ಧಾರಾವಾಹಿಯಿಂದ ಹೊರಬಿದ್ದ ನಟ; 'ಮತ್ತೆ ವಸಂತ' ಕಥೆ ನಾಯಕ ಯಾರು?

Suvarna News   | Asianet News
Published : Aug 04, 2020, 11:12 AM IST
ಧಾರಾವಾಹಿಯಿಂದ ಹೊರಬಿದ್ದ ನಟ; 'ಮತ್ತೆ ವಸಂತ' ಕಥೆ ನಾಯಕ ಯಾರು?

ಸಾರಾಂಶ

'ಮತ್ತೆ ವಸಂತ' ಧಾರಾವಾಹಿಯಿಂದ ನಟ ವಿವೇಕ್ ಸಿಂಹ ಹೊರ ಬಂದಿದ್ದಾರೆ. ಕಾರಣ ತಿಳಿಯದ ಅಭಿಮಾನಿಗಳು ನಿರಾಶರಾಗಿದ್ದಾರೆ. 

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನ ಮೆಚ್ಚಿದ 'ಮತ್ತೆ ವಸಂತ' ಧಾರಾವಾಹಿಯಿಂದ ನಾಯಕ ವಿವೇಕ್ ಸಿಂಹ ಹೊರ ಬಂದಿದ್ದಾರೆ. ಕಾರಣ ತಿಳಿಯದ ಅಭಿಮಾನಿಗಳು ಬೇಸರ ವ್ತಕ್ತ ಪಡಿಸುತ್ತಿದ್ದರು. ಕೂಡಲೇ ವಿವೇಕ್‌ ಈ ವಿಚಾರದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಸ್ಪಷ್ಟನೆ ನೀಡಿದ್ದಾರೆ.

'ಗಟ್ಟಿಮೇಳ'ದಲ್ಲಿ ವೇದಾಂತ್ ಮಿಸ್ಸಿಂಗ್; ಅನುಮಾನದ ಪ್ರಶ್ನೆಗಳು ಹೆಚ್ಚಾಯ್ತು?

'ಮಹಾದೇವಿ', 'ಸೌಭಾಗ್ಯವತಿ' ಧಾರಾವಾಹಿಯಲ್ಲಿ ನಟಿಸಿರುವ ವಿವೇಕ್ 'ಪ್ರೀಮಿಯರ್ ಪದ್ಮಿನಿ' ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು. ಶೋ ತೀರ್ಪುಗಾರ್ತಿ ನಟಿ ರಕ್ಷಿತಾ ಅವರ ಫೇವರೆಟ್ ಡ್ಯಾನ್ಸರ್ ಆಗಿದ್ದರು.

ಸ್ಟಾರ್‌ ಸುವರ್ಣದಲ್ಲಿ ಶುರುವಾಗಲಿದೆ 'ಮತ್ತೆ ವಸಂತ'!

ಇನ್ಸ್ಟಾ ಪೋಸ್ಟ್‌:
'ಹಾಯ್‌ ಇನ್ಸ್ಟಾ ಹಾಗೂ ಎಫ್‌ಬಿ ಫ್ಯಾಮಿಲಿ, ನಾನು ಅಧಿಕೃತವಾಗಿ 'ಮತ್ತೆ ವಸಂತ' ಧಾರಾವಾಹಿಯಿಂದ ಹೊರ ಬಂದಿರುವೆ. ನಾನು ನನ್ನ ಸಹ ಕಲಾವಿದರನ್ನು ಮಿಸ್ ಮಾಡಿಕೊಳ್ಳುವೆ. ದೇಶಪಾಂಡೆ, ಕಿರಣ್ ಕುಮಾರ್, ಕೃಷ್ಣರಾಜ್‌ಶೆಟ್ಟಿ, ಮೋಹನ್, ಸ್ಪಂದನಾ ಹಾಗೂ ಎಲ್ಲಾ ತಂತ್ರಜ್ಞನರನ್ನು. ಲೈಟ್ ಬಾಯ್‌ ಮತ್ತು ಮೇಕಪ್‌ ಆರ್ಟಿಸ್ಟ್‌ ತಂಡದವರಿಗೂ ನನ್ನ ಧನ್ಯವಾದಗಳು. ನಮ್ಮ ನಿರ್ಮಾಪಕರು ಹಾಗೂ ಸ್ಟಾರ್ ಸುವರ್ಣದವರು ನನಗೆ ಈ ಅವಕಾಶ ನೀಡಿದ್ದಕ್ಕೆ ಚಿರಋಣಿ,' ಎಂದು ಬರೆದುಕೊಂಡಿದ್ದಾರೆ.

 

ಲಾಕ್‌ಡೌನ್‌ ಸಮಯದಲ್ಲಿ ಯಾವುದೇ ಹೊಸ ಎಪಿಸೋಡ್ ಪ್ರಸಾರವಾಗುತ್ತಿರಲಿಲ್ಲ.ಮತ್ತೆ ಮೊದಲಿನಿಂದ ಧಾರಾವಾಹಿಯನ್ನು ಪ್ರಾರಂಭಿಸಿದ್ದರು, ಇತ್ತೀಚಿನ ದಿನಗಳಲ್ಲಿ ಹೊಸ ಎಪಿಸೋಡ್‌ ಬರುತ್ತಿದ್ದು, ವಿವೇಕ್ ಹೊರ ಬಂದ ನಂತರವೂ ಧಾರಾವಾಹಿಯನ್ನು ತಪ್ಪದೇ ವೀಕ್ಷಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.  ಮತ್ತೊಮ್ಮೆ ವಿಭಿನ್ನವಾದ ರೀತಿಯಲ್ಲಿ ನಿಮ್ಮನ್ನು ಮನೋರಂಜಿಸಲು ರೆಡಿಯಾಗುವೆ ಎಂದು ಭರವಸೆ ನೀಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?