ತಾಂಡವ್ ಹಾಗೂ ಶ್ರೇಷ್ಠಾ ಸೇರಿ ಡ್ಯಾನ್ಸ್ ಮಾಡ್ತಿದ್ರೆ ತಾಂಡವ್ ಮಗ ಗುಂಡಾ ಅಮ್ಮನ ಬಿಟ್ಟು ಅಪ್ಪನ ಲವರ್ಗೆ ಸಪೋರ್ಟ್ ಮಾಡೋದಾ? ಏನಿದು ಕಥೆ?
ನಾಯಕ ಯಾರಮ್ಮಾ, ಯಾರಮ್ಮಾ ನಾಯಕ... ಎಂದು ಭಾಗ್ಯಲಕ್ಷ್ಮಿ ತಾಂಡವ್ ಶ್ರೇಷ್ಠಾಳನ್ನು ಕೇಳಿದ್ರೆ, ತಾಂಡವ್ ಮಗ ಗುಂಡಣ್ಣ ಶ್ರೇಷ್ಠಾಳನ್ನು ಹಿಡಿದುಕೊಂಡು ನಾಯಕ ನಾನೇ... ನನ್ನ ಕಥೆಗೆ ಅನ್ನೋದಾ? ಪಾಪ ಭಾಗ್ಯಲಕ್ಷ್ಮಿ ಅಭಿಮಾನಿಗಳಿಗೆ ಅದ್ಹೇಗಾರಿರಬೇಡ? ಅಮ್ಮ ಇರುವಾಗಲೇ ಇನ್ನೊಬ್ಬಳ ಹಿಂದೆ ಹೋಗಿರುವ ಅಪ್ಪನ ಲವರ್ಗೇ ನಾಯಕಿ ಅನ್ನೋದಾ ಅಂತಿದ್ದಾರೆ ಫ್ಯಾನ್ಸ್. ಅವ್ಳು ನಿಮ್ಮಪ್ಪನ ಲವರ್ ಕಣೋ, ಹೀಗೆ ಹೇಳೋದು ಸರಿನಾ ಅಂತ ಕೆಲವರು ಪ್ರಶ್ನಿಸಿದ್ರೆ, ಇರು ನಿನ್ನಜ್ಜಿ ಕುಸುಮಂಗೆ ಹೇಳಿ ಕೊಡ್ತೇನೆ ಅಂತಿದ್ದಾರೆ ಅಂತಿದ್ದಾರೆ ಇನ್ನು ಕೆಲವರು. ಇಷ್ಟು ದಿನ ಅಮ್ಮನ ಮುದ್ದಿನ ಮಗ ಆಗಿ, ಅಮ್ಮ ಭಾಗ್ಯಂಗೇ ಕೈಕೊಟ್ಟು ಅಪ್ಪನ ಲವರ್ಗೇ ಸಪೋರ್ಟ್ ಮಾಡ್ತಿದ್ದಿಯೇನೋ ಅಂತಿದ್ದಾರೆ ಇನ್ನೊಂದಿಷ್ಟು ಮಂದಿ...
ಅಂದಹಾಗೆ ಇದು ಭಾಗ್ಯಲಕ್ಷ್ಮಿ ಸೀರಿಯಲ್ ಕಥೆಯಲ್ಲ. ಬದಲಿಗೆ ಈ ಸೀರಿಯಲ್ನ ನಾಯಕ ತಾಂಡವ್ ಹಾಗೂ ವಿಲನ್ ಶ್ರೇಷ್ಠಾ ಮಾಡಿರುವ ರೀಲ್ಸ್. ರವಿಚಂದ್ರ ಅವರ ಅಭಿನಯದ ರಣಧೀರ ಚಿತ್ರದ ನಾಯಕ ನಾನೇ ಹಾಡಿಗೆ ಇವರಿಬ್ಬರೂ ರೀಲ್ಸ್ ಮಾಡಿದ್ರೆ ತಾಂಡವ್-ಭಾಗ್ಯಳ ಮಗ ಎಲ್ಲರ ಮುದ್ದಿನ ಕಣ್ಮಣಿ ಗುಂಡನೂ ಮಧ್ಯೆ ಬಂದು ರೀಲ್ಸ್ ಮಾಡಿದ್ದಾನೆ ಅಷ್ಟೇ. ಅಂದಹಾಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಈ ಸೀರಿಯಲ್ನಲ್ಲಿ ಶ್ರೇಷ್ಠಾ ಪಾತ್ರಧಾರಿಯಾಗಿ ಕಾವ್ಯಾ ಗೌಡ ನಟಿಸುತ್ತಿದ್ದಾರೆ. ಈ ರೀಲ್ಸ್ ಅನ್ನು ಅವರು ಇದೀಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಆ್ಯಕ್ಸಿಡೆಂಟ್ ಶೂಟಿಂಗ್ನಲ್ಲಿ ಸೀರಿಯಲ್ ನಟರಿಗೂ ಈ ಪರಿ ರಿಸ್ಕಾ? ಮೈ ಜುಂ ಎನ್ನಿಸುವ ವಿಡಿಯೋ ವೈರಲ್
ಇನ್ನು ಈ ಸೀರಿಯಲ್ ಬಗ್ಗೆ ಹೇಳುವುದಾದರೆ, ತಾಂಡವ್ ಪತ್ನಿ ಭಾಗ್ಯಲಕ್ಷ್ಮಿಗೆ ಡಿವೋರ್ಸ್ ಕೊಡಲು ಮುಂದಾಗಿದ್ದಾನೆ. ಇತ್ತ ಮನೆಯ ಖರ್ಚನ್ನು ನಿಭಾಯಿಸಲು ಭಾಗ್ಯ ಟೈಲರಿಂಗ್ ಮಾಡುವ ಪ್ಲ್ಯಾನ್ ಮಾಡಿ ಹಳೆಯ ಹೊಲಿಗೆ ಮಷಿನ್ ಹೊರಕ್ಕೆ ತೆಗೆದಿದ್ದಾಳೆ. ಮಗಳು ತನ್ವಿಗೆ ಅಮ್ಮನ ಮೇಲೆ ಪ್ರೀತಿ ಉಕ್ಕಿದೆ. ಮನೆಯನ್ನು ನಿಭಾಯಿಸಲು ಹೊಲಿಗೆ ಮಾಡುವ ಪ್ಲ್ಯಾನ್ ಮಾಡಿದ್ದರೆ, ಅತ್ತ ಸೊಸೆಯನ್ನು ಶತಾಯುಗತಾಯವಾಗಿ ಶಾಲೆಗೆ ಸೇರಿಸಿದ್ದ ಅತ್ತೆ ಕುಸುಮಗೆ ಇದು ಇಷ್ಟವಿಲ್ಲ. ತಾನೇ ಸಂಸಾರದ ನೊಗ ಹೊರುವುದಾಗಿ ಹೇಳಿದ್ದಾಳೆ.
ಇನ್ನು ತಾಂಡವ್ನನ್ನು ಶ್ರೇಷ್ಠಾ ತನ್ನ ಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾಳೆ. ಮನೆಯಲ್ಲಿ ಒಂದೂ ಕೆಲಸ ಮಾಡದ ತಾಂಡವ್ ಶ್ರೇಷ್ಠಾಳ ತಾಳಕ್ಕೆ ಕುಣಿಯುತ್ತಿದ್ದಾನೆ. ಅವಳ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದಾನೆ. ಒಟ್ಟಿನಲ್ಲಿ ಈ ಸೀರಿಯಲ್ ಕುತೂಹಲ ಹಂತಕ್ಕೆ ಬಂದಿದೆ.
ಅಗೆದಷ್ಟೂ, ಬಗೆದಷ್ಟೂ ಸಂಶೋಧಕರಿಗೆ ಉತ್ತರವೇ ಸಿಗದ ವಿಷದ ಕೆರೆ! ಶ್ರೀರಾಮನಿಗೂ ಇದಕ್ಕೂ ಇರೋ ನಂಟೇನು?