
ಮೋದಿ ನೀಡಿದ ಎರಡೂ ಕರೆಗಳಿಗೆ ಐರಾ ಸ್ಪಂದಿಸಿದ್ದಾಳೆ. ದೀಪ ಹಚ್ಚಿದ್ದು ಮಾತ್ರವಲ್ಲ ಚಪ್ಪಾಳೆಯನ್ನೂ ತಟ್ಟಿ, ಅಪ್ಪನ ಹತ್ತಿರ ಭೇಷ್ ಎನಿಸಿಕೊಂಡಿದ್ದಾಳೆ. ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಹಾಗೂ ದೀಪ ಬೆಳಗುವ ಮೂಲಕ ಗೌರವ ಸಲ್ಲಿಸಿದ್ದಾಳೆ.
ಕೊರೋನಾ ವೈರಸ್ ವಿರುದ್ಧ ಹೋರಾಡಲು ಭಾರತೀಯರೆಲ್ಲರೂ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಒಟ್ಟಾಗಿ ದೀಪ ಹಚ್ಚುವ ಮೂಲಕ ಪ್ರಧಾನಿ ಮೋದಿ ನೀಡಿದ ಕರೆಗೆ ಸಾಥ್ ನೀಡಿದ್ದರು. ಸಿನಿಮಾ ತಾರೆಯರು ತಮ್ಮ ಮನೆಯಲ್ಲಿಯೇ ದೀಪ ಬೆಳಗುವ ಮೂಲಕ ಗೌರವ ಸಲ್ಲಿಸಿದ್ದಾರೆ. ಜ್ಯೋತಿ ಬೆಳಗುತ್ತಾ, ಚಪ್ಪಾಳೆ ತಟ್ಟುತ್ತಿರುವ ಐರಾ ವಿಡಿಯೋವನ್ನು ರಾಕಿ ಬಾಯ್ ಶೇರ್ ಮಾಡಿಕೊಂಡಿದ್ದಾರೆ.
ಕೊರೋನಾ ಯೋಧರಿಗೆ ಚಪ್ಪಾಳೆ ತಟ್ಟಿದ ಐರಾ ಯಶ್! ವಿಡಿಯೋ ನೋಡಿ
ಸ್ಯಾಂಡಲ್ವುಡ್ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಮುದ್ದಿನ ಪುತ್ರಿ ಐರಾ ಯಶ್ ತಾತ-ಅಜ್ಜಿಯ ಮನೆಯ ಬಾಲ್ಕಾನಿಯಲ್ಲಿ, ತುಳಸಿ ಕಟ್ಟೆ ಮುಂದೆ ದೀಪ ಹಚ್ಚುವ ಮೂಲಕ ಕೊರೋನಾ ಪೀಡಿತರ ಜೊತೆಗೆ 'ನಾವಿದ್ದೀವಿ' ಎಂದು ಸಾರಿ ಹೇಳಿದ್ದಾಳೆ.
ವಿಡಿಯೋದಲ್ಲಿ ಮೊದಲು ದೀಪ ಮುಟ್ಟಲು ಐರಾ ಯತ್ನಿಸಿದಾಗ, ತಂದೆ ಯಶ್ ಬೇಡವೆನ್ನುತ್ತಾರೆ. ಆ ನಂತರ ಐರಾ ತಾನಾಗಿಯೇ ದೀಪ ನೋಡುತ್ತಾ, ಚಪ್ಪಾಳೆ ತಟ್ಟುತ್ತಾಳೆ. ಇದಕ್ಕೆ ಯಶ್ ನೋಡಿ 'ನನ್ನ ಮಗಳು ಇವತ್ತೂ ಚಪ್ಪಾಳೆ ತಟ್ಟುತ್ತಿದ್ದಾಳೆ. ವೇರಿ ಗುಡ್ ಮಗಳೆ,' ಎಂದು ಮಾತನಾಡಿರುವುದು ವಿಡಿಯೋದಲ್ಲಿ ನೋಡಬಹುದು.
'In this time of darkness... let's light the lamp of Unity.Remember, Nation comes first !Jai Hind'ಎಂದು ಯಶ್ ಬರೆದುಕೊಂಡಿದ್ದಾರೆ. ಪತ್ನಿ ರಾಧಿಕಾ ಸೆಲ್ಫೀ ಫೋಟೋ ಹಂಚಿಕೊಂಡು 'Let the lamp of Unity be lit forever!! Let's stand together, for each other' ಎಂದು ಬರೆದುಕೊಂಡಿದ್ದಾರೆ.
ಮಾರ್ಚ್ 22ರಂದು ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟುವ ಮೂಲಕ ಮೋದಿ ನೀಡಿದ ಅಭಿಯಾನಕ್ಕೆ ಈಗಲೂ ಕೈ ಜೋಡಿದಿದ್ದಾಳೆ ಲಿಟಲ್ ಐರಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.