ವಿನಯ್​ ಗೌಡಗೆ ಬಿಗ್​ಶಾಕ್​ ನೀಡಿದ ನಮ್ರತಾ: ಬದುಕಿನ ಸತ್ಯ ಈಗ ಅರ್ಥ ಆಯ್ತು ಎಂದ ವಿನಯ್​!

Published : Nov 30, 2023, 05:26 PM IST
ವಿನಯ್​ ಗೌಡಗೆ ಬಿಗ್​ಶಾಕ್​ ನೀಡಿದ ನಮ್ರತಾ: ಬದುಕಿನ ಸತ್ಯ ಈಗ ಅರ್ಥ ಆಯ್ತು ಎಂದ ವಿನಯ್​!

ಸಾರಾಂಶ

ಕ್ಯಾಪ್ಟನ್​ಷಿಪ್​ನಿಂದ ಹೊರಕ್ಕೆ ಯಾರನ್ನು ಇಡುತ್ತೀರಿ ಎನ್ನುವ ಪ್ರಶ್ನೆಗೆ ನಮ್ರತಾ ವಿನಯ್​ ಹೆಸರು ಹೇಳಿದ್ದು, ಇದು ಹಲವರ ಅಚ್ಚರಿಗೆ ಕಾರಣವಾಗಿದೆ.  

ಬಿಗ್​ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಹೊಸಹೊಸ ವಿಷಯಗಳು ನಡೆಯುತ್ತಿವೆ. ವಿನಯ್ ಗೌಡ ಬಿಗ್ ಬಾಸ್ ಮನೆಗೆ ಬಂದ ಕೆಲವೇ ವಾರಗಳಲ್ಲಿ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರು. ಇದು ಕೆಲವರ ಅಸಮಾಧಾನಕ್ಕೂ ಕಾರಣವಾಗಿತ್ತು. ಇದೀಗ ಕುತೂಹಲದ ಬೆಳವಣಿಗೆಯೊಂದರಲ್ಲಿ ನಮ್ರತಾ ಗೌಡ ವಿನಯ್​ ಅವರಿಗೆ ಬಿಗ್​ ಶಾಕ್​ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಮಾಡೆಲ್​ಗಳಾದ ಪವಿ ಪೂವಪ್ಪ ಹಾಗೂ ಅವಿನಾಶ್ ಶೆಟ್ಟಿ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಬಂದ ಮೇಲೆ ಬಿಗ್​ಬಾಸ್​ ಮನೆಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ಹೊರಗೆ ನಡೆದ ಅನೇಕ ವಿಚಾರಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.  ನೀವು ಇನ್ನೂ ವಿನಯ್ ಅವರ ನೆರಳಲ್ಲೇ ಇದ್ದೀರಿ ಎಂದು ಪವಿ  ನಮ್ರತಾಗೆ ಕಿವಿಮಾತು ಹೇಳಿದ್ದು, ಅದನ್ನು  ನಮ್ರತಾ ಗಂಭೀರವಾಗಿ ಸ್ವೀಕರಿಸಿದಂತೆ ಇದೆ.

ಇದೀಗ ನಮ್ರತಾ ವಿನಯ್​ ಅವರನ್ನು ಕ್ಯಾಪ್ಟನ್​ಷಿಪ್​ನಿಂದ ಹೊರಕ್ಕೆ ಇಡುವ ಮಾತನಾಡಿ ಅವರಿಗೆ ಶಾಕ್​ ನೀಡಿದ್ದಾರೆ. ನಮ್ರತಾ, ವಿನಯ್, ಸ್ನೇಹಿತ್ ಈ ಮೂವರು  ಒಬ್ಬರನ್ನ ಬಿಟ್ಟು ಒಬ್ಬರು  ಇರ್ತಿರಲಿಲ್ಲ. ಏನೇ ಸವಾಲು ಬಂದರೂ ಒಟ್ಟಿಗೇ ಎದುರಿಸುತ್ತಿದ್ದರು.  ಆದರೆ ಪ್ರತಾಪ್​ ಎಂಟ್ರಿ ಆಗುತ್ತಿದ್ದಂತೆಯೇ  ನಮ್ರತಾಗೆ  ಇಲ್ಲಿ ಯಾರು ನಮ್ಮವರಲ್ಲ ಎಂಬುದು ಅರ್ಥವಾಗ್ತಿದೆ. ಇದೇ ಕಾರಣಕ್ಕೆ  ವಿನಯ್ ಅವರನ್ನು ಕ್ಯಾಪ್ಟನ್​ಷಿಪ್​ನಿಂದ ಹೊರಕ್ಕೆ ಇಡುವ ಮಾತನಾಡಿದ್ದಾರೆ.

ಕಾಲಿಗೆ ಹಗ್ಗ ಕಟ್ಟಿಕೊಂಡು ಆಡುವ ಭರದಲ್ಲಿ ಕಾಲ್ತುಳಿತ, ಒಬ್ಬರ ಮೇಲೊಬ್ಬರು ಬಿದ್ದು ಒದ್ದಾಡಿದ ಸ್ಪರ್ಧಿಗಳು!

ಬಿಗ್​ಬಾಸ್ ನಮ್ರತಾ ಅವರಿಗೆ ಈ ಪ್ರಶ್ನೆ ಕೇಳಿತ್ತು. ಈ ವಾರ ಕ್ಯಾಪ್ಟನ್​ಷಿಪ್​ನಿಂದ ಯಾರನ್ನು ಹೊರಕ್ಕೆ ಇಡಲು ಬಯಸುವಿರಿ ಎಂದು. ಅದಕ್ಕೆ ನಮ್ರತಾ ವಿನಯ್​ ಹೆಸರು ಹೇಳಿದ್ದಾರೆ. ಇವರಿಗೆ ಕೋಪ ಬಂದಾಗ ಏನನ್ನೂ ನೋಡುವುದಿಲ್ಲ. ಕೋಪದಲ್ಲಿ ಯಾರಿಗೆ ಹರ್ಟ್​ ಮಾಡುತ್ತೇನೆ ಎನ್ನುವುದೇ ಗೊತ್ತಾಗುವುದಿಲ್ಲ. ಆದ್ದರಿಂದ ಅವರನ್ನು ಕ್ಯಾಪ್ಟನ್​ಷಿಪ್​ನಿಂದ ಹೊರಕ್ಕೆ ಇಡಲು ಬಯಸುತ್ತೇನೆ ಎಂದರು. ಇದರಿಂದ ಸಹಜವಾಗಿ ವಿನಯ್​ ಅವರಿಗೆ ಕೋಪ ಬಂದಿದೆ. ಈ ಒಂದು ಜರ್ನಿಯಲ್ಲಿ ಯಾರೂ ನಮ್​ ಜೊತೆ ಯಾರೂ ಬರಲ್ಲ. ಈ ಒಂದು ಸತ್ಯ ಅರ್ಥ ಆಗಿದೆ ಈಗ ಎಂದರು. ಇದರ ಪ್ರೊಮೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. 

ನಮ್ರತಾ ಮಾತು ವಿನಯ್​ಗೆ ಮಾತ್ರವಲ್ಲದೇ ಹಲವರನ್ನು ಅಚ್ಚರಿಕೆ ತಳ್ಳಿದೆ. ಏಕೆಂದರೆ ವಿನಯ್​ ಹೆಸರನ್ನು ನಮ್ರತಾ ತೆಗೆದುಕೊಳ್ಳಬಹುದು ಎಂದು ಯಾರೂ ಊಹಿಸಿದಂತೆ ಇರಲಿಲ್ಲ. ನಮ್ರತಾ ಅವರು ವಿನಯ್​ ಹೆಸರನ್ನು ಬೇಸರದಿಂದಲೇ ಹೇಳಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ನಮ್ರತಾ ನಿರ್ಧಾರ  ಸ್ನೇಹಿತ್‌ ಅವರಿಗೂ ಬೇಸರ ತರಿಸಿದ್ದನ್ನು ಪ್ರೊಮೋದಲ್ಲಿ ನೋಡಬಹುದು. ಇನ್ನು ಕಮೆಂಟ್​ ಸೆಕ್ಷನ್​ನಲ್ಲಿ ನಮ್ರತಾ ವಿರುದ್ಧವಾಗಿ ಹಲವರು ಮಾತನಾಡಿದ್ದಾರೆ. 

ಆಟದ ಹೆಸರಲ್ಲಿ ಭಾರಿ ಹೊಡೆದಾಟ! ವೈಲ್ಡ್​ ಕಾರ್ಡ್​ ಎಂಟ್ರಿ ಆಗ್ತಿದ್ದಂತೆಯೇ ಬಿಗ್​ಬಾಸ್​ ಮನೆಯಲ್ಲಿ ಇದೇನಿದು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?