮ್​ಗೆ ಆನಂದ್​ ಮತ್ತೆ ಸಜೆಷನ್​ ಕೊಟ್ಟಿದ್ದಾನೆ. ಇದನ್ನೆಲ್ಲಾ ಭೂಮಿಕಾ ಕೇಳಿಸಿಕೊಂಡು ನಾಚಿ ನೀರಾಗಿದ್ದಾಳೆ. ಅಷ್ಟೊತ್ತಿಗಾಗಲೇ ಫೋನ್​ ಕಟ್​ ಆಗದೇ ಇರುವ ವಿಷಯ ಗೌತಮ್​ಗೆ ತಿಳಿದು ಗಾಬರಿಯಾಗಿದ್ದಾನೆ. ಇದೀಗ ಭೂಮಿಕಾಗೆ ಇನ್ನೇನು ಕಿಸ್​ ಕೊಟ್ಟು ಪ್ರೀತಿಯ ನಿವೇದನೆ ಮಾಡಿಕೊಳ್ಳೋಣ ಎಂದುಕೊಂಡಿದ್ದಾನೆ ಗೌತಮ್​. ಆದರೆ ಸೀರಿಯಲ್​ ಬೇರೆಯದ್ದೇ ಹಾದಿ ಹಿಡಿದಿದೆ.

ಛೀ... ರಣವೀರ್​ ಸಿಂಗ್​ ಹೆಸ್ರು ಹೇಳಿ 'ಶಕ್ತಿಮಾನ್'​ ಹೆಸರಿಗೆ ಧಕ್ಕೆ ತರಬೇಡಿ, ಪಾತ್ರದ ಘನತೆ ತಗ್ಗಿಸಬೇಡಿ ಪ್ಲೀಸ್​...

ಗಾಡಿಯನ್ನು ಪಾರ್ಕ್​ ಮಾಡಲು ಸ್ಟಾರ್ಟ್​ ಮಾಡುವ ಹೊತ್ತಿಗೆ ಭಾರಿ ಅಪಘಾತವಾಗಿದೆ. ಕಾರಿನಡಿಗೆ ಸಿಲುಕಿದ್ದು ಮಾನ್ಯ. ಈ ಮಾನ್ಯಳನ್ನು ಶಕುಂತಲಾದೇವಿ ಕೂಡಿಹಾಕಿದ್ದಳು. ಅವಳು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ಆದರೆ ಈ ಮಾನ್ಯ ಯಾರು ಎಂಬುದು ಇದೀಗ ರಹಸ್ಯವಾಗಿಯೇ ಉಳಿದಿದೆ. ಭೂಮಿಕಾ ಮತ್ತು ಗೌತಮ್​ ಮದುವೆಯ ಸಂದರ್ಭದಲ್ಲಿಯೂ ಈಕೆಯ ಪ್ರಸ್ತಾಪ ಆಗಿತ್ತು. ಫೋನಿನಲ್ಲಿ ಈಕೆಯ ಧ್ವನಿ ಕೇಳಿ ಗೌತಮ್​ ಗಾಬರಿಗೊಂಡಿದ್ದ. ಆದರೆ ಈಕೆ ಯಾರು ಎಂಬುದು ಬಹಿರಂಗಗೊಂಡಿಲ್ಲ. ಶಕುಂತಲಾದೇವಿ ತನ್ನ ಅಣ್ಣನ ಜೊತೆ ಮಾತನಾಡುವಾಗ ಈ ಮಾನ್ಯ, ಭೂಮಿಕಾಗಿಂತಲೂ ಡೇಂಜರ್​ ಎಂದಿದ್ದಳು. ತಾನೇ ಆಕೆಯನ್ನು ಕೂಡಿ ಹಾಕಿರುವುದಾಗಿ ಹೇಳಿದ್ದಳು. ಆದರೆ ಇವಳು ತಪ್ಪಿಸಿಕೊಂಡು ಬಂದು ಗೌತಮ್​ ಕಾರಿಗೆ ಸಿಲುಕಿದ್ದಾಳೆ. ಗೌತಮ್​ ಆಕೆಯನ್ನು ನೋಡಿ ಗಾಬರಿಗೊಂಡಿದ್ದಾನೆ.

ಭೂಮಿಕಾ ಮಾನ್ಯಳನ್ನು ಆಸ್ಪತ್ರೆಗೆ ಸೇರಿಸಿದ್ದಾಳೆ. ಗೌತಮ್​ ಶಾಕ್​ನಲ್ಲಿ ಇರುವ ಕಾರಣ ಅವಳಿಗೆ ಗೊತ್ತಿಲ್ಲ. ಅಪಘಾತದಿಂದ ಶಾಕ್​ ಆಗಿರಬಹುದು ಎಂದುಕೊಂಡಿದ್ದಾಳೆ. ಅವರಿಗೆ ಏನೂ ಆಗಿಲ್ಲ, ಬೇಗ ಎಚ್ಚರವಾಗುತ್ತದೆ ಎಂದು ಪತಿಗೆ ಧೈರ್ಯ ತುಂಬಿದ್ದಾಳೆ. ಆದರೆ ಗೌತಮ್​ ಮನಸ್ಸಿನಲ್ಲಿಯೇ ಅದೇ ನನಗಿರುವ ಭಯ. ಅವಳಿಗೆ ಎಚ್ಚರ ಆಗುವುದರ ಒಳಗೆ ನಾವಿಲ್ಲಿಂದ ಜಾಗ ಖಾಲಿ ಮಾಡಬೇಕು ಎಂದುಕೊಂಡಿದ್ದಾರೆ. ಅಲ್ಲಿಗೆ ಮಾನ್ಯಳಿಗೆ ಎಚ್ಚರವಾಗಿದೆ. ಹಾಗಿದ್ದರೆ ಈ ಮಾನ್ಯ ಯಾರು? ಗೌತಮ್​ನ ಮಾಜಿ ಪ್ರೇಯಸಿಯೆ ಅಥವಾ ಇನ್ನೇನು? ಇವಳ ಬಗ್ಗೆ ಸದ್ಯ ಸೀಕ್ರೇಟ್​ ಆಗಿ ಇಡಲಾಗಿದೆ. ಒಂದು ವೇಳೆ ಮಾನ್ಯ ಗೌತಮ್​ನ ಮಾಜಿ ಲವರ್​ ಆಗಿದ್ದು ನಿಜವಾಗಿದ್ದರೆ ಶಕುಂತಲಾ ಆಕೆಯನ್ನು ಕೂಡಿ ಹಾಕಿದ್ದು ಯಾಕೆ? ಗೌತಮ್​-ಭೂಮಿಕಾ ಒಂದಾಗುವ ಹೊತ್ತಿನಲ್ಲಿ ಇವಳ ಎಂಟ್ರಿ ನೋಡಿ ಫ್ಯಾನ್ಸ್​ ತುಂಬಾ ನಿರಾಶರಾಗಿದ್ದು, ಇವಳ್ಯಾಕೆ ಮಧ್ಯೆ ತಂದ್ರಿ ಎಂದು ಪ್ರಶ್ನಿಸುತ್ತಿದ್ದಾರೆ. 

ಬಂಧನದ ಭೀತಿಯಿಂದ ನಟಿ ಜಯಪ್ರದಾ ಸದ್ಯ ನಿರಾಳ: ಶಿಕ್ಷೆ ಅಮಾನತುಗೊಳಿಸಿದ ಸುಪ್ರೀಂಕೋರ್ಟ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa Serial Twist: ಜಯಂತ್​ಗೆ 2ನೇ ಮದುವೆ ಆಫರ್​: ಅಳಿಯನ ಮದುವೆಗೆ ಮುಂದಾದ ಜಾಹ್ನವಿ ಅಪ್ಪ!
ಅಂತರ್ಜಾತಿ ಮದುವೆ; ಮನೆಯಲ್ಲಿ ಕಿರುಕುಳ; ಅನ್ನ- ನೀರಿನ ಜೊತೆಗೆ ಯುಟ್ಯೂಬ್‌ ಬಿಟ್ಟ Bigg Boss ಸ್ಪರ್ಧಿ!