ದುಡ್ಡಿನ ಆಟದಲ್ಲಿ ಶ್ರೀಮಸ್ತು ಶುಭಮಸ್ತು ಸೀರಿಯಲ್​ನಲ್ಲಿ ಗೆದ್ದೋರು ಯಾರು?

Published : Nov 10, 2023, 08:40 PM IST
ದುಡ್ಡಿನ ಆಟದಲ್ಲಿ ಶ್ರೀಮಸ್ತು ಶುಭಮಸ್ತು ಸೀರಿಯಲ್​ನಲ್ಲಿ ಗೆದ್ದೋರು ಯಾರು?

ಸಾರಾಂಶ

ಶ್ರೀರಸ್ತು ಶುಭಮಸ್ತು ತಂಡ ಜಾಕ್​ಪಾಟ್​ ಆಡಿದ್ದು, ಅದರಲ್ಲಿ ಗೆದ್ದೋರು ಯಾರು ನೋಡಿ   

ಜೀ ಕುಟುಂಬ ಅವಾರ್ಡ್ಸ್​ ಕಾರ್ಯಕ್ರಮ ಇಂದಿನಿಂದ ಆರಂಭವಾಗಿದ್ದು, ನಾಳೆಯವರಿಗೂ ಇರಲಿದೆ. ಇದರಲ್ಲಿ ಜೀ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಧಾರಾವಾಹಿಗಳ ನಟ-ನಟಿಯರಿಗೆ ಭರಪೂರ ಅವಾರ್ಡ್​ಗಳನ್ನು ಕೊಡಲಾಗುತ್ತಿದೆ. ಇದಕ್ಕಾಗಿ ನಾಮಿನೇಷನ್​ ಆದವರೆಲ್ಲಾ ಕಾರ್ಯಕ್ರಮಕ್ಕೆ ಆಗಮಿಸಿದ್ದು, ವೀಕ್ಷಕರಿಂದ ಭರ್ಜರಿ ರೆಸ್​ಪಾನ್ಸ್​ ಬರುತ್ತಿದೆ. ಅವಾರ್ಡ್​ ಕಾರ್ಯಕ್ರಮದ ಇನ್ನೊಂದು ಬದಿಯಲ್ಲಿ ಸೀರಿಯಲ್​ ನಟ-ನಟಿಯರ ಸಂದರ್ಶನದ ಜೊತೆಗೆ ಒಳ್ಳೊಳ್ಳೆ ಆಟವೂ ನಡೆಯುತ್ತಿದೆ. ಅದರಲ್ಲಿ ದುಡ್ಡಿನ ಆಟವೊಂದು ಸಕತ್​ ಇಂಟರೆಸ್ಟಿಂಗ್​ ಆಗಿದೆ. ಶ್ರೀರಸ್ತು ಶುಭಮಸ್ತು ಸೀರಿಯಲ್​ನ ಗಂಡ- ಹೆಂಡತಿ ಹಾಗೂ ಅಣ್ಣ-ತಂಗಿ ಇದರಲ್ಲಿ ಪಾಲ್ಗೊಂಡಿದ್ದಾರೆ. ಅವಿ, ಅಭಿ, ಪೂರ್ಣಿ ಮತ್ತು ನಿಧಿ. ಇದರಲ್ಲಿ ಗೆದ್ದೋರು ಯಾರು? ಸೋತೋರು ಯಾರು ಎನ್ನೋದನ್ನು ನೋಡೋಣ.

ಮೊದಲಿಗೆ ಇದು ಕುಟುಂಬದ ಅವಾರ್ಡ್​ ಆಗಿರೋ ಕಾರಣ, ಕುಟುಂಬ ಎಂದರೆ ಒಂದೇ ವಾಕ್ಯದಲ್ಲಿ ಹೇಳಿ ಎಂದಾಗ ನಿಧಿ ಪಾತ್ರಧಾರಿ ನಾವು ಹೇಗೆ ಇದ್ದೇವೋ ಹಾಗೆಯೇ ಇರುವ ಒಂದು ಜಾಗ ಎಂದರೆ ಅದು ಕುಟುಂಬ ಎಂದಿದ್ದಾರೆ. ಅವಿ ಪಾತ್ರಧಾರಿ ಜೀ ನಮ್ಮ ಕುಟುಂಬ ಇದ್ದ ಹಾಗೆ. ಯಾರು ವಿನ್​ ಆದರೂ ಎಲ್ಲರಿಗೂ ಖುಷಿಯೇ. ಇದು ನಮ್ಮ ಇನ್ನೊಂದು ಫ್ಯಾಮಿಲಿ ಎಂದರು. ಅವಿ ಪಾತ್ರಧಾರಿ ಕುಟುಂಬ ಎಂದರೆ ಅಂಡರ್​ಸ್ಟ್ಯಾಂಡಿಂಗ್​ ಎಂದರೆ ಪೂರ್ಣಿ ಪಾತ್ರಧಾರಿ ಕುಟುಂಬ ಎಂದರೆ ಪ್ರೀತಿ ಎಂದರು. 

ಕ್ಯೂಟ್‌ ಲೇಡಿ ವಿಲನ್ಸ್‌ ಅಬ್ಬರದ ನಗು ಕೇಳಿದ್ರೆ ನೀವೂ ನಗೋದು ಗ್ಯಾರೆಂಟಿ!
 

ಕೊನೆಗೆ ಈ ಎಲ್ಲ ನಟ-ನಟಿಯರಿಗೆ ಜಾಕ್​ಪಾಟ್​ ಗೇಮ್ ಆಡಿಸಲಾಯಿತು. ಟೇಬಲ್​ ಮೇಲೆ ಒಂದಿಷ್ಟು ದುಡ್ಡು ಇಡಲಾಗಿತ್ತು. ಸೌಟಿನಿಂದ ಆ ದುಡ್ಡನ್ನು ಕಣ್ಣು ಕಟ್ಟಿಕೊಂಡು ಪಕ್ಕದಲ್ಲಿನ ಪ್ಲೇಟ್​ಗೆ ಒಬ್ಬರು ಹಾಕಿದರೆ ಇನ್ನೊಬ್ಬರು ಅದಕ್ಕೆ ಸಪೋರ್ಟ್​ ಮಾಡಬೇಕಿತ್ತು. ಪೂರ್ಣಿ ಮತ್ತು ಅಭಿ ಒಂದು ಟೀಂ ಆದ್ರೆ ಅವಿ ಮತ್ತು ನಿಧಿ ಇನ್ನೊಂದು ಟೀ. ಅಭಿ ಕಣ್ಣುಕಟ್ಟಿಕೊಂಡು ಕಷ್ಟಪಟ್ಟು ಒಂದಿಷ್ಟು ದುಡ್ಡು ಅತ್ತ ಹಾಕಿದರೆ, ಅವಿಗೆ ಒಂದೇ ಒಂದು ನೋಟು ಕೂಡ ಅತ್ತ ಕಡೆ ಹಾಕಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಸಹಜವಾಗಿ ಪೂರ್ಣಿ-ಅಭಿ ಟೀಂ ಜಾಕ್​ಪಾಟ್​ ಹೊಡೆದರು. ​
 

ಅಂದಹಾಗೆ ಜೀ ಕನ್ನಡದ ಶ್ರೀಮಸ್ತು ಶುಭರಸ್ತು ಧಾರಾವಾಹಿ ಕುರಿತು ಹೇಳುವುದಾದರೆ, ಇದು ವಿಭಿನ್ನ ಕಥೆಯನ್ನು ಹೊಂದಿದ್ದು ವೀಕ್ಷಕರಿಗೆ ಇಷ್ಟವಾಗುತ್ತಿದೆ. ಬಹುತೇಕ ಸೀರಿಯಲ್​ಗಳಲ್ಲಿ ಅತ್ತೆ-ಸೊಸೆಯನ್ನು ಹಾವು-ಮುಂಗುಸಿಯಂತೆ ತೋರುತ್ತಿದ್ದರೆ, ಈ ಧಾರಾವಾಹಿಯಲ್ಲಿ ಸೊಸೆಯೇ ಖುದ್ದಾಗಿ ವಿಧವೆ ಅತ್ತೆಗೆ ಮತ್ತೊಂದು ಮದುವೆ ಮಾಡಿ ಮಗಳಾಗಿರುವ ವಿಭಿನ್ನ ಸ್ಟೋರಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದೆ. ಈ ಧಾರಾವಾಹಿಯಲ್ಲಿನ ಎಲ್ಲಾ ಪಾತ್ರಧಾರಿಗಳೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಧ್ಯ ವಯಸ್ಕರ ನಡುವಿನ ಪ್ರೀತಿ, ಮದುವೆ ಹಾಗೂ ಕುಟುಂಬಸ್ಥರು ಮತ್ತು  ಸಮಾಜ ಅವರನ್ನು ಹೇಗೆ ಸ್ವೀಕರಿಸುತ್ತೆ ಎನ್ನುವ ಈ ಧಾರಾವಾಹಿಯ ವಿಷಯ ಹಲವರಿಗೆ ಆಪ್ತವಾಗಿದೆ. 

ಕಿಡ್ನಾಪ್‌ ಆಗಿರೋ 'ಸೀತಾ-ರಾಮ' ಪುಟಾಣಿ ಸಿಹಿ ಬಣ್ಣಬಣ್ಣದ ಹೆಲಿಕಾಪ್ಟರ್‌ನಲ್ಲಿ ಪ್ರತ್ಯಕ್ಷ!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ