ಪರೀಕ್ಷೆ ಬರೆಯಲು ಬಂದ ಭಾಗ್ಯಳ ಹಾಲ್ ಟಿಕೆಟ್ ಮಾಯವಾಗಿದೆ. ಅವಳು ಪರೀಕ್ಷೆಯಿಂದ ವಂಚಿತಳಾಗ್ತಾಳಾ?
ಭಾಗ್ಯ 10ನೇ ಕ್ಲಾಸ್ ಪರೀಕ್ಷೆ ಬರೆಯಲು ಎಲ್ಲಾ ರೆಡಿ ಮಾಡಿಕೊಂಡಿದ್ದಾಳೆ. ಭಾಗ್ಯಳ ಮಗಳೂ ಈಗ 10ನೇ ಕ್ಲಾಸ್ ಪರೀಕ್ಷೆ ಬರೆಯುತ್ತಿದ್ದಾಳೆ. ಅಮ್ಮ ಮತ್ತು ಮಗಳಿಗೆ ಒಂದೇ ಕಡೆ ಬಂದಿದೆ. ಈ ಬಾರಿ ಮಗಳಿಗೆ ಭಾಗ್ಯ ಚೆನ್ನಾಗಿ ಓದಿಸಿದ್ದಾಳೆ. ಪ್ರತಿ ಬಾರಿಯೂ ಪರೀಕ್ಷೆಗೆ ಸರಿಯಾಗಿ ರೆಡಿಯಾಗಿ ಬರದ ತನ್ವಿಗೆ ಭಾಗ್ಯಳೇ ಖುದ್ದು ಓದಿಸಿದ್ದಾಳೆ. ಈ ಸಲ ಚೆನ್ನಾಗಿ ಪರೀಕ್ಷೆ ಬರೆಯುವ ಕಾನ್ಫಿಡೆನ್ಸ್ನಲ್ಲಿ ಇದ್ದಾಳೆ ತನ್ವಿ. ಇದನ್ನು ಕೇಳಿ ಭಾಗ್ಯಳೂ ಖುಷಿಯಿಂದ ಇದ್ದಾಳೆ. ಆದರೆ...?
ಆದರೆ ಎಲ್ಲವೂ ಉಲ್ಟಾ ಆಗೋಗಿದೆ. ಪರೀಕ್ಷೆ ಇನ್ನೇನು ಶುರುವಾಗಲಿದೆ ಎನ್ನುವ ಹೊತ್ತಿಗೆ ಹಾಲ್ ಟಿಕೆಟ್ ಮೇಲೆ ಸಹಿ ಹಾಕಲು ಶಿಕ್ಷಕಿ ಬಂದಿದ್ದಾರೆ. ಭಾಗ್ಯ ಹಾಲ್ ಟಿಕೆಟ್ ತೆಗೆಯಲು ಕಂಪಾಸ್ ಬಾಕ್ಸ್ ಓಪನ್ ಮಾಡಿದ್ದಾಳೆ. ಆದರೆ ಅವಳು ಹಾಲ್ ಟಿಕೆಟ್ ಕಾಣೆಯಾಗಿಬಿಟ್ಟಿದೆ. ಅವಳೇ ಅದನ್ನು ಮರೆತು ಬಂದಳಾ ಅಥವಾ ಯಾರದ್ದೋ ಕುತಂತ್ರವೋ ಗೊತ್ತಿಲ್ಲ. ಹಾಲ್ ಟಿಕೆಟ್ ಇಲ್ಲದೇ ಪರೀಕ್ಷೆ ಬರೆಯಲು ಕೊಡುವುದಿಲ್ಲ ಎಂದು ಶಿಕ್ಷಕಿ ಪರೀಕ್ಷೆಯ ರೂಲ್ಸ್ ಹೇಳಿಬಿಟ್ಟಿದ್ದಾಳೆ. ಅಮ್ಮ ಹಾಲ್ ಟಿಕೆಟ್ ತರದೇ ಇರುವುದನ್ನು ನೋಡಿ ತನ್ವಿಗೂ ಶಾಕ್ ಆಗಿದೆ. ಅವಳೂ ಫುಲ್ ಟೆನ್ಷನ್ನಲ್ಲಿ ಇದ್ದಾಳೆ. ಹಾಗಿದ್ದರೆ ಮುಂದೇನಾಗುತ್ತದೆ? ಭಾಗ್ಯ ಪರೀಕ್ಷೆ ಬರೆಯುತ್ತಾಳಾ? ಅವಳಿಗೆ ಹಾಲ್ ಟಿಕೆಟ್ ಸಿಗುತ್ತಾ, ಅಥವಾ ಯಾರಾದರೂ ತಂದು ಕೊಡುತ್ತಾರಾ? ಹಾಲ್ ಟಿಕೆಟ್ ಇಲ್ಲದೇ ಹೋದರೆ ಪರೀಕ್ಷೆಯಿಂದ ಭಾಗ್ಯ ವಂಚಿತಳಾಗ್ತಾಳಾ ಎನ್ನುವುದು ಈಗಿರುವ ಪ್ರಶ್ನೆ.
ರಗಡ್ ಲುಕ್ನಲ್ಲಿ ಸತ್ಯ ಸೀರಿಯಲ್ ಮಾಜಿ ಕೀರ್ತನಾ: ಪ್ಲೀಸ್ ಸೀರಿಯಲ್ಗೆ ವಾಪಸ್ ಬನ್ನಿ ಅಂತಿದ್ದಾರೆ ಫ್ಯಾನ್ಸ್
ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಭಾಗ್ಯಳ ಕಷ್ಟವನ್ನು ನೋಡಲಾಗದ ಫ್ಯಾನ್ಸ್ ಒಳ್ಳೆಯವರಿಗೆ ಇಷ್ಟು ಯಾಕೆ ಕಷ್ಟ ಕೊಡುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಭಾಗ್ಯಳಿಗೆ ಯಾಕೆ ಪದೇ ಪದೇ ಕಷ್ಟವನ್ನು ತೋರಿಸುತ್ತೀರಿ ಎಂದು ನಿರ್ದೇಶಕರನ್ನು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಭಾಗ್ಯಳಿಗೆ ಧೈರ್ಯ ತುಂಬುತ್ತಿದ್ದಾರೆ. ನಿನಗೇನು ಆಗುವುದಿಲ್ಲ, ದೇವರಿದ್ದಾನೆ ಎನ್ನುತ್ತಿದ್ದಾರೆ. ಅತ್ತೆ ಬಂದು ಹಾಲ್ ಟಿಕೆಟ್ ಕೊಡುತ್ತಾಳೆ, ಧೈರ್ಯವಾಗಿರು ಎನ್ನುತ್ತಿದ್ದಾರೆ. ಹಾಗಿದ್ದರೆ ಭಾಗ್ಯಳಿಗೆ ಹಾಲ್ ಟಿಕೆಟ್ ಸಿಗತ್ತಾ? ಪರೀಕ್ಷೆ ಬರೆಯುತ್ತಾಳಾ?
ಅಷ್ಟಕ್ಕೂ ಭಾಗ್ಯ ಮತ್ತು ತಾಂಡವ್ ಒಲ್ಲದ ಮನಸ್ಸಿನಿಂದ ಆದರೂ ಒಂದಾಗುತ್ತಾರೆ ಎಂದುಕೊಂಡಿದ್ದ ಅಭಿಮಾನಿಗಳಿಗೆ ಶಾಕ್ ಆಗಿತ್ತು. ಇಬ್ಬರನ್ನೂ ಒಂದು ಮಾಡಲು ಕುಸುಮಾ ಮತ್ತು ಮಕ್ಕಳು ಮಾಡಿದ ಪ್ಲ್ಯಾನ್ ಎಲ್ಲಾ ನೀರಿನಲ್ಲಿ ಹುಣಸೇಹಣ್ಣು ತೋಯ್ದಹಾಗಾಗಿದೆ. ಏಕೆಂದರೆ ತಾಂಡವ್ಗೆ ಶ್ರೇಷ್ಠಾ ತಲೆ ತುಂಬಿದ್ದಾಳೆ. ಎಲ್ಲರೂ ಸೇರಿ ನಾಟಕ ಮಾಡುತ್ತಿರುವುದು ವಿಷಯ ತಿಳಿಸಿದ್ದಾಳೆ. ಅಮ್ಮ ಮತ್ತು ಮಕ್ಕಳು ಸೇರಿ ನಾಟಕ ಮಾಡುತ್ತಿರುವ ವಿಷಯ ಹೇಳಿದ್ದಾಳೆ. ಇದನ್ನು ಕೇಳಿ ತಾಂಡವ್ಗೆ ಶಾಕ್ ಆಗಿದೆ. ಮಗ ತಲೆತಿರುಗಿ ಬಿದ್ದದ್ದು ಕೂಡ ನಾಟಕ ಎಂದು ಹೇಳಿದ್ದಾಳೆ. ಇದನ್ನು ಕೇಳಿ ತಾಂಡವ್ಗೆ ತಾನು ಮೋಸ ಹೋಗಿರುವುದು ತಿಳಿದಿದೆ ಮುಂದೇನು ಮಾಡುತ್ತಾನೆ ಎನ್ನುವುದನ್ನು ಕಾದು ನೋಡಬೇಕಿದೆ.
ಬೀದೀಲಿ ಹೋಗ್ತಿರೋ ಮಾರಿಯನ್ನು ಮನೆಗೇ ಕರ್ಕೊಂಡು ಬಿಟ್ಯಲ್ಲಮ್ಮಾ ಭೂಮಿಕಾ ಅಂತಿದ್ದಾರೆ ಫ್ಯಾನ್ಸ್!