
ಬೆಂಗಳೂರು(ಆ. 08) ಬಿಗ್ ಬಾಸ್ ಮನೆ ಫಿನಾಲೆ ಹಂತದಲ್ಲಿ ಇದೆ. ಶನಿವಾರದ ಎಪಿಸೋಡ್ ನಲ್ಲಿ ಪ್ರಶಾಂತ್ ಸಂಬರಗಿ ಮತ್ತು ವೈಷ್ಣವಿ ಗೌಡ ಹೊರಗೆ ಬಂದಿದ್ದಾರೆ. ಭಾನುವಾರ ಮೊದಲೆಯವರಾಗಿ ದಿವ್ಯಾ ಯು ಹೊರಗೆ ಬಂದಿದ್ದಾರೆ.
ಕಿರುತೆರೆ ಕಲಾವಿದೆ ದಿವ್ಯಾ ಯು ಮೊದಲಿನಿಂದಲೂ ಚುರುಕಿನ ಆಟ ಆಡಿಕೊಂಡು ಬಂದಿದ್ದರು. ಅರವಿಂದ್ ಜತೆ ತುಂಬಾ ಕ್ಲೋಸ್ ಆಗಿ ಇದ್ದರು. ಉಳಿದ ಸ್ಪರ್ಧಿಗಳ ಪ್ರಕಾರ ಅರವಿಂದ್ ಜತೆ ಇದ್ದಿದ್ದೆ ಅವರನ್ನು ಫಿನಾಲೆವರೆಗೆ ಕರೆದುಕೊಂಡು ಬಂದಿತು.
ಮಂಜು ಪಾವಗಡ ಬಿಗ್ ಬಾಸ್ ವಿನ್ನರ್..?
ಸುದೀಪ್ ಯೆಸ್ ಆರ್ ನೋ ಪ್ರಶ್ನೆಗಳನ್ನು ಕೇಳಿದರು. ಅಲ್ಲಲ್ಲಿ ಕಾಲೆಳೆದರು. ದಿವ್ಯಾ ಯುಗಿಂತ ವೈಷ್ಣವಿ ಒಂದು ಹೆಜ್ಜೆ ಮುಂದೆ ಇದ್ದರು ಎನ್ನುವುದು ಮಮನೆಯವರ ಅಭಿಪ್ರಾಯ. ಅರವಿಂದ್ ಮತ್ತು ಮಂಜು ಉಳಿದುಕೊಂಡಿದ್ದಾರೆ. ವೇದಿಕೆಯ ಮೇಲೆ ಕಿಚ್ಚ ಸುದೀಪ್ ಯಾರ ಕೈ ಮೇಲಕ್ಕೆ ಹಿಡಿದು ಎತ್ತಲಿದ್ದಾರೆ ಎನ್ನುವ ಕುತೂಹಲ ಮನೆ ಮಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.