ಬಿಗ್ ಬಾಸ್ ವಿನ್ನರ್ ಮೇಲೆ ಪಬ್‌ನಲ್ಲಿ ಮಾರಣಾಂತಿಕ ಹಲ್ಲೆ!

Published : Mar 06, 2020, 11:00 AM ISTUpdated : Mar 06, 2020, 11:43 AM IST
ಬಿಗ್ ಬಾಸ್ ವಿನ್ನರ್ ಮೇಲೆ ಪಬ್‌ನಲ್ಲಿ ಮಾರಣಾಂತಿಕ ಹಲ್ಲೆ!

ಸಾರಾಂಶ

ಬಿಗ್‌ಬಾಸ್ ವಿನ್ನರ್ ಮೇಲೆ ಮಾರಣಾಂತಿಕ ಹಲ್ಲೆ| ಟ್ವಿಟರ್ ನಲ್ಲಿ ವೈರಲ್ ಆಯ್ತು ದಾಳಿಯ ವಿಡಿಯೋ| ದಾಳಿ ಬೆನ್ನಲ್ಲೇ ವಿಜೇತನ ಹೇಳಿಕೆ

ಹೈದರಾಬಾದ್[ಮಾ.06]: ಬಿಗ್ ಬಾಸ್ ವಿನ್ನರ್ ಒಬ್ಬರ ಮೇಲೆ ಪಬ್ ನಲ್ಲಿ ನಡೆದ ದಾಳಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಹೌದು ತೆಲುಗು ಬಿಗ್ ಬಾಸ್ ಸೀಜನ್ 3ರ ವಿಜೇತರಾಗಿದ್ದ, ಗಾಯಕ ರಾಹುಲ್ ಸಿಪ್ಲಿಗುಂಜ್ ಮೇಲೆ ಈ ದಾಳಿ ನಡೆದಿದೆ. ಈ ದಾಳಿ ನಡೆದಿದ್ದೇಕೆ? ಮುಂದಿದೆ ವಿವರ

ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ವಯ ಬುಧವಾರದಂದು ರಾಹುಲ್ ಪಬ್ ಒಂದಕ್ಕೆ ತೆರಳಿದ್ದು, ಈ ವೇಳೆ ಕೆಲ ಜನರಿದ್ದ ಗುಂಪೊಂದು ಅವರನ್ನು ಸುತ್ತುವರೆದು ದಾಳಿ ನಡೆಸಿದೆ. ಈ ವೇಳೆ ವ್ಯಕ್ತಿಯೊಬ್ಬ ರಾಹುಲ್ ತಲೆಗೆ ಬಾಟಲಿಯಿಂದ ಹೊಡೆದಿದ್ದಾನೆ ಎನ್ನಲಾಗಿದೆ. ಈ ಘಟನೆಯ ವಿಡಿಯೋ ಸದ್ಯ ಟ್ವಿಟರ್ ನಲ್ಲಿ ಹರಿದಾಡುತ್ತಿದ್ದು, ಭಾರೀ ವೈರಲ್ ಆಗಿದೆ.

ಬಿಗ್‌ಬಾಸ್‌ ಪ್ರಥಮ್‌ 99 ಲಕ್ಷ​ಕ್ಕೊ​ಬ್ಬ, 'ನಟ ಭಯಂಕರ'ನ ಮತ್ತೊಂದು ಸಾಹಸ!

ಇನ್ನು ದಾಳಿಯ ವೇಳೆ ರಾಹುಲ್ ಜೊತೆ ಇದ್ದ ಗೆಳೆಯನಿಗೂ ಈ ದುಷ್ಕರ್ಮಿಗಳು ಥಳಿಸಿದ್ದಾರೆನ್ನಲಾಗಿದೆ. ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ರಾಹುಲ್ 'ಕೆಲ ಜನರು ಜಗಳವಾಡಲಾರಂಭಿಸಿದ್ದು, ನೋಡ ನೋಡುತ್ತಿದ್ದಂತೆಯೇ ಹಲ್ಲೆ ನಡೆಸಲಾರಂಭಿಸಿದರು. ನಾನು ಅವರನ್ನು ವಿರೋಧಿಸಿದಾಗ ಇದು ಅತಿರೇಕಕ್ಕೆ ಹೋಯ್ತು. ಈ ದಾಳಿಯಲ್ಲಿ ನನಗೆ ಗಾಯ ಕೂಡಾ ಆಗಿದೆ' ಎಂದಿದ್ದಾರೆ. ಹಲ್ಲೆ ನಡೆಯುತ್ತಿದ್ದಾಗ ಅಲ್ಲಿದ್ದ ಜನರು ಸೆಕ್ಯೂರಿಟಿಗೆ ಈ ಮಾಹಿತಿ ನೀಡಿ, ತಡೆಯಲು ಯತ್ನಿಸಿದ್ದಾರೆ. 

ಸದ್ಯ ಗಚಿಬೋವಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಇನ್ನು ಗಾಯಕ  ರಾಹುಲ್ ಸಿಪ್ಲಿಗುಂಜ್ ತೆಲುಗು ಬಿಗ್ ಬಾಸ್ ಸೀಜನ್ 3ರ ವಿಜೇತರಾಗಿದ್ದು, 50 ಲಕ್ಷ ರೂ. ಗೆದ್ದಿದ್ದರು. 2009ರಲ್ಲಿ ತಮ್ಮ ಹಾಡಿನ ಮೂಲಕ ಫೇಮಸ್ ಅಗಿದ್ದ ರಾಹುಲ್, ಸಿನಿಮಾಗಳಲ್ಲೂ ನಟಿಸಿದ್ದಾರೆ.

ಮದುವೆ ಆಯ್ತು, ಹನಿಮೂನ್‌ಗೆ ಹೊರಟಾಯ್ತು; ನಿವೇದಿತಾ- ಚಂದನ್‌ ನ್ಯೂ ಲೈಫ್‌!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Love​ ಹೇಗೆಲ್ಲಾ ಶುರುವಾಗತ್ತೆ ಗೊತ್ತಾ? Bigg Boss ರಕ್ಷಿತಾ ಶೆಟ್ಟಿ ಬಾಯಲ್ಲೇ ಕೇಳಿ ವೆರೈಟಿ ವೆರೈಟಿ ವಿಧಾನ
Karna Serial ಭರ್ಜರಿ ಟ್ವಿಸ್ಟ್​! ಬಾತ್​ರೂಮ್​ನಲ್ಲಿ ಕರ್ಣ- ನಿಧಿ ಸರಸ: ಎಣ್ಣೆ ಸ್ನಾನ ಮಾಡಿಸಲು ಬಂದ ನಿತ್ಯಾ