ಎಲಿಮಿನೇಷನ್‌ನಿಂದ ಪಾರಾದ ಧನರಾಜ್; ಮೋಸ ಮಾಡಿದ್ರೂ ಬಿಗ್ ಬಾಸ್ ಸುಮ್ಮನಿರುವುದು ಯಾಕೆ?

Published : Jan 15, 2025, 02:59 PM ISTUpdated : Jan 15, 2025, 03:16 PM IST
ಎಲಿಮಿನೇಷನ್‌ನಿಂದ ಪಾರಾದ ಧನರಾಜ್; ಮೋಸ ಮಾಡಿದ್ರೂ ಬಿಗ್ ಬಾಸ್ ಸುಮ್ಮನಿರುವುದು ಯಾಕೆ?

ಸಾರಾಂಶ

ಬಿಗ್ ಬಾಸ್ ೧೧ರಲ್ಲಿ ಫಿನಾಲೆಗೆ ಹತ್ತಿರದಲ್ಲಿದ್ದು, ಧನರಾಜ್ ಮಿಡ್ ವೀಕ್ ಎಲಿಮಿನೇಷನ್‌ನಿಂದ ಪಾರಾಗಿದ್ದಾರೆ. ಟಾಸ್ಕ್‌ನಲ್ಲಿ ಸ್ಮಾರ್ಟ್ ಆಟದ ಮೂಲಕ ಗೆದ್ದರೂ, ಮೋಸದ ಆರೋಪ ಎದುರಿಸುತ್ತಿದ್ದಾರೆ. ಬೋರ್ಡ್‌ನ ಒಂದು ಭಾಗ ಮಾತ್ರ ಕಾಣುತ್ತಿತ್ತು ಎಂಬ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ತ್ರಿವಿಕ್ರಮ್‌ಗೆ ಏನೂ ಕಾಣಿಸಲಿಲ್ಲ ಎಂದಿದ್ದು, ಬಿಗ್ ಬಾಸ್‌ನ ನಿಷ್ಪಕ್ಷಪಾತದ ಬಗ್ಗೆಯೂ ಪ್ರಶ್ನೆಗಳು எழுந்துವೆ.

ಬಿಗ್ ಬಾಸ್ ಸೀಸನ್ 11 ಮುಗಿಯುವ ಹಂತಕ್ಕೆ ಬಂದಿದೆ. ಟಿಕೆಟ್‌ ಟು ಫಿನಾಲೆ ಮುಗಿಸಿಕೊಂಡ ಸ್ಪರ್ಧಿಗಳು ಈಗ ಮಿಡ್ ವೀಕ್ ಎಲಿಮಿನೇಷನ್ ಹಾಗೂ ವೀಕೆಂಡ್‌ ಎಲಿಮಿನೇಷನ್‌ನಿಂದ ಪಾರು ಮಾಡಿಕೊಳ್ಳಲು ಸರ್ಕಸ್ ಮಾಡುತ್ತಿದ್ದಾರೆ. ಟಿಕೆಟ್ ಟು ಫಿನಾಲೆಯನ್ನು ಹಳ್ಳಿ ಹೈದಾ ಹನುಮಂತು ಬಾಚಿಕೊಂಡಿದ್ದಾನೆ ಈಗ ಮಿಡ್ ವೀಕ್‌ ಎಲಿಮಿನೇಷನ್‌ನಿಂದ ಸೇಫ್‌ ಆಗುವ ಟಿಕೆಟ್ ಧನರಾಜ್ ಗಿಟ್ಟಿಸಿಕೊಂಡಿದ್ದಾರೆ. ಧನರಾಜ್ ಗೆದ್ದಿರುವುದು ಎಲ್ಲರಿಗೂ ಖುಷಿನೇ ಆಗಿರಬಹುದು ಆದರೆ ಇಲ್ಲಿ ಮೋಸ ಮಾಡಿದ್ದಾರೆ ಎಂಬ ಬೇಸರ ವೀಕ್ಷಕರಿಗೆ ಇದೆ. 

ಹಂತ ಹಂತವಾಗಿ ನಡೆಯುವ ಗೇಮ್‌ಗೆ ಪಾಯಿಂಟ್ ನೀಡಲಾಗುತ್ತದೆ. ಕೊನೆ ಹಂತದಲ್ಲಿ ನಡೆದ ಟಾಸ್ಕ್‌ನಲ್ಲಿ ತ್ರಿವಿಕ್ರಮ್, ರಜತ್ ಮತ್ತು ಮೋಕ್ಷಿತಾಗೆ ಧನರಾಜ್ ಸವಾಲ್ ಹಾಕುತ್ತಾರೆ. ಆಶ್ಚರ್ಯ ಏನೆಂದರೆ ಧನರಾಜ್ ಸ್ಮಾರ್ಟ್‌ನೆಸ್‌ನಿಂದ ಕೀ ಪಡೆದು ಪಸಲ್‌ ಬಾಕ್ಸ್ ಓಪನ್ ಮಾಡಿ ಜೋಡಿಸುತ್ತಾರೆ. ಪಟಾ ಪಟಾ ಅಂತ ಜೋಡಿಸಿದ ಮೇಲೆ ಹನುಮಂತು ಚೆಕ್ ಮಾಡಿದ ಮೇಲೆ ಬೆಲ್ ಹೊಡೆಯುತ್ತಾರೆ. ಅಲ್ಲಿದೆ ಧನರಾಜ್‌ ಗೆದ್ದಿರುವ ಪಾಯಿಂಟ್ ಹಾಗೂ ಮತ್ತೊಬ್ಬರ ಪಾಯಿಂಟ್ ಕತ್ತಿಕೊಳ್ಳುವ ಅವಕಾಶ ಪಡೆಯುತ್ತಾರೆ. ಗೆದ್ದಿರುವ ಪಾಯಿಂಟ್ ಜೊತೆ ಭವ್ಯಾ ಗೌಡ ಪಾಯಿಂಟ್ ಹೊಡೆದು ಅತಿ ಹೆಚ್ಚು ಅಂಕದಿಂದ ಈ ವಾರ ನಾಮಿನೇಷನ್‌ನಿಂದ ಸೇಫ್ ಆಗುತ್ತಾರೆ. ಧನರಾಜ್‌ ಗೆದ್ದಿದ್ದು ಎಲ್ಲರಿಗೂ ಖುಷಿ ಆಗುತ್ತದೆ ಮೋಸ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬರುತ್ತಿದೆ. 

ಹಸಿರು ಸೀರೆಯಲ್ಲಿ ಮಿಂಚಿದ ಶ್ವೇತಾ ಚಂಗಪ್ಪ; ಕತ್ತಲ್ಲಿರೋ ಚಿನ್ನದ ಮೇಲೆ ನೆಟ್ಟಿಗರ ಕಣ್ಣು

ಧನರಾಜ್‌ ಆಟ ಮುಗಿಸಿದ ಮೇಲೆ ಕುಳಿತುಕೊಳ್ಳಲು ಹೋಗುತ್ತಾರೆ ಅಲ್ಲಿ ಉಗ್ರಂ ಮಂಜು ಗೇಮ್ ಹೇಗಿತ್ತು ಎಂದು ಪ್ರಶ್ನೆ ಮಾಡುತ್ತಾರೆ. ಅಯ್ಯೋ ತುಂಬಾ ಸುಲಭವಾಗಿತ್ತು ಎನ್ನುತ್ತಾರೆ. ಬೋರ್ಡ್ ಕಾಣಿಸುತ್ತಿತ್ತಾ ಎಂದು ಕೇಳುತ್ತಾರೆ ಹೌದು ಸ್ವಲ್ಪ ಸ್ವಲ್ಪ ಮೇಲೆ ಭಾಗ ಮಾತ್ರ ಕಾಣಿಸುತ್ತಿತ್ತು ಎನ್ನುತ್ತಾರೆ. ಅಲ್ಲಿಗೆ ಧನರಾಜ್ ಸೇಫ್ ಗೇಮ್ ಆಡಿರುವುದು ಬೆಳಕಿಗೆ ಬರುತ್ತದೆ. ಧನರಾಜ್ ಈಗ ಗ್ರೇ ಏರಿಯಾ ಹುಡುಕಿಕೊಂಡಿದ್ದಾನೆ ಎಂದು ಮಂಜು ಕಾಮೆಂಟ್ ಮಾಡುತ್ತಾರೆ. ಧನರಾಜ್ ಆದ್ಮೇಲೆ ತ್ರಿವಿಕ್ರಮ್‌ನ ಕೇಳುತ್ತಾರೆ ನನಗೆ ಏನೂ ಕಾಣಿಸಿಲ್ಲ ನಾನು ಎಲ್ಲಿನೂ ನೋಡಿಲ್ಲ ಎಂದು ತ್ರಿವಿಕ್ರಮ್ ಹೇಳುತ್ತಾರೆ. ಧನರಾಜ್ ಮುಖ್ಯವಾದ ಟಾಸ್ಕ್‌ನಲ್ಲಿ ಮಾಡಿದ್ದು ಮೋಸ ಅಂದ್ಮೇಲೆ ಯಾಕೆ ಬಿಗ್ ಬಾಸ್ ಸುಮ್ಮನಿದ್ದರು? ಹುನುಮಂತು ಪರ ನಡೆಯುತ್ತಿದೆ ಎನ್ನುತ್ತಿದ್ದವರು ಈಗ ಧನರಾಜ್‌ ಪರವೂ ನಡೆಯುತ್ತಿದೆ ಎನ್ನುಲು ಶುರು ಮಾಡಿದ್ದಾರೆ. 

ಸಿಂಪಲ್ಲಾಗಿ ಸೀರೆಯಲ್ಲಿ ಮಿಂಚಿದ ಲೀಲಾ; ಕೊರಳಲ್ಲಿ ಸರವಿಲ್ಲ ಎಂದು ಫ್ಯಾನ್ಸ್ ಬೇಸರ

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?