
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ( Bhagyalakshmi Kannada Serial ) ತಾಂಡವ್ ಬದಲಾಗಿದ್ದು, ಭಾಗ್ಯ ಬಳಿ ಕ್ಷಮೆ ಕೇಳುವ ಪ್ರೋಮೋವೊಂದು ರಿಲೀಸ್ ಆಗಿದೆ. ಇದನ್ನು ನೋಡಿ ವೀಕ್ಷಕರಂತೂ ಫುಲ್ ಖುಷಿಯಾಗಿದ್ದಾರೆ. ಈ ಬಗ್ಗೆ ತಾಂಡವ್ ಪಾತ್ರಧಾರಿ ಸುದರ್ಶನ್ ರಂಗಪ್ರಸಾದ್ ಅವರು ಎಷಿಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿದ್ದಾರೆ.
ಹೌದು, ಸದ್ಯ ಒಂದು ಪ್ರೋಮೋ ಔಟ್ ಆಗಿದೆ. ಮುಂದೆ ಏನು ಎನ್ನೋದು ನಮಗೂ ಕೂಡ ಗೊತ್ತಿಲ್ಲ.
ಬಹುತೇಕರು ಮಾತ್ರ ತಾಂಡವ್ ಒಳ್ಳೆಯವನಲ್ಲ, ಕೆಟ್ಟವನು, ತಾಂಡವ್ ಮಾತ್ರ ಬದಲಾಗೋದಿಲ್ಲ, ಇದು ನಾಟಕ ಆಗಿರುತ್ತದೆ, ನಂಬಲೇಬೇಡಿ ಎಂದು ಹೇಳುತ್ತಿದ್ದಾರೆ. ಇನ್ನೊಂದು ಕಡೆ ತಾಂಡವ್ ಬದಲಾಗಿದ್ದು ನೋಡಿ ಕೆಲವರು ಖುಷಿಪಟ್ಟಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕಿರುಚೋದಿ, ಕೂಗಾಡೋದು ಮಾಡುತ್ತಿದ್ದೆ. ಈಗ ತಾಂಡವ್ ಬದಲಾದರೆ ಅದೆಲ್ಲ ಇರೋದಿಲ್ಲ. ತಾಂಡವ್ ಬದಲಾಗಿರೋದು ನಿಜವಾದರೆ, ನನ್ನ ನಟನೆ ಕೂಡ ಬದಲಾಗುವುದು, ಕಲಾವಿದನಾಗಿ ಈ ಬದಲಾವಣೆ ನನಗೆ ಖುಷಿಯಾಗಿದೆ.
ತಾಂಡವ್ ಕೆಟ್ಟವನು ಎಂದು ವೀಕ್ಷಕರು ಅಂದುಕೊಂಡಿದ್ದಾರೆ. ಈಗ ಅವನು ಒಳ್ಳೆಯವನಾದರೆ ವೀಕ್ಷಕರು ಸ್ವೀಕರಿಸೋದು ಕೂಡ ಸುಲಭ ಇಲ್ಲ. ಮೂರು ವರ್ಷದ ಇಮೇಜ್ ತಲೆಯಲ್ಲಿ ಕೂತಾಗ, ಅದನ್ನು ಬದಲಿಸಬೇಕು. ಒಟ್ಟಿನಲ್ಲಿ ನಮ್ಮ ಕಥೆಗಾರರು, ಬರಹಗಾರರು ಯಾವ ರೀತಿ ಕಥೆ ಮಾಡಲಿದ್ದಾರೆ ಎಂಬ ಕುತೂಹಲ ನನಗೂ ಇದೆ.
ಇದರಲ್ಲಿ ಸರಿ ತಪ್ಪು ಎಂದು ಚರ್ಚೆ ಮಾಡೋದು ನನ್ನ ಪ್ರಕಾರ ತಪ್ಪು. ಕೆಲವರು ಒಂದು ರಿಲೇಶನ್ಶಿಪ್ ಅಂತ್ಯವಾಗುತ್ತಿದ್ದಂತೆ ಇನ್ನೊಂದು ರಿಲೇಶನ್ಶಿಪ್ಗೆ ತರಾತುರಿಯಲ್ಲಿ, ಆತುರದ ನಿರ್ಧಾರ ಮಾಡಿ ಕಾಲಿಡುತ್ತಾರೆ. ಇದು ತಪ್ಪು. ಭಾಗ್ಯ ಮತ್ತೆ ಮದುವೆ ಆಗಬೇಕಾ? ತಾಂಡವ್ ಜೊತೆ ಇರಬೇಕಾ ಎನ್ನೋದು ಅವಳಿಗೆ ಬಿಟ್ಟಿದ್ದು. ಹೀಗಾಗಿ ನಾನು ಏನೂ ಹೇಳೋದಿಲ್ಲ.
ಸದ್ಯದ ಧಾರಾವಾಹಿ ಎಪಿಸೋಡ್ ನೋಡಿ ಇದು ಕ್ಲೈಮ್ಯಾಕ್ಸ್ ಇರಬಹುದು ಎಂದು ವೀಕ್ಷಕರಿಗೆ ಅನಿಸಿದೆ. ಆದರೆ ಭಾಗ್ಯಲಕ್ಷ್ಮೀ ಸದ್ಯ ಮುಕ್ತಾಯ ಆಗೋದಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.