ಮೋರಿ ಪಕ್ಕದಲ್ಲಿ ಕುಳಿತು ವಡಾ ಪಾವ್‌ ತಿಂದ ದರ್ಶನ್- ಸೃಜನ್; ಗಾಬರಿಯಾದ ಅಭಿಮಾನಿ ಏನ್ ಮಾಡಿದ ನೋಡಿ!

Published : Mar 15, 2025, 05:24 PM ISTUpdated : Mar 15, 2025, 05:50 PM IST
ಮೋರಿ ಪಕ್ಕದಲ್ಲಿ ಕುಳಿತು ವಡಾ ಪಾವ್‌ ತಿಂದ ದರ್ಶನ್- ಸೃಜನ್; ಗಾಬರಿಯಾದ ಅಭಿಮಾನಿ ಏನ್ ಮಾಡಿದ ನೋಡಿ!

ಸಾರಾಂಶ

ಮಜಾ ಟಾಕೀಸ್‌ನಲ್ಲಿ ಶರಣ್ಯಾ ಶೆಟ್ಟಿ, ಶಾನ್ವಿ ಶ್ರೀವಾತ್ಸವ್, ಮಾನ್ವಿತಾ ಕಾಮತ್ ಅತಿಥಿಗಳಾಗಿದ್ದರು. ಸೃಜನ್, ದರ್ಶನ್ ಜೊತೆ ಶಿರಡಿಯಲ್ಲಿ ವಡಾ ಪಾವ್ ತಿನ್ನುವಾಗ ನಡೆದ ಘಟನೆಯನ್ನು ನೆನಪಿಸಿಕೊಂಡರು. ದರ್ಶನ್ ಮೇಕಪ್ ಇಲ್ಲದೆ ಮೋರಿ ಪಕ್ಕದಲ್ಲಿ ವಡಾ ಪಾವ್ ತಿನ್ನುವುದನ್ನು ನೋಡಿ ಜನರು ಆಶ್ಚರ್ಯಚಕಿತರಾದರು. ದರ್ಶನ್ ಮತ್ತು ಸೃಜನ್ ತಂದೆಯವರ ಸ್ನೇಹದಿಂದ ಇವರ ಸ್ನೇಹ ಬೆಳೆದಿತ್ತು. ಸಣ್ಣ ಮನಸ್ಥಾಪದಿಂದ ದೂರವಿದ್ದು, ಅಭಿಮಾನಿಗಳು ಮತ್ತೆ ಒಂದಾಗಬೇಕೆಂದು ಬಯಸುತ್ತಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾ ಟಾಕೀಸ್‌ ಕಾರ್ಯಕ್ರಮದಲ್ಲಿ ಈ ವಾರ ಶರಣ್ಯಾ ಶೆಟ್ಟಿ, ಶಾನ್ವಿ ಶ್ರೀವಾತ್ಸ ಹಾಗೂ ಮಾನ್ವಿತಾ ಕಾಮತ್ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಸಾಮಾನ್ಯವಾಗಿ ಮೇಕಪ್ ಇಲ್ಲದೆ ಸೆಲೆಬ್ರಿಟಿಗಳು ರಸ್ತೆ ಮೇಲೆ ಬಂದರೆ ಕಂಡು ಹಿಡಿಯುವುದು ಕಷ್ಟ ಅಂತಾರೆ. ಒಂದು ಪಕ್ಷ ನೇರವಾಗಿ ಕೇಳಿಬಿಟ್ಟರೆ ಒಂದು ರೀತಿ, ಗೊತ್ತಾಗದೆ ಮುಖ ಮುಖ ನೋಡಿದರೆ ತುಂಬಾ ವಿಚಿತ್ರ ಅನಿಸುತ್ತದೆ ಎಂದು ಚರ್ಚೆ ಮಾಡುವಾಗ ಸೃಜನ್ ಮರೆಯಲಾಗದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

'ಶಿರಡಿಯಲ್ಲಿ ದಿನಕರ್ ಮದುವೆ ನಡೆಯುತ್ತಿತ್ತು. ನಟ ದರ್ಶನ್ ಜೊತೆ ನಾನು ಹೋಗಿದ್ದೆ. ನಾನು ದರ್ಶನ್ ಮತ್ತು ಕುಟುಂಬದವರೆಲ್ಲಾ ಹೋಗಿದ್ವಿ. ದಿನಕರ್ ಮದುವೆ ಮಾರನೇ ದಿನ ಇತ್ತು ಅಲ್ಲೇ ವಡಾ ಪಾವ್‌ ತಿನ್ನೋಣ ಅಂತ ದರ್ಶನ್ ಹೇಳಿದ. ಸರಿ ಅಂತ ಹೋಗಿ ಅಲ್ಲೇ ವಡಾ ಪಾವ್ ಅಂಗಡಿ ಪಕ್ಕದಲ್ಲಿ ಒಂದು ಮೋರಿ ಇತ್ತು. ಅಲ್ಲಿ ಒಂದು ಬೆಂಚಿನ ಮೇಲೆ ಕುಳಿತುಕೊಂಡು ನಾನು ಮತ್ತು ದರ್ಶನ್ ತಿನ್ನುತ್ತಿದ್ವಿ. ಆಗ ಅಲ್ಲೇ ಒಬ್ಬ ವ್ಯಕ್ತಿ ಹೋಗಿ ಬರುತ್ತಿದ್ದ ಅವನು ನಮ್ಮನ್ನು ನೋಡಿ ಶಾಕ್ ಆದ್ರು. ಅಲ್ಲಿ ನಮ್ಮ ಕಾರು ನಿಂತಿತ್ತು. ಕರ್ನಾಟಕದ ಕಾರು ಅಂತ ಅಕ್ಕಪಕ್ಕ ನೋಡಲು ಶುರು ಮಾಡಿದ್ದರು. ನನ್ನ ಮತ್ತು ದರ್ಶನ್‌ನನ್ನು ನೋಡಿ 10ರಿಂದ 15 ನಿಮಿಷ ನಮ್ಮನ್ನು ನೋಡುಕೊಂಡು ಹೋಗುವುದು ಮಾಡುತ್ತಿದ್ದ. ವಾಪಸ್‌ ಬಂದು ಮತ್ತೆ ನೋಡಿದ. 'ಅಯ್ಯೋ ಯಾಕೆ ಮೋರಿ ಪಕ್ಕದಲ್ಲಿ ಕುಳಿತುಕೊಂಡು ವಡಾ ಪಾವ್ ತಿನ್ನುತ್ತಾರೆ? ಇವರು ದರ್ಶನ್ ಆಗಿರುವುದಕ್ಕೆ ಚಾನ್ಸೇ ಇಲ್ಲ' ಅಂತ ಅಲ್ಲಿದ್ದ ಒಬ್ಬ ಹೇಳಿದ. ಇನ್ನೇನು ಎದ್ದು ಹೋಗುವ ಸಮಯದಲ್ಲಿ ಅವರ ಮಗ ಅಪ್ಪಾ ಅಪ್ಪ ಇದು ದರ್ಶನ್ ಎಂದು ಕೂಗಿದ. ಗಾಬರಿಯಾಗಿ ಅವನು ದರ್ಶನ್‌ನನ್ನು ತಬ್ಬಿಕೊಳ್ಳುವ ಬದಲು ನನ್ನನ್ನು ತಬ್ಬಿಕೊಂಡ ಮಾತನಾಡಿದ. ನಾನು ಅಲ್ಲ ದರ್ಶನ್ ಪಕ್ಕದಲ್ಲಿ ಇರುವುದು ಅಂತ ಹೇಳಿದ್ದಕ್ಕೆ ಅವನನ್ನು ತಬ್ಬಿಕೊಂಡರು. ಅಷ್ಟು ಗಾಬರಿ ಆಗಿಬಿಟ್ಟರು. ಇದೆಲ್ಲಾ ನಾವು ಮರೆಯುವುದಕ್ಕೆ ಸಾಧ್ಯವಿಲ್ಲ' ಎಂದು ಸೃಜನ್ ಲೋಕೇಶ್ ಮಾತನಾಡಿದ್ದಾರೆ.

ರಂಜಾನ್ ಉಪವಾಸ ಬಿಟ್ಟು ಕಾಟೇರಮ್ಮ ದೇವಸ್ಥಾನಕ್ಕೆ ಓಡಿ ಬಂದ ರೀಲ್ಸ್ ರೇಶ್ಮಾ ಆಂಟಿ!

ದರ್ಶನ್ ಮತ್ತು ಸೃಜನ್ ಲೋಕೇಶ್ ಆತ್ಮೀಯ ಸ್ನೇಹಿತರು. ಎಲ್ಲೇ ಹೋದರೂ ಒಟ್ಟಿಗೆ ಹೋಗಿ ಒಟ್ಟಿಗೆ ಬರುತ್ತಿದ್ದರು. ಇವರ ಸ್ನೇಹ ಬೆಳೆದಿದ್ದು ಅವರ ತಂದೆ ತೂಗುದೀಪ ಶ್ರೀನಿವಾಸ್ ಮತ್ತು ಲೋಕೇಶ್ ಸ್ನೇಹದಿಂದ.  ಆದರೆ ಸಣ್ಣ ಪುಟ್ಟ ಮನಸ್ಥಾಪದಿಂದ ಇಬ್ಬರು ಮಾತನಾಡುತ್ತಿಲ್ಲ...ಯಾಕೆ ಒಟ್ಟಿಗೆ ಇಲ್ಲ ಎಂದು ಪ್ರಶ್ನೆ ಮಾಡುತ್ತಿದ್ದರು. ಇದಕ್ಕೆ ಉತ್ತರ ಸಿಗಲಿಲ್ಲ. ಆದರೆ ದರ್ಶನ್ ಡೆವಿಲ್ ಸಿನಿಮಾ ಪ್ರಚಾರ ಮಾಡಲು ಮಜಾ ಟಾಕೀಸ್‌ಗೆ ಬರಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ದರ್ಶನ್ ಮತ್ತು ಸೃಜನ್ ಸ್ನೇಹದ ಕಥೆಗಳನ್ನು ಕೇಳಬೇಕು ಎಂದು ಅಭಿಮಾನಿಗಳು ಆಸೆ ಪಡುತ್ತಿದ್ದಾರೆ. 

ದೇವರ ಮುಂದೆ ಯಾರೂ ಸೂಪರ್‌ ಸ್ಟಾರ್ ಅಲ್ಲ...: ಧ್ರುವ ಸರ್ಜಾ ಪತ್ನಿ ಹೇಳಿಕೆ ವೈರಲ್

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ದೃಷ್ಟಿಬೊಟ್ಟು' ಮೂಲಕ ಕನ್ನಡಿಗರ ಮನಗೆದ್ದ ಅರ್ಪಿತಾ ಮೋಹಿತೆ ಈಗ ತೆಲುಗು ಸೀರಿಯಲ್ ನಾಯಕಿ
Bigg Bossನಲ್ಲಿ 10 ಪಟ್ಟು ಹೆಚ್ಚು ಸಂಭಾವನೆ ಸಿಕ್ಕಿದ್ದು ನಿಜ: ರಜತ್, ಚೈತ್ರಾ​ ಕುಂದಾಪುರ ರಿವೀಲ್​ ಮಾಡಿದ್ದೇನು?