ಫೈನಲ್‌ಗೂ ಮುನ್ನ ಸೋಲೊಪ್ಪಿಕೊಂಡ್ರಾ ಗಿಲ್ಲಿ ನಟ? ಬಿಗ್ ಬಾಸ್ ಕ್ಲೈಮ್ಯಾಕ್ಸ್​ನಲ್ಲಿ ಅನಿರೀಕ್ಷಿತ ಟ್ವಿಸ್ಟ್..!

Published : Jan 13, 2026, 01:38 PM IST
Gilli Nata

ಸಾರಾಂಶ

ಬಿಗ್ ಬಾಸ್ ಕನ್ನಡ ಸೀಸನ್ 12ರ ಪ್ರಬಲ ಸ್ಪರ್ಧಿ ಎನಿಸಿದ್ದ ಕಾಮಿಡಿ ಕಿಲಾಡಿ ಗಿಲ್ಲಿ, ಫಿನಾಲೆ ಹತ್ತಿರವಾಗುತ್ತಿದ್ದಂತೆ ಡಲ್ ಆಗಿದ್ದಾರೆ. ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರ ಮುಂದೆ ಗಿಲ್ಲಿ ನೀಡಿದ ಹೇಳಿಕೆಗಳು, ಅವರು ಗೆಲುವಿನ ಆಸೆಯನ್ನೇ ಬಿಟ್ಟುಬಿಟ್ಟರಾ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾದಾಗಿಂದಲೂ ವೀಕ್ಷಕರಿಗೆ ಸಖತ್ ಮನರಂಜನೆ ಕೊಟ್ಟುಕೊಂಡು ಬಂದಿದ್ದು ಕಾಮಿಡಿ ಕಿಲಾಡಿ ಗಿಲ್ಲಿ. ಈ ಸೀಸನ್​ನ ವಿನ್ನರ್ ಗಿಲ್ಲಿನೇ ಆಗ್ತಾನೇ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಅದ್ಯಾಕೊ ಕೊನೆ ಕೊನೆಗೆ ಬರ್ತಾ ಗಿಲ್ಲಿ ಕೊಂಚ ಡಲ್ ಆಗಿದ್ದಾನೆ. ಅಷ್ಟೇ ಅಲ್ಲ ಖುದ್ದು ಕಿಚ್ಚನೆದ್ರು ಗಿಲ್ಲಿ ಸೋಲೊಪ್ಪಿಕೊಂಡುಬಿಟ್ನಾ? ಹೀಗೊಂದು ಅನುಮಾನ ಪ್ರೇಕ್ಷಕರನ್ನು ಕಾಡಲಾರಂಭಿಸಿದೆ ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.

ಬಿಗ್ ಬಾಸ್ ಕ್ಲೈಮ್ಯಾಕ್ಸ್‌ನಲ್ಲಿ ಅನಿರೀಕ್ಷಿತ ಟ್ವಿಸ್ಟ್!

ಯೆಸ್ ಈ ಸಾರಿ ಬಿಗ್ ಬಾಸ್ ಕನ್ನಡದಲ್ಲಿ ಆರಂಭದಿಂದಲೂ ಎಲ್ಲರ ಗಮನ ಸೆಳೆದವನು, ಹಳ್ಳಿಹೈದ ಕಾಮಿಡಿ ಕಿಲಾಡಿ ಗಿಲ್ಲಿ ನಟ. ತನ್ನ ಚಿನಕುರಳಿ ಮಾತಿನಿಂದ, ನಗೆಚಟಾಕಿಯಿಂದ, ಲವ್ ಟ್ರ್ಯಾಕ್​ನಿಂದ , ಕಿತಾಪತಿಗಳಿಂದ ಸಖತ್ ಕಂಟೆಂಟ್ ಕೊಟ್ಟುಕೊಂಡು ಬಂದಿದ್ದ ಗಿಲ್ಲಿ. ಗಿಲ್ಲಿಯ ಆಟ ನೋಡಿದವರು ಈತನೇ ಈ ಸೀಸನ್​ ವಿನ್ನರ್ ಅಂತ ತೀರ್ಮಾನ ಮಾಡಿಬಿಟ್ಟಿದ್ರು. ಆದ್ರೆ ಕೊನೆ ಕೊನೆಯ ವಾರಗಳಲ್ಲಿ ಅದ್ಯಾಕೋ ಗಿಲ್ಲಿ ಡಲ್ ಆಗಿದ್ದು ಸುಳ್ಳಲ್ಲ. ಕಳೆದ ವಾರವಂತೂ ಮನೆಮಂದಿ ಗಿಲ್ಲಿಯನ್ನ ಮೂಲೆಯಲ್ಲಿ ಕೂರುವಂತೆ ಮಾಡಿಬಿಟ್ಟಿದ್ರು.

ಅಡ್ವಾನ್ಸ್ ಆಗಿ ವಿದಾಯ ಭಾಷಣ ಮಾಡಿದ ಗಿಲ್ಲಿ?

ಯೆಸ್ ಕಳೆದ ವಾರದ ವೀಕೆಂಡ್​​ ಪಂಚಾಯತಿಯಲ್ಲಿ ಸುದೀಪ್ ಗಿಲ್ಲಿ ಡಲ್ ಆಗಿದ್ದನ್ನ ಗಮನಿಸಿದ್ರು. ಗಿಲ್ಲಿ ಎನರ್ಜಿ ಎಲ್ಲಿ ಹೋಯ್ತು ಅಂತ ಪ್ರಶ್ನೆ ಮಾಡಿದ್ರು. ಜೊತೆಗೆ ಯಾರ್ಯಾರು ಎವಿಕ್ಟ್ ಆದ್ರೆ ವೇದಿಕೆ ಮೇಲೆ ಏನ್ ಹೇಳ್ತಿರಿ ಅಂತ ಕೇಳಿದ್ರು. ತನ್ನ ಸರದಿ ಬಂದಾಗ ಗಿಲ್ಲಿ ಮೊದಲೇ ಕಂಠಪಾಠ ಮಾಡಿದಂತೆ ವಿದಾಯ ಭಾಷಣ ಮಾಡಿದ್ದಾನೆ.

ಸೋತಿರಬಹುದು ಆದ್ರೆ ಸತ್ತಿಲ್ಲ ಅನ್ನೋ ಕಿಚ್ಚನ ಮಾತನ್ನ ಗಿಲ್ಲಿ ಹೇಳಿ ಭಾಷಣ ಮುಗಿಸಿದ್ರು. ಅದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಕಿಚ್ಚ ನೀವು ಪ್ರಾರಂಭದಲ್ಲಿ ಬಂದಾಗ ಹೀಗೆ ಮಾತನಾಡ್ತಾ ಇರಲಿಲ್ಲವಲ್ಲ ಅಂದ್ರು.

ಹೌದು ಗಿಲ್ಲಿ ಮೊದಲಿದ್ದ ಜೋಶ್​ನಲ್ಲಿ ಇಲ್ಲ ಅನ್ನೋದು ಗೊತ್ತೇ ಇದೆ. ಹಿಂದಿನ ಸೀಸನ್​ಗಳನ್ನ ನೋಡಿಕೊಂಡು ಸಖತ್ ತಯಾರಿ ಮಾಡಿಕೊಂಡು ಬಂದಿದ್ದ ಗಿಲ್ಲಿ ಸಖತ್ ಆಗೇ ಆಟ ಶುರುಮಾಡಿದ್ದ. ಆದ್ರೆ ಕೊನೆ ಹಂತದಲ್ಲಿ ಗಿಲ್ಲಿ ಸುಸ್ತಾದವನಂತೆ ಕಾಣ್ತಾ ಇದ್ದಾನೆ. ಮನೆಮಂದಿ ಬೇರೆ ಗಿಲ್ಲಿಯನ್ನೇ ನೇರ ಟಾರ್ಗೆಟ್ ಮಾಡಿಕೊಂಡು ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ.

ಈ ವಾರಾಂತ್ಯ ಬಿಗ್ ಬಾಸ್ ಫಿನಾಲೆ ನಡೆಯಲಿದ್ದು, ಸದ್ಯ ಮನೆಯಲ್ಲಿ ಉಳಿದಿರೋ 7 ಜನರ ಪೈಕಿ ಒಬ್ರು ಮಿಡ್ ವೀಕ್ ಎಲಿಮಿನೇಟ್ ಆಗ್ತಾ ಇದ್ದಾರೆ. ಧನುಷ್​ ಈಗಾಗ್ಲೇ ಟಾಪ್ 6ಗೆ ಏರಿದ್ದು, ಉಳಿದ 6 ಜನರ ನಡುವೆ ಒಬ್ರು ಬುಧವಾರ ಮನೆಯಿಂದ ಹೊರನಡೆಯಲಿದ್ದಾರೆ. ಕೊನೆಯ ಆರು ಜನರ ನಡುವೆ ವಿನ್ನರ್ ಯಾರು? ಅನ್ನೋದು ಇದೇ ವಾರಾಂತ್ಯ ಗೊತ್ತಾಗಲಿದೆ. ಆರಂಭದಿಂದಲೂ ಗಿಲ್ಲಿಯನ್ನ ಮೆಚ್ಚಿಕೊಂಡು ಬಂದವರು ಈತನೇ ವಿನ್ನರ್ ಆಗಬೇಕು ಅಂತ ಬಯಸ್ತಾ ಇದ್ದಾರೆ. ಆದ್ರೆ ಸೋತರೇನಂತೆ ಸಾಯಲ್ಲವಲ್ಲ ಅಂತ ಹೇಳ್ತಾ ಗಿಲ್ಲಿ ತನ್ನ ಫ್ಯಾನ್ಸ್​ಗೆ ಒಂದು ಸೂಚನೆ ಕೊಟ್ಟಿದ್ದಾನೆ.

ಇಲ್ಲಿದೆ ವಿಡಿಯೋ:

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss Mallamma: ಮೊಮ್ಮಗನ ಜೊತೆ ಮಲ್ಲಮ್ಮನ ಫೋಟೋ ಶೂಟ್, ಮಗುವಿಗೆ ಹೆಸರಿಟ್ಟ ಬಿಗ್ ಬಾಸ್
Bigg Boss 12 ಮನೆಯ ತ್ರಿಕೋನ ಲವ್​ಸ್ಟೋರಿ ಈಗ ಸಿನಿಮಾ! ನಾಯಕ- ನಾಯಕಿ, ನಿರ್ದೇಶಕ ಇವರೇ ನೋಡಿ