ಲಾಕ್‌ಡೌನ್ ನಡುವೆ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿ ಸಂತೋಷ್

By Suvarna NewsFirst Published Apr 13, 2020, 12:28 PM IST
Highlights

ಕೊರೋನಾ ವೈರಸ್‌ ಲಾಕ್‌ಡೌನ್‌ ನಡುವೆಯೂ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂತೋಷ್....

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ  ಕಾಮಿಡಿ ರಿಯಾಲಿಟಿ ಶೋ ಸೀಸನ್ 3ರ ರನ್ನರ್‌ ಹಾಸನದ ಸಂತೋಷ್‌ ಏಪ್ರಿಲ್‌ 10ರಂದು ತಮ್ಮ ಹುಟ್ಟೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸಂತೋಷ್‌ ಅವರ ಮದುವೆ ಲಾಕ್‌ಡೌನ್‌ ಮುನ್ನವೇ ನಿಶ್ಚಯವಾಗಿದ್ದು ಪೊಲೀಸರ ಅನುಮತಿ ಪಡೆದುಕೊಂಡು ಮದುವೆಯಾಗಿದ್ದಾರೆ. ಈಗಾಗಲೇ  10 ಚಿತ್ರಗಳಲ್ಲಿ ಅಭಿನಯಿಸಿ ಅನೇಕ ಬಾರಿ ಕಿರುತೆಯಲ್ಲಿ ಕಾಣಿಸಿಕೊಂಡಿರುವ ಸಂತೋಷ್‌ ಕುಟುಂಬಸ್ಥರು, ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಮದುವೆಯಾಗುವ ತೀರ್ಮಾನ  ಮಾಡಿದ್ದರು ಆದರೆ ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಸರಳವಾಗಿ ಮದುವೆಯಾಗಿದ್ದಾರೆ.  

ನರಸೀಪುರ ತಾಲ್ಲೂಕಿನ ಉದ್ದೂರು ಹೊಸಹಳ್ಳಿಯ ಸಂತೋಷ್‌ ಮದುವೆಯಲ್ಲಿ ಬಹಳ ಕಡಿಮೆ ಜನರು ಪಾಲ್ಗೊಂಡಿದ್ದರು ಅವರಲ್ಲಿ ಕಾಮಿಡಿ ಕಿಲಾಡಿಗಳು ಸೀಸನ್‌-2ರ ಮಡೇನೂರು ಮನು ಕೂಡ ಮದುವೆಯಲ್ಲಿ ಭಾಗಿಯಾಗಿದ್ದರು.  

ಕೆಲ ದಿನಗಳ ಹಿಂದೆ ಹೊಂಬಣ್ಣ ಚಿತ್ರದ ನಟ ಧನುಗೌಡ ಹಾಗೂ ನೆನಪುಗಳು ಚಿತ್ರದ ನಟಿ ರಾಣಿ ಏಪ್ರಿಲ್‌ 10ರಂದು ಶಿವಮೊಗ್ಗದಲ್ಲಿ ಆತ್ಮೀಯರೊಂದಿಗೆ ಸಿಂಪಲ್ ಆಗಿ ಮದುವೆಯಾಗಿದ್ದಾರೆ.

ಹಳ್ಳಿಯಲ್ಲಿ ದೇಸೀ ಶೈಲೀಲಿ ರಾಗಿ ಮುದ್ದೆ ಕೇಕ್ ಕತ್ತರಿಸಿದ ಶಿವರಾಜ್ ಕೆ.ಆರ್ ಪೇಟೆ!

click me!