ಕಲರ್ಸ್ ಕನ್ನಡ ವಾಹಿನಿಯ ಪಾಪ್ಯೂಲರ್ ಧಾರಾವಾಹಿ 'ಅಗ್ನಿಸಾಕ್ಷಿ' ಮುಕ್ತಾಯವಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹರಿದಾಡುತ್ತಿದೆ, ಇದು ನಿಜಾನಾ? ಇಲ್ಲಿದೆ ನೋಡಿ....
ಕಿರುತೆರೆಯ ಡಿಂಪಲ್ ಕಪಲ್ ಎಂದೇ ಪಾಪ್ಯೂಲರ್ ಆಗಿದ್ದ ಸಿದ್ದಾರ್ಥ ಹಾಗೂ ಸನ್ನಿಧಿ ಜೋಡಿ ನೋಡಿ ಫಿದಾ ಆದವರು ಒಬ್ರಾ? ಇಬ್ರಾ? ಇಬ್ಬರಿಗೆ ಲವ್- ರೊಮ್ಯಾನ್ಸ್ ಕೆಮಿಸ್ಟ್ರೀ ನೋಡೋಕೆ ಒಂಥರ ಮಜಾ, ನೋಡುತ್ತಾ ನೋಡುತ್ತಾ 1500 ಸಂಚಿಕೆಗಳನ್ನು ದಾಟಿದ್ದೆ ಗೊತ್ತಾಗಿಲ್ಲ.
ಅಗ್ನಿಸಾಕ್ಷಿ ಬಿಟ್ಟು IAS ಅಧಿಕಾರಿ ಆಗ್ತಾರಾ ಅಂಜಲಿ?
ಧಾರಾವಾಹಿಯಲ್ಲಿ ಮುಖ್ಯ ಪಾತ್ರಗಳಷ್ಟೇ ಹೆಚ್ಚು ಸೌಂಡ್ ಮಾಡಿದ್ದು ವಿಲನ್ಗಳು, ಈ ಹಿಂದೆ ಚಂದ್ರಿಕಾ ಪಾತ್ರದಲ್ಲಿ ರಾಜೇಶ್ವರಿ ಕಾಣಿಸಿಕೊಳ್ಳುತ್ತಿದ್ದರು ಆನಂತರ ಅವರ ಸ್ಥಾನಕ್ಕೆ ಬಂದವರು ಪ್ರಿಯಾಂಕ. ಇನ್ನು ಪೋಷಕರ ಪಾತ್ರದಲ್ಲಿ ಮುಖ್ಯ ಮಂತ್ರಿ ಚಂದ್ರು ಮನೆ ಮನಗಳನ್ನು ಗೆದ್ದಿದ್ದಾರೆ.
ಅಗ್ನಿಸಾಕ್ಷಿ ಚಂದ್ರಿಕಾ ಮನೆಗೆ ಲಿಟಲ್ ಪ್ರಿನ್ಸೆಸ್!
ಕೆಲ ಮೂಲಗಳ ಪ್ರಕಾರ ಧಾರಾವಾಹಿ ಅಂತಿಮ ಘಟ್ಟ ತಲುಪಿದೆ. ಕೆಲ ಮೂಲಗಳ ಪ್ರಕಾರ ಅಂತಿಮ ಸಂಚಿಕೆ ಜನವರಿಯಲ್ಲಿ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ. ಇದರ ಬಗ್ಗೆ ವಾಹಿನಿಯವರು ಅಥವಾ ಧಾರಾವಾಹಿ ತಂಡದವರು ಖಚಿತ ಪಡಿಸಿಲ್ಲ.