ಬಿಗ್‌ಬಾಸ್‌ಗೆ ದೊಡ್ಡ ಬೇಡಿಕೆ; ಸಂಬರಗಿ ಜೈಲಿಗೆ ಹಾಕಿ, ಕಾಫಿ ಕಳಿಸಿ!

Suvarna News   | Asianet News
Published : Mar 04, 2021, 12:12 PM ISTUpdated : Mar 04, 2021, 12:17 PM IST
ಬಿಗ್‌ಬಾಸ್‌ಗೆ ದೊಡ್ಡ ಬೇಡಿಕೆ; ಸಂಬರಗಿ ಜೈಲಿಗೆ ಹಾಕಿ, ಕಾಫಿ ಕಳಿಸಿ!

ಸಾರಾಂಶ

ಬೇಕೇ ಬೇಕು, ಕಾಫಿ ಬೇಕು ಎಂದು ಡಿಮ್ಯಾಂಡ್ ಮಾಡುತ್ತಿರುವ ಸ್ಪರ್ಧಿಗಳು, ಪ್ರಶಾಂತ್ ಸಂಬರಗಿಯನ್ನು ಜೈಲಿಗೆ ಕಳುಹಿಸಲು ರೆಡಿಯಾಗಿದ್ದಾರೆ......!

ಬಿಗ್‌ಬಾಸ್‌ ಮನೆಯಲ್ಲಿ ಕಾಫಿ ಹಾಗೂ ಟೀ ಅಡಿಕ್ಟ್‌ಗಳು ತುಂಬಾನೇ ಇದ್ದಾರೆ. ಬೆಳಗಾದರೆ ಕಾಫಿ, ಮಲಗುವ ಮುನ್ನ ಟೀ ಹೀಗೆ ಆಗಾಗ ಕುಡಿಯಲು ಏನಾದರೂ ಬೇಕೇ ಬೇಕು ಇವರಿಗೆ. ಕಾಫಿ ಪುಡಿ ಖಾಲಿ ಆದರೆ ಏನು ಮಾಡಬೇಕು? ಇಲ್ಲಿ ನೋಡಿ ರಾಜೀವ್ ಹಾಗೂ ನಿಧಿ ಸುಬ್ಬಯ್ಯ ಮಾಡಿದ ಉಪಾಯ.....

ಟಿಕ್‌ಟಾಕ್‌ ಧನುಶ್ರೀ ಸ್ನಾನಕ್ಕೂ ಮೇಕಪ್ ಮಾಡ್ಕೊಂಡೇ ಹೋಗೋದಾ? 

ನಾಮಿನೇಶನ್‌ನಿಂದ ಇಮ್ಯೂನಿಟಿ ಪಡೆಯಲು ನಿಧಿ ಸುಬ್ಬಯ್ಯ ಹಾಗೂ ದಿವ್ಯಾ ಈಜು ಟಾಸ್ಕ್ ಮಾಡಬೇಕಾಗಿತ್ತು. ಈಜುಕೊಳದಲ್ಲಿ 24 ಬಾರಿ ಬಿದ್ದು ಎದ್ದ ನಂತರವೂ ನಿಧಿ ನಾಮಿನೇಶನ್‌ನಿಂದ ಇಮ್ಯೂನಿಟಿ ಪಡೆಯಲಿಲ್ಲ. ಆದರೆ ಈ ಟಾಸ್ಕ್‌ನಿಂದ ನಿಧಿ ಆರೋಗ್ಯದಲ್ಲಿ ಏರುಪೇರಾಗಿದೆ. ನಿಧಿಗೆ ಯಾಷ ಔಷಧಿಯೂ ಬೇಡ, ಕಾಫಿ ಕೊಟ್ಟರೆ ಸಾಕಂತ. ಹೀಗಂತ ಅವರೇ ಕ್ರಿಕೆಟರ್ ರಾಜೀವ್‌ ಜೊತೆ ಕ್ಯಾಮೆರಾ ಎದುರು ಮಾತನಾಡಿದ್ದಾರೆ. 

'ಬಿಗ್‌ ಬಾಸ್‌ ದಯವಿಟ್ಟು ನಮಗೆ ಕಾಫಿ ಪುಡಿ ಕೊಡಿ. ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಿದ್ದು, ಎದ್ದು ತಲೆ ನೋವು. ಆಮೇಲೆ ನೆಗಡಿಯಾಗಿದೆ. ಕಾಫಿ ಕುಡಿದರೆ ಮಾತ್ರ ನಾನು ಆರಾಂ ಆಗೋದು. ರಾಜೀವ್ ಅವರಿಗೂ ಕಾಫಿ ಬೇಕೇ ಬೇಕು. ನೀವು ಮಾತನಾಡಿ ರಾಜೀವ್,' ಎಂದು ನಿಧಿ ಹೇಳುತ್ತಾರೆ. ತಕ್ಷಣವೇ ರಾಜೀವ್‌ 'ಬಿಗ್ ಬಾಸ್‌ ನನ್ನ ಧ್ವನಿ ಹಾಳಾಗಿದೆ. ದಯವಿಟ್ಟು ಕಾಫಿ ಕೊಡಿ' ಎಂದರು. ಆದರೆ ರಾಜೀವ್‌ ಕೊಟ್ಟ ಕಾರಣ ಸಾಲದು ಎಂದು ನಿಧಿ ಇನ್ನೂ ಕಾರಣ ಕೊಡಿ ಎಂಬುದಾಗಿ ಒತ್ತಾಯ ಮಾಡಿದರು. ರಾಜೀವ್ 'ಧ್ವನಿ ಸರಿ ಹೋಗಿಲ್ಲ ಅಂದ್ರೆ ಟಾಸ್ಕ್ ಮಾಡುವಾಗ ನನಗೆ ಕಾಮೆಂಟ್ರಿ ಮಾಡೋಕೆ ಕಷ್ಟ ಆಗುತ್ತೆ. ಪ್ಲೀಸ್,' ಎನ್ನುತ್ತಾರೆ. ಈ ಕಾರಣಗಳನ್ನು ಬಿಗ್ ಬಾಸ್‌ ಕೇಳುತ್ತಾರೋ ಇಲ್ವೋ ಅಂತ ನಿಧಿ 'ಬಿಗ್‌ಬಾಸ್‌ ಬೇಕಿದ್ರೆ ನೀವು ಪ್ರಶಾಂತ್ ಅವರನ್ನು ಜೈಲು ಒಳಗೆ ಕಳುಹಿಸಿ. ಆಮೇಲೆ ನಮಗೆ ಕೊಡಿ. ಅವರು ಅಲ್ಲೇ ಇರಲಿ,' ಎಂದು ಹೇಳುತ್ತಾರೆ.

BBK8: ಮೊದಲ ದಿನವೇ ದಿವ್ಯಾ ಸುರೇಶ್ ಪ್ರೀತಿಯ ಬಲೆಗೆ ಬಿದ್ದ ಲ್ಯಾಗ್ ಮಂಜು! 

ಹೌದು! ಬಿಬಿ ಮನೆಯಲ್ಲಿ ಅತಿ ಹೆಚ್ಚು ಕಾಫಿ ಕುಡಿಯುವುದು ಪ್ರಶಾಂತ್. ಪದೇ ಪದೇ ಅಡಿಗೆ ಮನೆಯೊಳಗೆ ಹೋಗಿ ಕಾಫಿ ಮಾಡಿಕೊಳ್ಳುತ್ತಾರೆ. ಇವರಿಂದಲೇ ಪುಡಿ ಕಡಿಮೆ ಅಗಿರುವುದು, ಕೆಲವರು ದಿನಕ್ಕೆ ಒಂದು ಸಲ ಕುಡಿಯುವುದು ಅಷ್ಟೆ. ಈಗ ಪುಡಿನೇ ಕಾಲಿ ಆಗಿದೆ ಎಂದು ಮನೆ ಮಂದಿ ಪ್ರಶಾಂತ್ ವಿರುದ್ಧ ಒಗ್ಗಟ್ಟಾಗಿ ಆರೋಪ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?