ಉದಯ ವಾಹಿನಿಯಲ್ಲಿ ಕಾವ್ಯಾಂಜಲಿ!

Suvarna News   | Asianet News
Published : Aug 03, 2020, 03:15 PM IST
ಉದಯ ವಾಹಿನಿಯಲ್ಲಿ ಕಾವ್ಯಾಂಜಲಿ!

ಸಾರಾಂಶ

ಉದಯ ವಾಹಿನಿಯಲ್ಲಿ ಮತ್ತೊಂದು ಹೊಸ ಧಾರಾವಾಹಿ ಪ್ರೇಕ್ಷಕರ ಮುಂದೆ ಬರುತ್ತಿದೆ. ಹೆಸರು ‘ಕಾವ್ಯಾಂಜಲಿ’. 

ಆಗಸ್ಟ್‌ ತಿಂಗಳ 3 ರಿಂದ ಈ ಧಾರಾವಾಹಿ ಪ್ರತಿ ಸೋಮವಾರದಿಂದ ಶುಕ್ರವಾರದ ವರೆಗೂ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ. ಈಗಾಗಲೇ ಒಂದಿಷ್ಟುಜನಪ್ರಿಯತೆ ಪಡೆದುಕೊಂಡಿರುವ ಧಾರಾವಾಹಿಗಳ ಸಾಲಿಗೆ ಈ ಹೊಸ ಧಾರಾವಾಹಿ ತೂಡ ಸೇರ್ಪಡೆಗೊಳ್ಳಲಿದೆ ಎನ್ನುವ ನಂಬಿಕೆಯ ವಾಹಿನಿಯದ್ದು.

ಇವರೇ ನೋಡಿ ಪೌರಾಣಿಕ ಪಾತ್ರದಲ್ಲಿ ಮಿಂಚುತ್ತಿರುವ ನಿಮ್ಮ ನೆಚ್ಚಿನ ನಟ-ನಟಿಯರು!

ಮನರಂಜನೆಯ ಜತೆಗೆ ಪ್ರೀತಿ- ಪ್ರೇಮ ಕತೆಯನ್ನು ಹೇಳುವ ಧಾರಾವಾಹಿ ‘ಕಾವ್ಯಾಂಜಲಿ’. ಹೊಸ ಕಲ್ಪನೆಯ ತ್ರಿಕೋನ ಪ್ರೇಮಕತೆ ಇದಾಗಿದ್ದು, ಮೆಲೋಡಿ ಸಂಗೀತಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಅಕ್ಕ ತಂಗಿ ಬಾಂಧವ್ಯದ ನೆರಳಿನಲ್ಲಿ ಕತೆ ಸಾಗುತ್ತದೆ. ಶಂಕರ್‌ ವೆಂಕಟರಾಮನ್‌ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಆದಶ್‌ರ್‍ ಹೆಗಡೆ ನಿರ್ದೇಶನ ಮಾಡುತ್ತಿದ್ದಾರೆ. ರುದ್ರಮುನಿ ಬೆಳೆಗೆರೆ ಛಾಯಾಗ್ರಾಹಣ ಮಾಡುತ್ತಿದ್ದಾರೆ.

'ನಾನು ನನ್ನ ಕನಸು' ಸೀರಿಯಲ್‌ ನಟಿ ನಿಶಿತಾ ರಿಯಲ್ ಲೈಫ್‌, ಕುಟುಂಬ ಹೀಗಿದೆ!

ಅದ್ದೂರಿ ಮೇಕಿಂಗ್‌, ಹೊಸತನದ ಕತೆಯೊಂದಿಗೆ ಬರುತ್ತಿರುವ ‘ಕಾವ್ಯಾಂಜಲಿ’ ಧಾರಾವಾಹಿಯಲ್ಲಿ ಸುಸ್ಮಿತ, ವಿದ್ಯಾಶ್ರೀ ಜಯರಾಂಕಾವ್ಯ, ಪವನ್‌ರವೀಂದ್ರ, ಮಿಥುನ್‌ ತೇಜಸ್ವಿ, ರವಿ ಭಟ್‌, ಮಹಾಲಕ್ಷ್ಮಿ, ಮರಿನಾತಾರ, ರಾಮಸ್ವಾಮಿ, ನಿಸರ್ಗ, ಸಿಂಚನಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಶಂಕರ್‌ ಅಶ್ವಥ್‌ ಅವರು ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ರಕ್ಷಿತಾ ಶೆಟ್ಟಿ ಮನೆಯಿಂದ ಔಟ್​! ಎಲ್ಲರೂ ಮಲಗಿದ್ದಾಗ ರಾತ್ರೋರಾತ್ರಿ ಶಾಕ್​ ಕೊಟ್ಟ ಮಂಗಳೂರು ಪುಟ್ಟಿ!
BBK 12: ನಾಲ್ವರೊಂದಿಗೆ ಅವರಿಬ್ಬರು ಯಾಕಿಲ್ಲ? ವೀಕ್ಷಕರಲ್ಲಿ ಕಸಿವಿಸಿಯುಂಟು ಮಾಡಿದ ಬಿಗ್‌ಬಾಸ್ ಪ್ರೋಮೋ