
ನೀತು ವನಜಾಕ್ಷಿ ಎಂದಾಕ್ಷಣ ಕಿರುತೆರೆ ಪ್ರಿಯರ ಕಣ್ಣ ಮುಂದೆ ಬರುವುದು ಬಿಗ್ಬಾಸ್ ಸ್ಪರ್ಧಿ. ಟ್ರ್ಯಾನ್ಸ್ಜೆಂಡರ್ ಆಗಿರುವ ನೀತು ಅವರು ಬಿಗ್ಬಾಸ್ ಮನೆಯಲ್ಲಿ ಕೆಲವೇ ವಾರಗಳಲ್ಲಿ ಇದ್ದು ಹೊರಕ್ಕೆ ಬಂದವರು. ಗದಗ ಮೂಲದ ಮಂಜುನಾಥ್ ಈಗ ನೀತು ವನಜಾಕ್ಷಿ ಆಗಿ ಬದಲಾಗಿದ್ದಾರೆ. ಪ್ರೌಢಾವಸ್ಥೆಯಲ್ಲಿ ಹುಡುಗರ ಟಾಕ್ಸ್ ನನಗೆ ಸೆಟ್ ಆಗುತ್ತಿರಲಿಲ್ಲ. ಹುಡುಗರೆಲ್ಲಾ ಹುಡುಗಿಯರ ಬಗ್ಗೆ ಮಾತನಾಡುತ್ತಿದ್ದರು. ನನಗೆ ಆ ಫೀಲ್ ಬರುತ್ತಿರಲಿಲ್ಲ. ನನಗೆ ಹುಡುಗರ ಕಂಡ್ರೆ ಅಟ್ರ್ಯಾಕ್ಷನ್ ಆಗುತ್ತಿತ್ತು. ನನಗೆ ಇದರಿಂದ ಕನ್ಫ್ಯೂಷನ್ ಆಗಿತ್ತು. ಆಗ ನಾನು ಅಕ್ಕನ ಬಟ್ಟೆ ಹಾಕುತ್ತಿದ್ದೆ. ಕಾಜಲ್ ಹಚ್ಚಿಕೊಳ್ಳುತ್ತಿದ್ದೆ. ಆಗಲೇ ನನಗೆ ನನ್ನ ಬಗ್ಗೆ ಅರಿವಾಗಿ ಮಂಜುನಾಥ್ನಿಂದ ವನಜಾಕ್ಷಿಯಾದೆ ಎಂದು ತಮ್ಮ ಹಿನ್ನೆಲೆಯಲ್ಲಿ ಹೇಳಿಕೊಂಡಿದ್ದರು ನೀತು. ಬಿಗ್ಬಾಸ್ ಮನೆಯಲ್ಲಿಯೂ ಚೆನ್ನಾಗಿ ಆಡಿದ್ದ ನೀತು ಅವರು, ಮನೆಯಿಂದ 7ನೇ ವಾರಕ್ಕೆ ಎಲಿಮಿನೇಟ್ ಆಗಿ ಹೊರಕ್ಕೆ ಬಂದರು.
ಇದೀಗ ಆ ಕ್ಷಣಗಳನ್ನು ಅವರು ಕಲರ್ಸ್ ಕನ್ನಡ ವಾಹಿನಿ ಜೊತೆ ಶೇರ್ ಮಾಡಿಕೊಂಡಿದ್ದಾರೆ. ನನಗೆ ಜನರ ಪ್ರೀತಿ ಸಿಕ್ಕಿದೆ. ಟ್ರಾನ್ಸ್ಜೆಂಡರ್ ಎಂದರೆ ಸಮಾಜ ಒಂದು ರೀತಿಯಲ್ಲಿ ನೋಡುತ್ತದೆ. ಆದರೆ ನಾನು ಏನು ಎನ್ನುವುದನ್ನು ಬಿಗ್ಬಾಸ್ ತೋರಿಸಿಕೊಟ್ಟಿದೆ. ಇದೀಗ ಜನರು ನೋಡುವ ದೃಷ್ಟಿ ಬದಲಾಗಿದೆ. ಜನರ ಪ್ರೀತಿ ಸಿಕ್ಕಿದೆ. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ಪ್ರೀತಿಯಿಂದ ನೋಡುತ್ತಾರೆ ಎಂದಿದ್ದಾರೆ. ಇದೇ ವೇಳೆ, ಬಿಗ್ಬಾಸ್ ಮನೆಯಲ್ಲಿ ಅಪ್ಪ-ಅಮ್ಮನನ್ನು ಕರೆಸಿದ್ದ ಕ್ಷಣ ಅದಾಗಲೇ ಎಲಿಮಿನೇಟ್ ಆಗಿದ್ದೆ ಎಂದು ಬೇಸರಿಸಿಕೊಂಡ ನೀತು ಅವರು, ಆ ಕ್ಷಣ ನಾನೂ ಅಲ್ಲಿಯೇ ಇರಬೇಕಿತ್ತು ಅನ್ನಿಸಿತು. ನಾನು ಇಷ್ಟು ಮುಂದೆ ಬರಲು ಕಾರಣ ನನ್ನ ಅಮ್ಮ. ಅವರನ್ನು ಎಲ್ಲರಿಗೂ ಪರಿಚಯ ಮಾಡಿಸುವ ಅವಕಾಶ ನನಗೆ ಸಿಗಲಿಲ್ಲ. ಆ ಒಂದು ನೋವು ಇದೆ ಎಂದಿದ್ದಾರೆ.
ತಮ್ಮ ಜೀವನದ ಅಪರೂಪದ ವ್ಯಕ್ತಿಯನ್ನು ಪರಿಚಯಿಸಿದ ಬಿಗ್ಬಾಸ್ ಸಂಗೀತಾ ಶೃಂಗೇರಿ
ಇನ್ನೋರ್ವ ಸ್ಪರ್ಧಿ ಪವಿ ಪೂವಪ್ಪ. ಮಾಡಲ್ ಹಾಗೂ ಫ್ಯಾಷನ್ ಇನ್ಫ್ಲೂಯನ್ಸರ್ ಆಗಿರುವ ಪವಿ ಪೂವಪ್ಪ ಸಖತ್ ಬೋಲ್ಡ್ ಆಗಿರುವ ಡ್ರೆಸ್ ಹಾಕಿಕೊಳ್ಳುವಲ್ಲಿ ಫೇಮಸ್ ಇವರು ವೈಲ್ಡ್ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದರು. ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಾಗಿನಿಂದಲೂ ಮೊದಲ ವಾರ ಬಿಟ್ಟು, ಮತ್ತೆ ಉಳಿದ ವಾರವೆಲ್ಲಾ ನಾಮಿನೇಟ್ ಆಗಿದ್ದರು ಪವಿ. ನಂತರ ಕೆಲವೇ ವಾರಗಳಲ್ಲಿ ಎಲಿಮಿನೇಟ್ ಆದರು. ನಾನೀಗ ಸೆಲೆಬ್ರಿಟಿ ಆಗಿದ್ದೇನೆ. ನನ್ನನ್ನುಜನರು ಗುರುತಿಸುತ್ತಾರೆ. ಅವರ ಪ್ರೀತಿ ಸಿಕ್ಕಿದೆ. ಸೆಲೆಬ್ರಿಟಿಗಳನ್ನು ನೋಡಿ ಜನರು ಫಾಲೋ ಮಾಡುತ್ತಾರೆ. ಆದ್ದರಿಂದ ನನ್ನ ಡ್ರೆಸ್ ಸೆನ್ಸ್ ಹೇಗಿರಬೇಕು ಎಂಬ ಅರಿವಾಗಿದೆ. ಅದರಂತೆಯೇ ನಡೆದುಕೊಳ್ಳುವೆ ಎಂದಿದ್ದಾರೆ. ಮೊದಲಿಗೆ ಮನೆಯಿಂದ ಆಚೆ ಕಾಲಿಡುತ್ತಿರಲಿಲ್ಲ. ಈಗ ನನಗೂ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಆಚೆಗೆ ಹೋದರೂ ಜನ ಗುರುತಿಸುತ್ತಾರೆ ಎಂದಿದ್ದಾರೆ.
ಇನ್ನೋರ್ವ ವೈಲ್ಡ್ ಕಾರ್ಡ್ ಎಂಟ್ರಿ ಆದವರು ಅಸ್ತಿಕ್ ಅವಿನಾಶ್ ಶೆಟ್ಟಿ. ಇವರು ಬಹುಬೇಗ ಬಿಗ್ಬಾಸ್ಮನೆಯಿಂದ ಹೊರಕ್ಕೆ ಬಂದರು. ಅದಕ್ಕೆ ಕಾರಣ ನೀಡಿದ ಅವರು ನಾವು ವೈಲ್ಡ್ಕಾರ್ಡ್ ಆಗಿ ಹೋಗುವಾಗಲೇ ಅರ್ಧ ಜರ್ನಿ ಮುಗಿದಿತ್ತು. ಅಲ್ಲಿ ಮೊದಲೇ ಇದ್ದವರು ಫಿನಾಲೆಯತ್ತ ಹೆಜ್ಜೆ ಹಾಕಿದ್ದರು. ವೈಲ್ಡ್ಕಾರ್ಡ್ ಆಗಿ ಹೋದವರಿಗೆ ಅದು ತುಂಬಾ ಕಷ್ಟ. ಆದರೂ ಒಂದಷ್ಟು ದಿನ ಇರೋಣ ಎಂದುಕೊಂಡಿದ್ದೆ. ಆದರೆ ಜನರ ಪ್ರೀತಿ ಸಿಕ್ಕಿದೆ, ಅದೇ ಖುಷಿ ಎಂದಿದ್ದಾರೆ.
ಬಿಗ್ಬಾಸ್ ಖ್ಯಾತಿ ಬೆನ್ನಲ್ಲೇ ಗಿಚ್ಚಿ-ಗಿಲಿಗಿಲಿಗೆ ಡ್ರೋನ್ ಭರ್ಜರಿ ಎಂಟ್ರಿ: ಡ್ಯಾನ್ಸ್ನಿಂದ ಮೋಡಿ ಮಾಡಿದ ಪ್ರತಾಪ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.