App ki adalat: ಮೋದಿ, ಶಾರುಖ್‌, ವಾಜಪೇಯಿ ಕೂತ ಹಾಟ್‌ಸೀಟ್‌ನಲ್ಲಿ ಯಶ್; ಈ ಶೋನಲ್ಲಿ ಕಾಣಿಸಿಕೊಂಡ ಮೊದಲ ಕನ್ನಡಿಗ!

Published : Aug 11, 2026, 08:20 PM IST
App Ki Adalat

ಸಾರಾಂಶ

ಕೆಜಿಎಫ್ ಖ್ಯಾತಿಯ ನಟ ಯಶ್, 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ಭಾಗವಹಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ, ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ವೇದಿಕೆಯಲ್ಲಿ ಕಾಣಿಸಿಕೊಂಡ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಸ್ಯಾಂಡಲ್‌ವುಡ್‌ಗೆ ಹೆಮ್ಮೆ ತಂದಿದ್ದಾರೆ.

ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದು, ಸ್ಯಾಂಡಲ್‌ವುಡ್ ಸಾಮರ್ಥ್ಯವನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟ ಹೆಮ್ಮೆಯ ನಟ 'ರಾಕಿಂಗ್ ಸ್ಟಾರ್' ಯಶ್. 'ಕೆಜಿಎಫ್' ಸರಣಿ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ಸಂಚಲನ ಸೃಷ್ಟಿಸಿದ್ದ ನಟ ಯಶ್, ಇದೀಗ ಮತ್ತೊಂದು ಅಪರೂಪದ ಹಾಗೂ ಐತಿಹಾಸಿಕ ಮೈಲಿಗಲ್ಲನ್ನು ತಮ್ಮದಾಗಿಸಿಕೊಂಡಿದ್ದಾರೆ. ದೇಶದ ಅತ್ಯಂತ ಪ್ರಸಿದ್ಧ ಹಾಗೂ ದೀರ್ಘಾವಧಿಯ ಟಿವಿ ಟಾಕ್ ಶೋ ಎಂದೇ ಪ್ರಖ್ಯಾತಿ ಪಡೆದಿರುವ 'ಆಪ್ ಕಿ ಅದಾಲತ್' (Aap Ki Adalat) ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಹಾಟ್‌ಸೀಟ್‌ನಲ್ಲಿ ಕೂತ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಾಷ್ಟ್ರೀಯ ಮಟ್ಟದ ಅತ್ಯಂತ ಪ್ರತಿಷ್ಠಿತ ವೇದಿಕೆ!

ಹಿರಿಯ ಪತ್ರಕರ್ತ ರಜತ್ ಶರ್ಮಾ ನಡೆಸಿ ಕೊಡುವ 'ಆಪ್ ಕಿ ಅದಾಲತ್' ಬರಿಗೈ ಶೋ ಅಲ್ಲ. ಕಳೆದ ಮೂರು ದಶಕಗಳಿಂದಲೂ ದೇಶದ ಅತ್ಯಂತ ಪ್ರಭಾವಿ ವ್ಯಕ್ತಿಗಳು ಮಾತ್ರವೇ ಈ ಹಾಟ್‌ ಸೀಟನಲ್ಲಿ ನಿಂತು ಕಠಿಣ ಪ್ರಶ್ನೆಗಳನ್ನು ಎದುರಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಂತಹ ಖ್ಯಾತ ರಾಜಕಾರಣಿಗಳು, ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್ ಅವರಂತಹ ಸೂಪರ್‌ಸ್ಟಾರ್‌ಗಳು ಕುಳಿತ ಅದೇ ಈ ಚೇರ್‌ನಲ್ಲಿ, ಇದೀಗ ನಮ್ಮ ಕನ್ನಡದ ಯಶ್ ಗಂಭೀರವಾಗಿ, ಕಟ್ಟುಮಸ್ತಾಗಿ ಕುಳಿತು ಉತ್ತರ ನೀಡಿದ್ದಾರೆ. ಇದುವರೆಗೆ ಕನ್ನಡದ ಯಾವೊಬ್ಬ ನಟನಿಗೂ ಸಿಗದಿದ್ದ ಈ ಅಪರೂಪದ ಗೌರವ, ಕನ್ನಡಿಗ ಯಶ್ ಅವರಿಗೆ ದೊರೆತಿರುವುದು ಪ್ರತಿಯೊಬ್ಬ ಸ್ಯಾಂಡಲ್‌ವುಡ್ ಅಭಿಮಾನಿಗೂ ಹೆಮ್ಮೆಯ ವಿಷಯ.

ಕಠಿಣ ಪ್ರಶ್ನೆಗಳು & 'ರಾಕಿ ಭಾಯ್' ಖಡಕ್ ಉತ್ತರದ ನಿರೀಕ್ಷೆ!

'ಆಪ್ ಕಿ ಅದಾಲತ್' ವೇದಿಕೆಯಲ್ಲಿ ರಜತ್ ಶರ್ಮಾ ಅವರ ತೀಕ್ಷ್ಣ ಹಾಗೂ ನೇರಾನೇರ ಪ್ರಶ್ನೆಗಳಿಗೆ ಉತ್ತರಿಸುವುದು ಅಷ್ಟು ಸುಲಭವಲ್ಲ. ಆದರೆ, ತಮ್ಮ ಸ್ಪಷ್ಟ ಸಿದ್ಧಾಂತ ಮತ್ತು ಬದ್ಧತೆಗೆ ಹೆಸರಾಗಿರುವ ಯಶ್, ಇಲ್ಲಿಯೂ ಸಹ ಅತ್ಯಂತ ನಯವಾಗಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ ಎನ್ನುವ ನಿರೀಕ್ಷೆ ಇದೆ.

ಸಾಮಾನ್ಯ ನಟನಿಂದ 'ಗ್ಲೋಬಲ್ ಐಕಾನ್' ವರೆಗಿನ ಪ್ರಯಾಣ!

ಟಿವಿ ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳಿಂದ ವೃತ್ತಿಜೀವನ ಆರಂಭಿಸಿ, ಇಂದು ದೇಶದ ಪ್ರಭಾವಿ ನಾಯಕರ ಸಾಲಿನಲ್ಲಿ ನಿಲ್ಲುವ ಮಟ್ಟಕ್ಕೆ ಯಶ್ ಬೆಳೆದು ನಿಂತ ಹಾದಿ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. ಕೇವಲ ಸಿನಿಮಾದಲ್ಲಿ ಹೀರೋ ಆಗಿರುವುದಷ್ಟೇ ಅಲ್ಲ, ರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡದ ಹಿರಿಮೆಯನ್ನು ಎತ್ತಿಹಿಡಿಯುವ ನಾಯಕನಾಗಿ ಯಶ್ ಹೊರಹೊಮ್ಮಿದ್ದಾರೆ.

ದಿಗ್ಗಜರ ಸಾಲಿನಲ್ಲಿ ಯಶ್!

ಮೋದಿ, ವಾಜಪೇಯಿ, ಶಾರುಖ್ ಖಾನ್ ಅವರಂತಹ ದಿಗ್ಗಜರು ಕುಳಿತ ಅದೇ ಐತಿಹಾಸಿಕ ಪೀಠದಲ್ಲಿ ಕನ್ನಡದ ಧ್ವನಿಯಾಗಿ ಯಶ್ ಕಂಗೊಳಿಸಿರುವುದು ಸ್ಯಾಂಡಲ್‌ವುಡ್ ಇತಿಹಾಸದಲ್ಲಿ ಬಂಗಾರದ ಅಕ್ಷರಗಳಲ್ಲಿ ಬರೆದಿಡುವಂತಹ ಕ್ಷಣ. ಈ ಸಂಚಿಕೆಯು ಪ್ರಸಾರವಾಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕನ್ನಡಿಗರು 'ರಾಕಿ ಭಾಯ್' ಹೆಜ್ಜೆಯನ್ನು ಸಂಭ್ರಮಿಸುತ್ತಿದ್ದಾರೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನೀವು ಇಲ್ಲಿ ಇರೋದಕ್ಕೆ ಲಾಯಕ್ಕೇ ಇಲ್ಲ: ವಿನಯ್​ ಗೌಡ ಫೋಟೋಗೇ ಬೆಂಕಿ ಇಟ್ಟ Bigg Boss ಆಕಾಂಕ್ಷಿ
ಕರ್ಣ ಸೀರಿಯಲ್‌ ಬಿಟ್ಟ ನಮ್ರತಾ ಗೌಡ ಕಿರಣ್‌ ಜೊತೆ ಕಾಣಿಸಿಕೊಂಡ್ರು.. ಅಚ್ಚರಿಯ ಈ ಬೆಳವಣಿಗೆ ರಹಸ್ಯವೇನು?