ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಲಕ್ಷ್ಮೀನಿವಾಸ' ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಜಯಂತ್ನ ಸೈಕೋತನ ಮತ್ತು ಜಾಹ್ನವಿಯ ಹೋರಾಟವನ್ನು ನೋಡಿ ವೀಕ್ಷಕರು ಹಳೆಯ ಸೂಪರ್ ಹಿಟ್ ಸಿನಿಮಾಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ.
ವೆಂಕಿಯ ಅಮ್ಮನನ್ನು ಜಯಂತ್ ಕೆಟ್ಟದಾಗಿ ನಡೆಸಿಕೊಂಡ ಮೇಲೆ, ಇವನು ಎಂದಿಗೂ ಬದಲಾಗುವುದಿಲ್ಲ ಎಂದು ನಿರ್ಧರಿಸಿದ ಜಾಹ್ನವಿ ಮನೆ ಬಿಟ್ಟು ಬಂದಿದ್ದಾಳೆ. ತಂದೆ ಶ್ರೀನಿವಾಸ್ ಮತ್ತು ತಾಯಿ ಲಕ್ಷ್ಮಿಯ ಸಾಥ್ ಅವಳಿಗೆ ಸಿಕ್ಕಿದೆ. ಆದರೆ, ಅಣ್ಣ ಸಂತೋಷ್ ಮಾತ್ರ ದುಡ್ಡಿನ ದುರಾಸೆಗೆ ಬಿದ್ದು ಜಯಂತ್ ಪರವಾಗಿ ನಿಂತಿದ್ದಾನೆ.
ಜಯಂತ್ನಿಂದ ದೂರವಾದ ಮೇಲೆ ಜಾಹ್ನವಿ ತನ್ನ ಕಾಲ ಮೇಲೆ ನಿಲ್ಲಲು ಕಷ್ಟಪಟ್ಟು ಕೆಲಸ ಹುಡುಕಿ, ಲಕ್ಷಗಟ್ಟಲೆ ಪ್ಯಾಕೇಜ್ ಇರುವ ಉದ್ಯೋಗ ಗಿಟ್ಟಿಸಿಕೊಳ್ಳುತ್ತಾಳೆ. ಆದರೆ ಅಲ್ಲಿಯೂ ಜಯಂತ್ ಅವಳನ್ನು ಬಿಟ್ಟಿಲ್ಲ. ಜಾಹ್ನವಿ ಕೆಲಸ ಮಾಡುವ ಕಂಪನಿಯ ಬಾಸ್ನನ್ನೇ ಹೆದರಿಸಿ, ದುಡ್ಡು ಕೊಟ್ಟು ಇಡೀ ಕಂಪನಿಯನ್ನೇ ತನ್ನ ಹೆಸರಿಗೆ ಮಾಡಿಸಿಕೊಳ್ಳುತ್ತಾನೆ. ಈಗ ಜಾಹ್ನವಿಗೆ ತನ್ನ ಬಾಸ್ ಬೇರೆ ಯಾರೂ ಅಲ್ಲ, ಸ್ವತಃ ಜಯಂತ್ ಎಂಬ ಸತ್ಯ ತಿಳಿದು ಶಾಕ್ ಆಗಿದ್ದಾಳೆ.
ಜಯಂತ್ನ ಈ ಆಟವನ್ನು ನೋಡಿದ ವೀಕ್ಷಕರು ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಅನಂತ್ ನಾಗ್ ಅವರ ಸಿನಿಮಾಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಕಾಮೆಂಟ್ಗಳ ಸುರಿಮಳೆಯೇ ಹರಿದುಬರುತ್ತಿದೆ.
'ಮಾಂಗಲ್ಯಂ ತಂತುನಾನೇನಾ' ಕಾಪಿ?: "ಬರುತ್ತಾ ಬರುತ್ತಾ ಇದು ರವಿಚಂದ್ರನ್ ಅಭಿನಯದ 'ಮಾಂಗಲ್ಯಂ ತಂತುನಾನೇನಾ' ಸಿನಿಮಾದಂತೆಯೇ ಆಗುತ್ತಿದೆ" ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಆ ಸಿನಿಮಾದಲ್ಲೂ ನಾಯಕ ನಾಯಕಿಯನ್ನು ಪಡೆಯಲು ಅವಳ ಸುತ್ತಮುತ್ತಲಿನ ಪರಿಸ್ಥಿತಿಯನ್ನು ನಿಯಂತ್ರಿಸುತ್ತಿರುತ್ತಾನೆ.
'ಮನೆ ದೇವ್ರು' ನೆನಪು: ಇನ್ನು ಕೆಲವರು ಇದು ರವಿಚಂದ್ರನ್ ಅವರ 'ಮನೆ ದೇವ್ರು' ಸಿನಿಮಾದ ಕಾಪಿ ಎನ್ನುತ್ತಿದ್ದಾರೆ. ಆದರೆ ಇಲ್ಲಿ ಜಯಂತ್ ಜಾಹ್ನವಿಯನ್ನು ಬಿಟ್ಟು ಬೇರೆ ಯಾರನ್ನೂ ಕಣ್ಣೆತ್ತಿ ನೋಡುವುದಿಲ್ಲ ಎನ್ನುವುದು ವೀಕ್ಷಕರ ವಾದ.
ಅನಂತ್ ನಾಗ್ ಸಿನಿಮಾ ಶೈಲಿ: "ಅನಂತ್ ನಾಗ್ ಅವರ ಹಳೆಯ ಸಿನಿಮಾವೊಂದರಲ್ಲೂ ಇದೇ ರೀತಿಯ ಕಥೆಯಿತ್ತು" ಎಂದು ಕೆಲವು ಹಿರಿಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಸಿನಿಮಾ ಹೋಲಿಕೆಯ ಹೊರತಾಗಿ, ವೀಕ್ಷಕರು ಕಥೆಯ ಬಗ್ಗೆ ತಮಾಷೆಯ ಮತ್ತು ಗಂಭೀರವಾದ ಕಾಮೆಂಟ್ಗಳನ್ನು ಮಾಡಿದ್ದಾರೆ..
ಜಯಂತ್ಗೆ ಲೈನ್ ಹಾಕುತ್ತಿದ್ದಾಳೆ ಆ ಹುಡುಗಿ: "ಅಲ್ಲೊಬ್ಬಳು ಹುಡುಗಿ ಜಯಂತ್ಗೆ ಲೈನ್ ಹಾಕುತ್ತಿದ್ದಾಳೆ. ಅವಳಿಗೆ ಗೊತ್ತಿಲ್ಲ ಜಯಂತ್ ಜಾಹ್ನವಿ ಬಿಟ್ಟು ಬೇರೆಯವರನ್ನು ಕಣ್ಣೆತ್ತಿ ನೋಡಲ್ಲ ಅಂತ. ಜಾಸ್ತಿ ಆಟ ಆಡಿದರೆ ಅವಳನ್ನು ಕೆಲಸದಿಂದ ಕಿತ್ತಾಕ್ತಾನೆ ಅಷ್ಟೇ!"
ಸರ್ನೇಮ್ ಚೇಂಜ್: "ಇಷ್ಟು ವರ್ಷ ಇಲ್ಲದ ಸರ್ನೇಮ್ ಈಗ ಸಡನ್ ಆಗಿ 'ಜಾಹ್ನವಿ ಶ್ರೀನಿವಾಸ್' ಅಂತ ಹೇಗೆ ಬಂತು?" ಎಂದು ಕೆಲವರು ಲಾಜಿಕ್ ಹುಡುಕುತ್ತಿದ್ದಾರೆ.
ಜಾನುಗೆ ಸಲಹೆ: "ಜಾನು, ನೀನು ಎಲ್ಲೇ ಹೋದರೂ ಅವನು ಬಿಡಲ್ಲ. ಕೆಲಸ ಬಿಡುವುದಕ್ಕಿಂತ ಕಣ್ಮುಂದೆ ಇದ್ದು ಅವನು ಏನು ಮಾಡುತ್ತಾನೆ ಎಂದು ನೋಡುವುದೇ ಉತ್ತಮ ಅಲ್ವಾ?" ಎಂದು ವೀಕ್ಷಕರು ಸಲಹೆ ನೀಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.