ಕಾಮಿಡಿ ಕಿಲಾಡಿ ಖ್ಯಾತಿಯ ನಟ ಜಗಪ್ಪ, ನಟಿ ಸುಶ್ಮಿತಾರನ್ನು ಮದುವೆಯಾದ ಬೆನ್ನಲ್ಲಿಯೇ ಹೆಂಡತಿಯ ತ್ಯಾಗ, ಜವಾಬ್ದಾರಿಯ ಮಹತ್ವವನ್ನು ಹಾಡಿ ಹೊಗಳಿದ್ದಾರೆ.
ಬೆಂಗಳೂರು (ಮೇ 23): ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಜಗ್ಗಪ್ಪ ಇತ್ತೀಚೆಗೆ ನಟಿ ಸುಶ್ಮಿತಾ ಅವರನ್ನು ಮದುವೆಯಾದ ಬೆನ್ನಲ್ಲಿಯೇ ಹೆಂಡತಿಯ ತ್ಯಾಗ, ಜವಾಬ್ದಾರಿಗಳನ್ನು ಹಾಗೂ ಸ್ರ್ತೀಯರ ಮಹತ್ವವನ್ನು ಹಾಡಿ ಹೊಗಳಿದ್ದಾನೆ. ಇದಕ್ಕೆ ನಿಮ್ಮ ಹೆಂಡತಿ ಸುಶ್ಮಿತಾ ಪುಣ್ಯ ಮಾಡಿದ್ದಾಳೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ನಮ್ಮ ದೇಶದಲ್ಲಿ ಪುರುಷ ಪ್ರಧಾನವೇ ಹೆಚ್ಚಾಗಿದೆ. ಹೀಗಾಗಿ, ಜತನ ಕಾಲದಿಂದಲೂ ಮಹಿಳೆಯನ್ನು ಅಬಲೆಯಾಗಿಯೇ ನೋಡುತ್ತಾ ಬರಲಾಗಿದೆ. ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ಅಬಲೆಯರಲ್ಲ, ಸಬಲರು ಎಂದು ತೋರಿಸುವ ನಿಟ್ಟಿನಲ್ಲಿ ಪುರುಷರು ಕೆಲಸ ಮಾಡುವ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಪಾದಾರ್ಪಣೆ ಮಾಡಿ ಯಶಸ್ಸು ಸಾಧಿಸಿದ್ದಾರೆ. ಆದರೂ, ಮಹಿಳೆಯ ಮೇಲೆ ನಡೆಯುವ ದೌರ್ಜನ್ಯ, ಕೀಳಿರಿಮೆ ಮನೋಭಾವ, ಮಹಿಳೆಗೆ ಪೂರ್ಣ ಸ್ವಾತಂತ್ರ್ಯ ನೀಡದಿರುವುದು, ಮನೆಯಲ್ಲಿ ಪುರುಷನ ಅಡಿಯಾಳಾಗಿ ಕೆಲಸ ಮಾಡಿಕೊಂಡಿವ ಕೆಲವು ಕಟ್ಟಳೆಗಳನ್ನುಇ ವಿಧಿಸುತ್ತಲೇ ಬರಲಾಗುತ್ತಿದೆ. ಇದನ್ನು ಮೀರಿ ಹೆಂಡತಿಯಾಗಿ ಮನೆಗೆ ಮರುವ ಮಹಿಳೆಯ ಪಾತ್ರ ಮತ್ತು ಮಹತ್ವವೇನು ಎಂಬುದನ್ನು ಕಾಮಿಡಿ ಸ್ಟಾರ್ ಜಗ್ಗಪ್ಪ ತಿಳಿಸಿಕೊಟ್ಟಿದ್ದಾರೆ.
Bengaluru Rave Party: ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದ ನಟಿ ಆಶಿ ರಾಯ್ಗೆ ಸಿಸಿಬಿ ನೊಟೀಸ್
ಹೆಣ್ಣು ಮಕ್ಕಳು ಗಂಡನ ಮನೆಗೆ ಬರುವಾಗ ಎಷ್ಟೆಲ್ಲಾ ತ್ಯಾಗ ಮಾಡಿ ಬರುತ್ತಾರೆ ಗೊತ್ತಾ.?
ಅಪರಿಚಿತ ಕೊಟ್ಟ ಪೆನ್ಡ್ರೈವ್ ನೋಡಿ ನಟ ರಮೇಶ್ ಅರವಿಂದ್ಗೆ ಫುಲ್ ಶಾಕ್- ಮುಂದೇನಾಯ್ತು ನೋಡಿ...
ಹೀಗೆ ಹೆಂಡತಿಯ ಮಹತ್ವವನ್ನು ತನ್ನದೇ ಶೈಲಿಯ ಡೈಲಾಗ್ ಮೂಲಕ ಹೇಳಿದ್ದಾನೆ. ಜಗ್ಗಪ್ಪನ ಈ ಡೈಲಾಗ್ಗೆ ಕಾಮಿಡಿ ಕಿಲಾಡಿಗಳು ಪ್ರೀಯಿಯರ್ ಲೀಗ್ ವೇದಿಕೆಯ ಬಳಿಯಿದ್ದ ಜಡ್ಜಸ್ಗಳು, ಕೋ ಕಂಟೆಸ್ಟೆಂಟ್ಗಳು, ವೀಕ್ಷಕರು ಕೂಡ ಭರಪೂರ ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದಿದ್ದಾರೆ. ಆದರೆ, ಈ ಡೈಲಾಗ್ಗಳನ್ನು ಒಂದು ಕಿರುನಾಟಕ (ಸ್ಕಿಟ್) ಮಾಡುವಾಗ ಹೇಳಿದ್ದಾರೆ. ನಿಜ ಜೀವನದಲ್ಲಿಯೂ ಜಗ್ಗಪ್ಪ ಮಹಿಳೆಯರ ಮೇಲೆ ಹೀಗೆಯೇ ಗೌರವ ಹೊಂದಿದ್ದಾನಾ ಎಂಬುದು ಎಲ್ಲರ ಪ್ರಶ್ನೆಯಾಗಿದೆ.