ಬಿಗ್​ಬಾಸ್​ನಲ್ಲಿ ವಿನ್ನರ್​ ಕೂಡ ಮೊದ್ಲೇ ಫಿಕ್ಸ್​ ಆಗ್ತಿರ್ತಾರಾ? ಟ್ರೋಫಿ ವಿಜೇತ ಹೇಳಿದ್ದೇನು ಕೇಳಿ...

Published : Jan 29, 2024, 06:05 PM ISTUpdated : Jan 29, 2024, 06:08 PM IST
ಬಿಗ್​ಬಾಸ್​ನಲ್ಲಿ ವಿನ್ನರ್​ ಕೂಡ ಮೊದ್ಲೇ ಫಿಕ್ಸ್​ ಆಗ್ತಿರ್ತಾರಾ? ಟ್ರೋಫಿ ವಿಜೇತ ಹೇಳಿದ್ದೇನು ಕೇಳಿ...

ಸಾರಾಂಶ

ಬಿಗ್​ಬಾಸ್​ನಲ್ಲಿ ನಡೆಯುವುದು ಎಲ್ಲವೂ ಪೂರ್ವ ನಿಗದಿತ ಎಂಬ ಆರೋಪದ ನಡುವೆಯೇ ವಿನ್ನರ್​ ಕೂಡ ಮೊದ್ಲೇ ಫಿಕ್ಸ್​ ಆಗಿರುತ್ತೆ ಎಂಬ ಆರೋಪ ಬಂದಿದೆ. ಟ್ರೋಫಿ ವಿಜೇತ ಹೇಳಿದ್ದೇನು ಕೇಳಿ...  

ಇತರ ಕೆಲವು ರಿಯಾಲಿಟಿ ಷೋಗಳಂತೆಯೇ ಬಿಗ್​ಬಾಸ್​ನಲ್ಲಿ ನಡೆಯುವುದೆಲ್ಲವೂ ಬಹುತೇಕ ಸ್ಕ್ರಿಪ್ಟೆಡ್​ ಅಂದರೆ ಮೊದಲೇ ನಿಗದಿಯಾಗಿರುತ್ತದೆ ಎಂದು ಈ ಹಿಂದೆ ಬಿಗ್​ಬಾಸ್​ ಮನೆಯಿಂದ ಹೊರಬಂದಿರುವ ಸ್ಪರ್ಧಿಗಳು ಹೇಳಿದ್ದುಂಟು. ಪ್ರೀತಿ ಪ್ರೇಮ ಎಲ್ಲಾ ಇಲ್ಲದೇ ಹೋದರೆ ಬಿಗ್​ಬಾಸ್​ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಸಹಜ ಎನ್ನುವ ಕಾರಣಕ್ಕೆ ಲವ್​, ಜಗಳ, ಒಂದಿಷ್ಟು ವಿವಾದ, ಮನೆಯವರನ್ನು ನೆನೆದು ಕಣ್ಣೀರು ಹಾಕುವುದು... ಎಲ್ಲವನ್ನೂ ಮೊದಲೇ ಸ್ಕ್ರಿಪ್ಟ್​ ಮಾಡಿಕೊಡಲಾಗುತ್ತದೆ. ಅಲ್ಲಿರುವ ಸ್ಪರ್ಧಿಗಳು ಏನಿದ್ದರೂ ಸೂತ್ರಧಾರರು ಅಷ್ಟೇ ಎಂಬ ಆರೋಪವೂ ಇದೆ.  ಆರೋಪಗಳು ಏನೇ ಇರಲಿ, ಅಲ್ಲಿ ನಡೆಯುವುದೆಲ್ಲವೂ ನಿಜ ಎಂದುಕೊಂಡು ನೋಡುವ ಪ್ರೇಕ್ಷಕರು ಒಂದೆಡೆಯಾದರೆ,  ಬೈದುಕೊಳ್ಳುತ್ತಲೇ ಇವುಗಳನ್ನು ಎಂಜಾಯ್​ ಮಾಡುವ ದೊಡ್ಡ ವರ್ಗವೇ ಇದೆ.  ಸಾಮಾಜಿಕ ಜಾಲತಾಣದಲ್ಲಿ ಈ ರಿಯಾಲಿಟಿ ಷೋ ಬಗ್ಗೆ ಅಸಹ್ಯ ಎಂದು ಕಮೆಂಟ್​  ಮಾಡುವವರಿಗೇನೂ ಕಮ್ಮಿ ಇಲ್ಲ. ಇದರ ವಿರುದ್ಧ ದಿನವೂ ಸಾಕಷ್ಟು ಪೋಸ್ಟ್​ಗಳು ಶೇರ್​ ಆಗುತ್ತಲೇ ಇರುತ್ತವೆ. ಇದೊಂದು ಅತ್ಯಂತ ಕಳಪೆ ಷೋ ಎಂದು ಬೈಯುವ ದೊಡ್ಡ ವರ್ಗವೇ ಇದೆ. ಆದರೆ ಅಸಲಿಯತ್ತು ಏನೆಂದರೆ ಖುಷಿಪಡುತ್ತಲೋ, ಬೈದುಕೊಳ್ಳುತ್ತಲೋ, ಹಳಿಯುತ್ತಲೋ ಒಟ್ಟಿನಲ್ಲಿ ಈ ಷೋ ನೋಡುವ ಕಾರಣದಿಂದಲೇ ಎಲ್ಲಾ ಭಾಷೆಗಳ ಬಿಗ್​ಬಾಸ್​ ಸದಾ ಟಿಆರ್​ಪಿ ಕಾಯ್ದುಕೊಳ್ಳುತ್ತಲೇ ಇದೆ.

ಇದೀಗ ಹಿಂದಿ ಮತ್ತು ಕನ್ನಡ ಬಿಗ್​ಬಾಸ್​ನ ಗ್ರ್ಯಾಂಡ್​​ ಫಿನಾಲೆ ಮುಗಿದಿದೆ. ಕನ್ನಡದಲ್ಲಿ ಕಾರ್ತಿಕ್​ ವಿನ್ನರ್​ ಆಗಿದ್ದರೆ, ಬಿಗ್​ಬಾಸ್​ ಹಿಂದಿ ಸೀಸನ್​ 17ನಲ್ಲಿ ಮುನಾವರ್​ ಫಾರೂಖಿ ವಿಜೇತ ಎಂದು ಘೋಷಿಸಿಯಾಗಿದೆ. ಇವರಿಬ್ಬರೂ ಒಂದೇ ದಿನ ನಿನ್ನೆ ಟ್ರೋಫಿಯ ಜೊತೆಗೆ ಬೃಹತ್​ ಮೊತ್ತವನ್ನೂ ಪಡೆದುಕೊಂಡರು. ಇದರ ನಡುವೆಯೇ ಹಿಂದಿ ಬಿಗ್​ಬಾಸ್​ನಲ್ಲಿ ಮುನಾವರ್​ ಫಾರೂಖಿ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ಅದೇನೆಂದರೆ ಇವರ ಆಯ್ಕೆ ಕೂಡ ಪೂರ್ವ ನಿಯೋಜಿತವೆಂದು. ಇಂಥವರನ್ನೇ ಆಯ್ಕೆ ಮಾಡಬೇಕು ಎಂದು ಮೊದಲೇ ಬಿಗ್​ಬಾಸ್​ ಷೋನಲ್ಲಿ ನಿಗದಿ ಮಾಡಿರಲಾಗುತ್ತದೆ. ಉಳಿದದ್ದೆಲ್ಲವೂ ಡ್ರಾಮಾ ಅಷ್ಟೇ ಎಂದು ಸೋಷಿಯಲ್​ ಮೀಡಿಯಾದಲ್ಲಿ ಗಂಭೀರ ಆರೋಪ ಮಾಡಲಾಗುತ್ತಿದ್ದು, ಮುನಾವರ್​ ಆಯ್ಕೆ ಕುರಿತು ಭಾರಿ ಅಸಮಾಧಾನ ಉಂಟಾಗಿದೆ.

ಅಂದು ವರುಣ್​, ಇಂದು ರಣಬೀರ್​: ರಶ್ಮಿಕಾಗೂ ಚಪ್ಪಲಿ ತೆಗೆಸಿದ ನಟ- ಸಂಸ್ಕಾರವಂತ ಪುರುಷರು ಎಂದ ಫ್ಯಾನ್ಸ್​!

ಇದಕ್ಕೆ ಈಗ ಖುದ್ದು ಮುನಾವರ್​ ಫಾರೂಖಿ ಉತ್ತರ ನೀಡಿದ್ದಾರೆ. ‘ಇ-ಟೈಮ್ಸ್​’ಗೆ ನೀಡಿದ ಸಂದರ್ಶನದಲ್ಲಿ ಅವರು ಆರೋಪದ ಕುರಿತು ಮಾತನಾಡಿದ್ದಾರೆ. ನನ್ನ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದೆ. ಬಿಗ್​ಬಾಸ್​ನಲ್ಲಿ ವಿನ್ನರ್​ ಮೊದಲೇ ಫಿಕ್ಸ್​ ಮಾಡಲಾಗುತ್ತದೆ ಎಂಬ ಆರೋಪವಿದೆ. ವೀಕ್ಷಕರ ವೋಟಿಂಗ್​ ಬಗ್ಗೆ ಹೇಳುವುದೂ ಸುಳ್ಳು, ಎಲ್ಲವೂ ಫಿಕ್ಸ್​ ಆಗಿರುತ್ತದೆ ಎಂದೂ ಹಲವರು ಆರೋಪ ಮಾಡುತ್ತಾರೆ. ಇಂಥ ಆರೋಪ ಸಾಮಾನ್ಯ ಎಂದಿರುವ ಮುನಾವರ್​,  ‘ನಾನು ಫಿಕ್ಸಿಂಗ್​ ವಿನ್ನರ್​ ಆಗಿದ್ದಿದ್ದರೆ ಫಿನಾಲೆಯವರೆಗೆ ಬಂದು ಕಪ್​ ಗೆಲ್ಲಲು ಇಷ್ಟೆಲ್ಲ ಕಷ್ಟ ಅನುಭವಿಸಬೇಕಿರಲಿಲ್ಲ. ಎಲ್ಲವೂ  ಸುಲಭವಾಗಿ ಸಿಗುತ್ತಿತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ.  ಇಡೀ ಸೀಸನ್​ನಲ್ಲಿ ನಾನು ಕಷ್ಟಪಟ್ಟಿದ್ದೇನೆ. ನನ್ನನ್ನು ಫಿಕ್ಸ್ಡ್​ ವಿನ್ನರ್​ ಎಂದು ಕರೆಯುವವರು ಕುಳಿತುಕೊಂಡು ಪೂರ್ತಿ ಸೀಸನ್​ನ ಸಂಚಿಕೆಗಳನ್ನು ನೋಡಲಿ. ಫಿಕ್ಸಿಂಗ್​ ಅಲ್ಲ ಎಂಬುದು ಆಗ ಗೊತ್ತಾಗುತ್ತದೆ’ ಎಂದು ಮುನಾವರ್ ಸವಾಲು ಹಾಕಿದ್ದಾರೆ. 

​ ಜನರು ನನಗೆ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಜನರ ಪ್ರೀತಿಯನ್ನು ನಾನು ಬದಲಾಯಿಸಲು ಸಾಧ್ಯವಿಲ್ಲ.  ಯಾರಿಗೆ ನಾನು ಫಿಕ್ಸ್ಡ್​ ವಿನ್ನರ್​ ಎಂದು ಅನ್ನಿಸುತ್ತದೆಯೋ ಅವರು ಜನರು ನನ್ನ ಮೇಲಿಟ್ಟಿರುವ ಪ್ರೀತಿ ನೋಡಲಿ.  ಬಿಗ್​ ಬಾಸ್​ಗೆ ಹೋಗುವುದಕ್ಕೂ ಮುನ್ನ ನಾನು ಜನರ ಅಭಿಪ್ರಾಯ ಬದಲಾಯಿಸಲು ಪ್ರಯತ್ನಿಸುತ್ತಿದ್ದೆ. ಆದರೆ ಈಗ ಎಲ್ಲರನ್ನೂ ಬದಲಾಯಿಸಲು ಆಗಲ್ಲ ಎಂಬುದು ನನಗೆ ಗೊತ್ತಾಗಿದೆ ಎಂದು ಮುನಾವರ್​ ಫಾರೂಖಿ ಹೇಳಿದ್ದಾರೆ. ಅಷ್ಟಕ್ಕೂ ವಿಶೇಷ ಎಂದರೆ ಮುನಾವರ್​ ಅವರು  ಸ್ಟ್ಯಾಂಡಪ್​ ಕಾಮಿಡಿನ್ ಆಗಿದ್ದಾರೆ. ಅವರು ಈ ಹಿಂದೆ ಒಮ್ಮೆ  ಸಲ್ಮಾನ್​ ಖಾನ್​ ಅವರನ್ನು  ಟ್ರೋಲ್ ಮಾಡಿದ್ದರು. ಹಾಗಿದ್ದರೂ ಮುನಾವರ್​  ಗೆದ್ದಿರುವ ಬಗ್ಗೆ ಚರ್ಚೆಯೂ ಶುರುವಾಗಿದೆ. 

30ನೇ ವಯಸ್ಸಲ್ಲೇ ಇಬ್ಬರು ಮಕ್ಕಳ ಅಮ್ಮ ಆಗಬಯಸಿದ್ದ ಸಾಯಿ ಪಲ್ಲವಿ ಇನ್ನೂ ಮದ್ವೆ ಯಾಕಾಗಿಲ್ಲ? ಇಲ್ಲಿದೆ ಕಾರಣ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?